40 ದಿನದ ಪಯಣ ಮುಗಿಸಿದ “ಮೇ ಫ್ಲವರ್’; ಕೆನಡಾದ ಹಾಲಿಫಾಕ್ಸ್ ಬಂದರಿನಲ್ಲಿ ಪ್ರಯಾಣ ಅಂತ್ಯ
ಒಂದೂ ಸಿಬ್ಬಂದಿಯಿಲ್ಲದೆ ಸ್ವಯಂಚಾಲಿತವಾಗಿ ಸಾಗಿದ ಹಡಗು
Team Udayavani, Jun 11, 2022, 6:50 AM IST
ಒಟ್ಟಾವಾ: ವಿಶ್ವದ ಮೊದಲ ಸ್ವಯಂಚಾಲಿತ ಹಡಗು ಜೂ. 5ರಂದು ಒಟ್ಟು 40 ದಿನಗಳ ಪ್ರಯಾಣ ಮುಗಿಸಿ, ಭೂ ಪ್ರದೇಶಕ್ಕೆ ವಾಪಸಾಗಿದೆ. ಈ ಹಡಗು ಒಟ್ಟು 5,632 ಕಿ.ಮೀ ಪ್ರಯಣ ಮಾಡಿದೆ.
ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಐಬಿಎಂ ಇತರೆ ಕೆಲವು ಸಂಸ್ಥೆಗಳೊಂದಿಗೆ ಸೇರಿಕೊಂಡು ಈ “ಮೇಫ್ಲವರ್ ಆಟೋನೊಮಸ್ ಶಿಪ್'(ಎಂಎಎಸ್) ತಯಾರಿಸಿದೆ. ಯುನೈಡೆಡ್ ಕಿಂಗ್ಡಂನ ಪೇಮೌತ್ ಕಡಲ ತೀರದಿಂದ ಪ್ರಯಾಣ ಆರಂಭಿಸಿದ್ದ ಹಡಗು ಕೆನಡಾದ ಹ್ಯಾಲಿಫ್ಯಾಕ್ಸ್ ಕಡಲ ತೀರದಲ್ಲಿ ಪ್ರಯಾಣ ಮುಗಿಸಿದೆ. ವಿಶೇಷವೆಂದರೆ ಈ ಹಡಗಿನಲ್ಲಿ ಒಬ್ಬ ಸಿಬ್ಬಂದಿಯೂ ಇರಲಿಲ್ಲ.
ಈ ಹಡಗು 50ಗಿ20 ಅಡಿ ಅಳತೆಯದ್ದಾಗಿದೆ. ಹಡಗಿನ ಮೇಲ್ಭಾಗದಲ್ಲಿ ಸೌರಫಲಕಗಳನ್ನು ಹಾಕಲಾಗಿದ್ದು, ಅದರ ಶಕ್ತಿಯಿಂದಾಗಿ ಹಡಗಿನ ಕಂಪ್ಯೂಟರ್ ಸಿಸ್ಟಂ ಮತ್ತು ಮೋಟಾರುಗಳು ಚಾಲ್ತಿಯಲ್ಲಿದ್ದವು. ಹಡಗು ಗಂಟೆಗೆ 18.52 ಕಿ.ಮೀ ವೇಗದಲ್ಲಿ ಚಲಿಸಿದೆ ಎಂದು ಸಂಸ್ಥೆ ತಿಳಿಸಿದೆ.
“ಈ ಎಂಎಎಸ್ ಹಡಗಿನಲ್ಲಿ ಒಟ್ಟು 6 ಕ್ಯಾಮರಾಗಳು ಹಾಗೂ 30 ಸೆನ್ಸರ್ಗಳನ್ನು ಅಳವಡಿಸಲಾಗಿದೆ.
ಹಡಗಿಗೆ ಸಮುದ್ರದಲ್ಲಿ ಎದುರಾಗಬಲ್ಲ ಎಲ್ಲ ಗಾತ್ರದ ಹಡಗುಗಳು, ಮಂಜುಗಡ್ಡೆಗಳನ್ನು ಎದುರಿಸುವುದಕ್ಕೂ ತರಬೇತಿ ಕೊಡಲಾಗಿತ್ತು. ಆದರೆ 40 ದಿನಗಳ ಪ್ರಯಾಣದಲ್ಲಿ ಯಾವೊಂದು ಹಡಗು, ಮಂಜುಗಡ್ಡೆಯೂ ಈ ಹಡಗಿಗೆ ಎದುರಾಗಲೇ ಇಲ್ಲ’ ಎಂದಿದ್ದಾರೆ ಐಬಿಎಂನ ಪ್ರಮುಖ ತಂತ್ರಜ್ಞ ಆ್ಯಂಡಿ ಸ್ಟಾನ್ಫೋರ್ಡ್.
ಅಂಕಿ-ಅಂಶ
40 ದಿನ
– ಹಡಗು ಸಂಚರಿಸಿದ ಒಟ್ಟು ದಿನಗಳು
5,632 ಕಿ.ಮೀ.
– ಸಮುದ್ರದಲ್ಲಿ ಹಡಗು ಕ್ರಮಿಸಿದ ಒಟ್ಟು ದೂರ
– 6
ಹಡಗಿನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು
30
– ಮೇ ಫ್ಲವರ್ನಲ್ಲಿ ಅಳವಡಿಸಲಾಗಿರುವ ಸೆನ್ಸರ್ಗಳ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು