ಯಾರು ಜವಾಹಿರಿ?
Team Udayavani, Apr 8, 2022, 6:20 AM IST
ಐಮನ್ ಅಲ್- ಜವಾಹಿರಿ! ಕರ್ನಾಟಕದ ತುಂಬಾ ಈ ಅಲ್ಕಾಯಿದಾ ಉಗ್ರನದ್ದೇ ಮಾತು. “ಅಲ್ಲಾಹು ಅಕ್ಬರ್’ ಕೂಗಿ, ಹಿಜಾಬ್ ಹೋರಾಟಗಾರ್ತಿಯಾಗಿ ಹೊರಹೊಮ್ಮಿದ ಮಂಡ್ಯದ ಹುಡುಗಿಗೆ, ಎಲ್ಲೋ ಅಡಗಿ ಕುಳಿತ ಉಗ್ರನಾಯಕ ಬೆಂಬಲ ಸೂಚಿಸಿದ್ದಾನೆ. ಅಷ್ಟಕ್ಕೂ ಜವಾಹಿರಿ ಯಾರು?
ಈಜಿಪ್ಟ್ ನ ಪಾತಕಿ :
ಮೂಲತಃ ಈಜಿಪ್ಟ್ನ ಉಗ್ರ ಐಮನ್ ಅಲ್- ಜವಾಹಿರಿ, ಪಾಕ್ನಲ್ಲಿ ಅಮೆರಿಕ ಹೊಡೆದುರುಳಿಸಿದ ಒಸಾಮಾ ಬಿನ್ ಲಾಡೆನ್ನ ದೋಸ್ತ್. 2011ರಲ್ಲಿ ಲಾಡೆನ್ನನ್ನು ಅಮೆರಿಕ ಹೊಡೆದುರುಳಿಸಿದಾಗ, ಅಲ್ಖೈದಾ ನಾಯಕತ್ವ ಈ ದುಷ್ಟನ ಹೆಗಲೇರಿತು.
ಮಿಲಿಟರಿ ಡಾಕ್ಟರ್ :
ವೈದ್ಯ ಕುಟುಂಬದಲ್ಲಿ ಹುಟ್ಟಿದ ಜವಾಹಿರಿ, ಓದಿದ್ದು ಕೂಡ ಮೆಡಿಸಿನ್. ಪದ್ಯ ಬರೆಯುವ ಹುಚ್ಚು. ಕೈರೋ ವಿವಿಯಲ್ಲಿ ಓದುವಾಗಲೇ ಇಸ್ಲಾಮ್ ಮೇಲಿನ ದಬ್ಟಾಳಿಕೆ ಖಂಡಿಸಿ, ಪದ್ಯ ಗೀಚುತ್ತಿದ್ದ. ರಾಜಕೀಯ ನಂಟು ಹೊಂದಿದ್ದ ಚಿಕ್ಕಪ್ಪ ಮಾಫೌಝ್ ಅಜಮ್ನಿಂದ ಬ್ರೈನ್ವಾಶ್ ಆಗಿ “ಈಜಿಪ್ಟಿಯನ್ ಇಸ್ಲಾಮಿಕ್ ಜೆಹಾದಿ’ಯ ಹೋರಾಟಗಾರನಾದ. ಈಜಿಪ್ಟ್ನ ಮಿಲಿಟರಿಯಲ್ಲಿ ಸರ್ಜನ್ ಆಗಿದ್ದ. ಸೇನೆ ವಿರುದ್ಧ ಪಿತೂರಿ ರೂಪಿಸಿ ಸಿಕ್ಕಿಬಿದ್ದ.
ಈಗೆಲ್ಲಿದ್ದಾನೆ? :
70 ವರ್ಷದ ಈ ಮುದಿ ಉಗ್ರನೀಗ ಅಫ್ಘಾನ್ನ ವಾಯವ್ಯ ಭಾಗದ ಕುನಾರ್ ಪ್ರಾಂತ್ಯದಲ್ಲಿ ಅಡಗಿದ್ದಾನೆ. ತನ್ನ ಸುತ್ತ ಉಗ್ರ ತುಕಡಿಗಳನ್ನು ಕಾವಲು ಇರಿಸಿಕೊಂಡಿದ್ದಾನೆ.
ಇವನನ್ನು ಪಾಕ್ ಸಾಕಿತ್ತು… :
1995ರಲ್ಲಿ ಪಾಕಿಸ್ಥಾನದಲ್ಲಿ ಈಜಿಪ್ಟ್ನ ರಾಯಭಾರಿ ಕಚೇರಿ ಸ್ಫೋಟ ಈತನಿಗೆ ದೊಡ್ಡ ಟರ್ನಿಂಗ್ ಪಾಯಿಂಟ್. ಪಾಕ್ನಲ್ಲಿದ್ದೇ ಈಜಿಪ್ಟಿಯನ್ ಇಸ್ಲಾಮಿಕ್ ಜೆಹಾದಿಗಳನ್ನು ಎತ್ತಿಕಟ್ಟಿ, ಈಜಿಪ್ಟ್ನಲ್ಲಿ ಬಾಂಬ್ ಸ್ಫೋಟಗಳ ಮೂಲಕ ಮಾರಣಹೋಮ ನಡೆಸಿದ. ಸಾಲು ಸಾಲು ಸಚಿವರನ್ನೇ ಕೊಂದ.
ಜೆಡ್ಡಾದಲ್ಲಿ ಲಾಡೆನ್ ಭೇಟಿ :
1985ರ ಸುಮಾರು. ಸೈನ್ಯ ತೊರೆದು, ಮೆಡಿಸಿನ್ ಅಭ್ಯಾಸದ ನೆಪದಲ್ಲಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಬಂದಾಗ, ಈತನಿಗೆ ಅಲ್ಕಾಯಿದಾ ನಾಯಕ ಒಸಾಮ ಬಿನ್ ಲಾಡೆನ್ ಸಿಕ್ಕಿದ. ಲಾಡೆನ್ನ ಆಪ್ತಸಲಹೆಗಾರನಾಗಿ, ಕೊನೆಯವರೆಗೂ ಅವನ ಆರೋಗ್ಯ ಸೇವೆ ಮಾಡಿಕೊಂಡಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್