ಜಗತ್ತಿನ ಹೊಸ ರಾಷ್ಟ್ರದ ಉದಯ

ಬ್ರಿಟನ್‌ ರಾಜಮನೆತನದಿಂದ ಹೊರ ಬಂದ ಬಾರ್ಬಡೋಸ್‌ ; 400 ವರ್ಷಗಳ ಹಿಂದಿನಿಂದಲೂ ರಾಜಮನೆತನದ ಛಾಯೆಯಲ್ಲಿದ್ದ ಕೆರೆಬಿಯನ್‌ ದ್ವೀಪ

Team Udayavani, Dec 1, 2021, 6:20 AM IST

ಜಗತ್ತಿನ ಹೊಸ ರಾಷ್ಟ್ರದ ಉದಯ

ಬ್ರಿಡ್ಜ್ ಟೌನ್‌: ಪ್ರಪಂಚದ ಭೂಪಟದಲ್ಲಿ ಹೊಸ ರಾಷ್ಟ್ರವೊಂದರ ಉದಯವಾಗಿದೆ. ಕೆರೆಬಿಯನ್‌ ದ್ವೀಪ ಸಮೂಹ ಮತ್ತು ಉತ್ತರ ಅಮೆರಿಕ ಖಂಡ ವ್ಯಾಪ್ತಿಯಲ್ಲಿರುವ ಬಾರ್ಬಡೋಸ್‌ ಮಂಗಳವಾರ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ಈ ಮೂಲಕ 400 ವರ್ಷಗಳಿಂದ ಬ್ರಿಟನ್‌ ರಾಜಮನೆತನದ ಆಳ್ವಿಕೆಯ ಛಾಯೆಯಿಂದ ಅದು ಹೊರಬಂದಿದೆ.

ಬಾರ್ಬಡೋಸ್‌ನ ಮೊದಲ ಅಧ್ಯಕ್ಷೆಯಾಗಿ ಡಾಮ್‌ ಸಾಂಡ್ರಾ ಮಾಸೆನ್‌ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜತೆಗೆ ಸಾಂಪ್ರದಾಯಿಕ 21 ಕುಶಾಲುತೋಪು ಹಾರಿಸಿ ಗೌರವವನ್ನೂ ಸಲ್ಲಿಸಲಾಗಿದೆ. ಬ್ರಿಟನ್‌ ರಾಜಮನೆತನದ ಹಾಲಿ ರಾಣಿ ಎರಡನೇ ಎಲಿಜಬೆತ್‌ ಕೂಡ ಹೊಸ ರಾಷ್ಟ್ರದ ಉದಯಕ್ಕೆ ಸಂತಸ ವ್ಯಕ್ತಪಡಿಸಿ, ಶುಭ ಹಾರೈಕೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಮಾತನಾಡಿ ಸಾಂಡ್ರಾ ಮಾಸೆನ್‌ “ದೇಶದ ಜನರಿಗೆ ಅರ್ಹವಾಗಿಯೇ ಸ್ವಾತಂತ್ರ್ಯ ಸಂದಿದೆ’ ಎಂದು ಹೇಳಿದ್ದಾರೆ.

400 ವರ್ಷ ಗಳ ಬಳಿಕ…
ಇತಿಹಾಸದ ಪ್ರಕಾರ 1625ರಲ್ಲಿ ಬಾರ್ಬಡೋಸ್‌ ದ್ವೀಪಕ್ಕೆ ಬ್ರಿಟಿಷರ ಹಡಗುಗಳು ಪ್ರವೇಶ ಮಾಡಿ ಅಧಿಪತ್ಯ ಸ್ಥಾಪಿಸಿದ್ದವು. ನಂತರದ ಶತಮಾನಗಳಲ್ಲಿ ಅದು ಬ್ರಿಟನ್‌ ರಾಜಮನೆತನದ ಆಡಳಿತಕ್ಕೆ ಒಳಪಟ್ಟಿತ್ತು. 1966 ನ.30ರಂದು ಅದಕ್ಕೆ ಸ್ವಾತಂತ್ರ್ಯ ಬಂದರೂ, 54 ಕಾಮನ್ವೆಲ್ತ್‌ ರಾಷ್ಟ್ರಗಳ ವ್ಯಾಪ್ತಿಯಲ್ಲಿಯೇ ಇತ್ತು. ದ್ವೀಪಕ್ಕೆ ಇಂಗ್ಲಿಷರ ಮೊದಲ ಹಡಗು ಬಂದು ಸರಿಯಾರಿ 400 ವರ್ಷಗಳ ಬಳಿಕ ಬಾರ್ಬಡೋಸ್‌ ಬ್ರಿಟನ್‌ ರಾಜಮನೆತನದ ಛಾಯೆಯಿಂದ ಹೊರಬರುವ ಘೋಷಣೆ ಮಾಡಿಕೊಂಡಿದೆ.

ಇದನ್ನೂ ಓದಿ:ನನಗೇನಾದರೂ ಆದರೆ ಅವರೇ ಕಾರಣ: ಕಂಗನಾ

ಅಧಿಕಾರ ಹಸ್ತಾಂತರ ಆಗಿದ್ದು ಹೇಗೆ?
ದೇಶದ ಧ್ವಜ, ಕೋಟ್‌ ಆಫ್ ಆರ್ಮ್ಸ್, ರಾಷ್ಟ್ರಗೀತೆಗಳನ್ನು ಬದಲಿಸುವ ಯಾವುದೇ ನಿರ್ಧಾರ ಮಾಡಿಲ್ಲ. ಬದಲಿಗೆ, ಎಲ್ಲ ಅಧಿಕೃತ ಪ್ರಕಟಣೆಗಳಲ್ಲಿ “ರಾಯಲ್‌’, “ಕ್ರೌನ್‌’ ಎಂಬ ಪದ ಬಳಕೆಯನ್ನು ಕೈಬಿಡಲಾಗುತ್ತದೆ. ಅಂದರೆ, “ರಾಯಲ್‌ ಬಾರ್ಬ ಡೋಸ್‌ ಪೊಲೀಸ್‌ ಫೋರ್ಸ್‌’ ಇನ್ನು ಮುಂದೆ “ಬಾರ್ಬ ಡೋಸ್‌ ಪೊಲೀಸ್‌ ಫೋರ್ಸ್‌’ ಎಂದೂ, “ಕ್ರೌನ್‌ ಲ್ಯಾಂಡ್ಸ್‌’ ಇನ್ನು ಮುಂದೆ “ಸ್ಟೇಟ್‌ ಲ್ಯಾಂಡ್ಸ್‌’ ಎಂದೂ ಕರೆ ಯಲ್ಪಡುತ್ತವೆ. ಪ್ರತಿ ವರ್ಷ ನ.30ರಂದು ದೇಶ ಸ್ವಾತಂತ್ರ್ಯ ದಿನ ಆಚರಿಸಲಿದೆ.

 

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

ISREL

Hamas ದಾಳಿ ತಡೆಗೆ ವಿಫ‌ಲ: ಇಸ್ರೇಲ್‌ ಸೇನಾ ಗುಪ್ತಚರ ಮುಖ್ಯಸ್ಥ ರಾಜೀನಾಮೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.