ಸ್ವ ಇಚ್ಛೆಯಿಂದ ಬಸ್ ಓಡಿಸುವವರಿಗೆ ನಾವು ರಕ್ಷಣೆ ಕೊಡುತ್ತೇವೆ: ಸಿಎಂ ಬಿಎಸ್ ವೈ
Team Udayavani, Apr 9, 2021, 4:42 PM IST
ಬೆಂಗಳೂರು: ಅನೇಕ ಜನ ಸಾರಿಗೆ ನೌಕರರು ಬಸ್ ಓಡಿಸಲು ಪ್ರಾರಂಭ ಮಾಡಿದ್ದಾರೆ. ಯಾರನ್ನೂ ಹೆದರಿಸಿ ಬೆದರಿಸಿ ಬಸ್ ಬಿಡುತ್ತಿಲ್ಲ. ಸ್ವಇಚ್ಛೆಯಿಂದ ಯಾರು ಬರುತ್ತಾರೋ ಅವರಿಗೆ ನಾವು ರಕ್ಷಣೆ ಕೊಡುತ್ತೇವೆ. ಯಾರು ಹೆದರ ಬೇಕಿಲ್ಲ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರು ಹಠವನ್ನು ಸಾಧಿಸಿದೇ ಜನರ ಸಮಸ್ಯೆ ಸ್ಪಂದಿಸಿ. ಯಾರದೋ ಮಾತು ಕೇಳಿಕೊಂಡು ಈ ರೀತಿ ಮಾಡಬೇಡಿ. ನಿಮ್ಮ ವಿರುದ್ಧವೇ ಜನರು ಹೋರಾಟ ಮಾಡುವುದನ್ನು ತಪ್ಪಿಸಬೇಕೆಂದರೆ ನೀವು ಬಸ್ ಗಳನ್ನು ಓಡಾಡಿಸಬೇಕು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:
1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ, ಸೇತು ಬಂಧ ಯೋಜನೆ: ಸುರೇಶ್ ಕುಮಾರ್