![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಚಂದ್ರನ ಹಿಂಭಾಗದ ಅಧ್ಯಯನ ಮಾಡಿದ ಚೀನದ ಚೇಂಜ್ 4
Team Udayavani, May 17, 2019, 6:00 AM IST
![32](https://www.udayavani.com/wp-content/uploads/2019/05/32-11-620x348.jpg)
ಬೀಜಿಂಗ್: ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದಲ್ಲಿ ಇಳಿದ ಚೀನದ ಚೇಂಜ್ 4 ರೋವರ್ ಯುತು ಮಹತ್ವದ ಅಧ್ಯಯನಗಳನ್ನು ನಡೆಸಿದೆ. ಇಲ್ಲಿನ ರಾಸಾಯನಿಕ ಹಾಗೂ ಖನಿಜ ಗುಣಲಕ್ಷಣಗಳ ವಿವರಗಳನ್ನೂ ಭೂಮಿಗೆ ಕಳುಹಿಸಿದೆ. ಇದು ಭೂಮಿ ಹಾಗೂ ಇತರ ನೈಸರ್ಗಿಕ ಉಪಗ್ರಹಗಳ ಉಗಮದ ಬಗ್ಗೆ ಆಳ ಅಧ್ಯಯನಕ್ಕೆ ನೆರವಾಗಲಿದೆ.
ಜನವರಿಯಲ್ಲಿ ಯುತು 2 ಚಂದ್ರನ ಮೇಲೆ ಇಳಿದಿತ್ತು. ಯುತುವಿನಲ್ಲಿ ಅಳವಡಿಸಿದ ಇನ್ಫ್ರಾರೆಡ್ ಸ್ಪೆಕ್ಟ್ರೋ ಮೀಟರ್ ಬಳಸಿ ಶೋಧ ನಡೆಸಿದ ವಿಜ್ಞಾನಿಗಳಿಗೆ ಚೇಂಜ್ 4 ಲ್ಯಾಂಡ್ ಆದ ಭಾಗದಲ್ಲಿನ ಚಂದ್ರನ ಮಣ್ಣಿನಲ್ಲಿ ಒಲಿವಿನ್ ಹಾಗೂ ಪೈರಾಕ್ಸಿನ್ ಅಂಶ ಗಳು ಇರುವುದು ಕಂಡುಬಂದಿದೆ. ಈ ಬಗ್ಗೆ ಸಮಗ್ರ ವಿವರಗಳನ್ನು ನೇಚರ್ ನಿಯತಕಾಲಿಕೆಯಲ್ಲಿ ವಿವರಿಸಲಾಗಿದೆ.
ಚಂದ್ರನ ಮೇಲ್ಮೆ„ ರಚನೆ ಭೂಮಿಯಂತೆಯೇ ಇದೆ. ಮೇಲಿನ ಪದರ ಮಣ್ಣಿನಂತಿದ್ದು, ನಂತರದ ಪದರದಲ್ಲಿ ಒಲಿವಿನ್ ಹಾಗೂ ಪೈರಾಕ್ಸಿನ್ ಇದೆ. ಇದು ಕೆಳ ಪದರಗಳನ್ನು ಗಟ್ಟಿಯಾಗಿಸಿದೆ ಎಂದು ಸಂಶೋಧಕ ಲಿ ಚುನ್ಲ„ ಹೇಳಿ ದ್ದಾರೆ. ಈ ಮೇಲ್ಮೆ„ ಮಣ್ಣಿನ ಪದರವು ತುಂಬಾ ಗಟ್ಟಿಯಾಗಿದ್ದುದರಿಂದ ಯಾವುದೇ ರಾಸಾಯನಿಕ ಚಟುವಟಿಕೆ ನಡೆಯುತ್ತಿಲ್ಲ. ಅಲ್ಲದೆ ಪದರಗಳ ಚಲನೆಯೂ ಕೋಟ್ಯಂತರ ವರ್ಷಗಳಿಂದ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಚೀನದ ಯುತು ಲ್ಯಾಂಡರ್ ವಾನ್ ಕರ್ಮನ್ ಎಂಬ ಕುಳಿಯಲ್ಲಿ ಇಳಿದಿದ್ದು, ಈ ಕುಳಿ ಸುಮಾರು 2300 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದು ಚಂದ್ರನ ಕಾಲು ಭಾಗವನ್ನು ಒಳಗೊಂಡಿದೆ.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.