ವನ್ಯಜೀವಿಗಳ ಪುರಪ್ರವೇಶ; ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಘೀಳು
ಹಳ್ಳಿ ಹಳ್ಳಿಗಳಲ್ಲೂ ಚಿರತೆಗಳ ಹೂಂಕಾರ; ಕರಡಿ, ಹುಲಿ ದಾಳಿಗೆ ಅಮಾಯಕರ ಸಾವು
Team Udayavani, Sep 19, 2022, 7:00 AM IST
ಬೆಂಗಳೂರು: ಕರಾವಳಿಯ ಅಲ್ಲಲ್ಲಿ ಚಿರತೆ, ಕಾಡಾನೆ, ಕಾಡುಕೋಣ ಕಾಟ, ಕೊಡಗಿನಲ್ಲಿ ಹುಲಿ-ಕಾಡಾನೆ ಆತಂಕ, ಬೆಳ ಗಾವಿಯಲ್ಲಿ ಚಿರತೆ ಭೀತಿ, ಕೊಪ್ಪಳದಲ್ಲಿ ಕರಡಿ ದಾಳಿ… ಇಂಥ ಸುದ್ದಿಗಳು ಇತ್ತೀಚೆಗೆ ದಿನವೂ ವರದಿಯಾಗುತ್ತಲೇ ಇವೆ. ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷದ ಸಮಸ್ಯೆಯ ಗಂಭೀರತೆಯನ್ನು ಇದು ತೆರೆದಿಟ್ಟಿದೆ.
ರಾಜ್ಯದ ಹಲವಾರು ಜಿಲ್ಲೆಗಳ ಮಂದಿ ಕಾಡು ಪ್ರಾಣಿಗಳ ಕಾಟದಿಂದ ಬೇಸತ್ತಿದ್ದಾರೆ. ಬೆಳೆ, ತೋಟ ಕಳೆದುಕೊಂಡಿದ್ದಾರೆ. 2020-21ರಲ್ಲಿ 40 ಮಂದಿ ಕಾಡು ಪ್ರಾಣಿ ದಾಳಿಯಿಂದ ಸಾವನ್ನಪ್ಪಿದ್ದಾರೆ.
ವನ್ಯ ಪ್ರಾಣಿಗಳ ಆವಾಸನಾಶ, ಅರಣ್ಯಭೂಮಿಗಳ ಒತ್ತುವರಿ, ಅಭಿವೃದ್ಧಿಯ ಹೆಸರಲ್ಲಿ ಕಾಡು ನಾಶ, ನಗರೀ ಕರಣ, ಕೈಗಾರಿಕೀಕರಣ… ಇವೆಲ್ಲದರ ಫಲ ವೆಂಬಂತೆ “ಕಾಡು-ನಾಡು’ ಎಂಬ ಸಹ ಜೀವನದ ಒಪ್ಪಂದವೇ ಉಲ್ಲಂಘನೆಯಾಗಿ ಬಿಟ್ಟಿದೆ. ಅನಿವಾರ್ಯವಾಗಿ ಕಾಡುಪ್ರಾಣಿಗಳು ನಾಡು ಪ್ರವೇಶಿಸುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಪರಿಸರ ವಾದಿಗಳ ಮಾತು.
ರಾಜ್ಯದ ವಿವಿಧ ಜಿಲ್ಲೆಗಳ ಸದ್ಯದ ಸ್ಥಿತಿಗತಿಯ ಕುರಿತು “ಉದಯವಾಣಿ’ ನಡೆಸಿದ ಸಂಕಲನ
ದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಮಲೆನಾಡಿನ ಜಿಲ್ಲೆಗಳಿಂದ ಹಿಡಿದು, ಉ. ಕರ್ನಾಟಕದ ಬಿಸಿಲು ಜಿಲ್ಲೆಗಳಲ್ಲೂ ಕಾಡು ಪ್ರಾಣಿಗಳ ಕಾಟ ಹೆಚ್ಚಿದೆ. ಅದರಲ್ಲೂ ಚಿರತೆಗಳ “ಪುರಪ್ರವೇಶ’ ಇಡಿ ರಾಜ್ಯವನ್ನು ವ್ಯಾಪಿಸಿದೆ. ಕಳೆದ ಎರಡು ವರ್ಷಗಳಲ್ಲಿ ಚಿರತೆ ದಾಳಿಯ ಘಟನೆ ನಡೆಯದ ದಿನವೇ ಇಲ್ಲ. ಕಾಡಾನೆಗಳು, ಹುಲಿ ಕಾಟವೂ ಹೆಚ್ಚಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮ ರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.
ತಪ್ಪಿಸಿಕೊಂಡ ಹುಲಿ; ಮುಗಿಯದ ಆತಂಕ
ಶನಿವಾರವಷ್ಟೇ ಮಡಿಕೇರಿಯ ಚೆನ್ನಂಗಿ ಬಸವನಹಳ್ಳಿಯ ಕಾಫಿ ತೋಟದಲ್ಲಿ ಹಾದು ಹೋಗಿರುವ ಹುಲಿ ಇನ್ನೂ ಪತ್ತೆಯಾಗಿಲ್ಲ. ಬಾಡಗ, ಬಾಣಂಗಾಲ, ಘಟ್ಟದಳ್ಳ ಭಾಗದಲ್ಲೂ ಹುಲಿ ಸಂಚರಿಸಿದ್ದು, ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿದರೂ ತಪ್ಪಿಸಿಕೊಂಡಿದೆ. ಸತತ 5 ದಿನಗಳಿಂದ ಹುಲಿ ಹಿಡಿಯಲು ನಡೆಸಿರುವ ಪ್ರಯತ್ನಗಳೆಲ್ಲ ವಿಫಲವಾಗಿವೆ. ಬೆಳಗಾವಿ ನಗರದ ಹೊರವಲಯದಲ್ಲಿ ಇತ್ತೀಚೆಗೆ ಚಿರತೆಯೊಂದು ಆಗಾಗ್ಗೆ ಕಾಣಿಸಿಕೊಂಡು ಕಣ್ಣಾಮುಚ್ಚಾಲೆ ಆಟ ಆಡಿತ್ತು. ಚಿರತೆ ದಾಳಿಯ ಭೀತಿಯಿಂದ ಹಲವು ದಿನಗಳ ಕಾಲ ಜನರು ಗೃಹಬಂಧನಕ್ಕೆ ಒಳಗಾಗಿದ್ದರು. ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು. ಸತತ ಪ್ರಯತ್ನಗಳನ್ನು ನಡೆಸಿದರೂ ಕೊನೆಗೂ ಚಿರತೆ ಪತ್ತೆಯಾಗದೆ ಅರಣ್ಯ ಇಲಾಖೆ ಶೋಧ ಕಾರ್ಯವನ್ನೇ ಸ್ಥಗಿತಗೊಳಿಸಿತ್ತು.
ಯಾವ ಜಿಲ್ಲೆಗಳಲ್ಲಿ
ಯಾವ ಪ್ರಾಣಿಗಳ ಕಾಟ?
1. ದಕ್ಷಿಣ ಕನ್ನಡ- ಚಿರತೆ, ಕಾಡಾನೆ, ಕಾಡುಕೋಣ
2. ಚಾಮರಾಜನಗರ- ಕಾಡಾನೆ, ಹುಲಿ, ಚಿರತೆ, ಕೃಷ್ಣಮೃಗ
3. ಚಿಕ್ಕಬಳ್ಳಾಪುರ- ಚಿರತೆ
4. ಹಾಸನ- ಚಿರತೆ, ಕಾಡಾನೆ
5. ಉಡುಪಿ- ಚಿರತೆ, ಕಾಡುಕೋಣ, ಕಾಡೆಮ್ಮೆ, ಕಾಡುಹಂದಿ
6. ಕೊಪ್ಪಳ- ಚಿರತೆ, ಕರಡಿ
7. ಬೆಳಗಾವಿ- ಚಿರತೆ, ಕತ್ತೆಕಿರುಬ, ಕರಡಿ
8. ವಿಜಯಪುರ -ಚಿರತೆ, ಮೊಸಳೆ, ಕತ್ತೆಕಿರುಬ
9. ಚಿಕ್ಕಮಗಳೂರು- ಚಿರತೆ, ಕಾಡಾನೆ
10. ಶಿವಮೊಗ್ಗ – ಚಿರತೆ, ಕಾಡಾನೆ, ಕಾಡೆಮ್ಮೆ, ಕಾಡುಕೋಣ
11. ಬಾಗಲಕೋಟೆ- ಮೊಸಳೆ
12. ರಾಯಚೂರು- ಚಿರತೆ
13. ಕೊಡಗು- ಹುಲಿ, ಚಿರತೆ, ಕಾಡಾನೆ
14. ದಾವಣಗೆರೆ- ಚಿರತೆ
15. ಮೈಸೂರು- ಹುಲಿ, ಚಿರತೆ, ಕಾಡಾನೆ
16. ರಾಮನಗರ- ಕಾಡಾನೆ
17. ಹಾವೇರಿ- ಚಿರತೆ
18. ತುಮಕೂರು- ಚಿರತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
MUST WATCH
ಹೊಸ ಸೇರ್ಪಡೆ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ