
ಸೂಡಾನ್ ಫ್ಯಾಕ್ಟರಿಯಲ್ಲಿ ಬೆಂಕಿ ; 18 ಭಾರತೀಯರು ಸಜೀವ ದಹನ
Team Udayavani, Dec 4, 2019, 5:39 PM IST

ಖರ್ತಾಂವ್ : ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಒಂದಾಗಿರುವ ಸೂಡಾನ್ ನ ರಾಜಧಾನಿ ಖರ್ತಾಂವ್ ಬಹ್ರಿ ಎಂಬ ಪ್ರದೇಶದಲ್ಲಿರುವ ಸಾಲುಮಿ ಸಿರಾಮಿಕ್ ಫ್ಯಾಕ್ಟರಿಯಲ್ಲಿ ಭೀಕರ ಎಲ್.ಪಿ.ಜಿ. ಸ್ಪೋಟ ಸಂಭವಿಸಿದೆ.
ಭೀಕರ ಸ್ಪೋಟದ ಬೆನ್ನಲ್ಲೇ ಕಾಣಿಸಿಕೊಂಡ ಭಾರೀ ಬೆಂಕಿಯ ಜ್ವಾಲೆಗೆ ಇದುವರೆಗೆ ಸುಮಾರು 23 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನೂಕಳವಳಕಾರಿ ವಿಷಯವೆಂದರೆ ಮೃತಪಟ್ಟವರಲ್ಲಿ ಸುಮಾರು 18 ಜನರು ಭಾರತೀಯರೆಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ ಒಟ್ಟಾರೆಯಾಗಿ 130 ಜನರು ಗಾಯಗೊಂಡಿದ್ದಾರೆ.
ಸೂಡಾನ್ ನಲ್ಲಿರುವ ಭಾರತೀಯ ದೂತವಾಸ ಕಛೇರಿಯ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿವೆ. ‘ಸದ್ಯಕ್ಕೆ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ 18 ಜನ ಭಾರತೀಯರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಪ್ಯಾಕ್ಟರಿಯನ್ನು ವ್ಯಾಪಿಸಿಕೊಂಡಿರುವ ಬೆಂಕಿಯಲ್ಲಿ ಹಲವು ಕಾರ್ಮಿಕರು ಕಾಣೆಯಾಗಿರುವ ಕುರಿತಾಗಿಯೂ ಮಾಹಿತಿ ಲಭ್ಯವಾಗಿದ್ದು ಈ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದರಿಂದ ಇವುಗಳ ಪತ್ತೆ ಕಷ್ಟ ಸಾಧ್ಯವಾಗಿದೆ’ ಎಂದು ಭಾರತೀಯ ದೂತವಾಸ ಕಛೇರಿ ಮೂಲಗಳು ತಿಳಿಸಿವೆ.
ಈ ದುರ್ಘಟನೆಯಲ್ಲಿ ಮೃತಪಟ್ಟಿರುವ, ಕಾಣೆಯಾಗಿರುವ ಮತ್ತು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತೀಯ ಕಾರ್ಮಿಕರ ಸಂಪೂರ್ಣ ವಿವರಗಳನ್ನು ಭಾರತೀಯ ದೂತವಾಸ ಕಛೇರಿ ಇಂದು ಪ್ರಕಟಿಸಿದೆ. ಮಾಹಿತಿಗಳ ಪ್ರಕಾರ 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ರಕ್ಷಿಸಲ್ಪಟ್ಟ 34 ಭಾರತೀಯರನ್ನು ಫ್ಯಾಕ್ಟರಿಯ ವಸತಿಗೃಹದಲ್ಲಿ ಇರಿಸಲಾಗಿದೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.
The Embassy representative has rushed to the site. A 24-hour emergency hotline +249-921917471 has been set up by @EoI_Khartoum.
Embassy is also putting out updates on social media.Our prayers are with the workers and their families.
— Dr. S. Jaishankar (@DrSJaishankar) December 4, 2019
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆನಡಾದ ಹಿಂದೂ ದೇವಸ್ಥಾನದಲ್ಲಿ ಭಾರತ ವಿರೋಧಿ ಬರಹಗಳು; ವ್ಯಾಪಕ ಆಕ್ರೋಶ

1000 ಮಂದಿಯ ಕಣ್ಣ ದೃಷ್ಟಿ ಬರಲು ಹಣ ಸಹಾಯ ಮಾಡಿದ ಮಿ.ಬೀಸ್ಟ್ : ಅಂಧರ ಬಾಳಿಗೆ ಬೆಳಕಾದ ಯೂಟ್ಯೂಬರ್

“ಮಾಹಿತಿ ಯುದ್ಧ ನಡೆಸುತ್ತಿದೆ..” ಬಿಬಿಸಿ ಡಾಕ್ಯುಮೆಂಟರಿ ಪ್ರಕರಣದಲ್ಲಿ ಭಾರತದ ಬೆಂಬಲಕ್ಕೆ ನಿಂತ ರಷ್ಯಾ

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

ಬರ್ತ್ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 8 ಮಂದಿ ಸಾವು, 3 ಮಂದಿಗೆ ಗಾಯ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
