35 ದಿನ; 60,000 ಮಂದಿ ಬಲಿ! ಚೀನದಿಂದ ಮೊದಲ ಬಾರಿಗೆ ಕೋವಿಡ್ ಸಾವಿನ ಸಂಖ್ಯೆ ಬಹಿರಂಗ


Team Udayavani, Jan 15, 2023, 7:20 AM IST

35 ದಿನ; 60,000 ಮಂದಿ ಬಲಿ! ಚೀನದಿಂದ ಮೊದಲ ಬಾರಿಗೆ ಕೋವಿಡ್ ಸಾವಿನ ಸಂಖ್ಯೆ ಬಹಿರಂಗ

ಬೀಜಿಂಗ್‌: ಚೀನದಲ್ಲಿ ಕೊರೊನಾ ಅಟ್ಟಹಾಸ ಮರುಕಳಿಸಿದ ಬಳಿಕ ಒಂದೇ ತಿಂಗಳ ಅವಧಿಯಲ್ಲಿ 60 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ!

ಚೀನ ಸರ್ಕಾರವು ಕೊರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ದೈನಂದಿನ ಮಾಹಿತಿಯನ್ನು ಬಹಿರಂಗಪಡಿಸಲೇಬೇಕು ಎಂದು ತಾಕೀತು ಮಾಡಿತ್ತು.

ಅದರಂತೆ, ಇದೇ ಮೊದಲ ಬಾರಿಗೆ ಚೀನಾ ಬಾಯಿಬಿಟ್ಟಿದೆ. 2022ರ ಡಿ.9ರಿಂದ 2023ರ ಜ.12ರವರೆಗೆ 60 ಸಾವಿರ ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಚೀನ ಸರ್ಕಾರ ಮಾಹಿತಿ ನೀಡಿದೆ.

ಈ ಪೈಕಿ 5,503 ಮಂದಿ ಉಸಿರಾಟದ ಸಮಸ್ಯೆಯಿಂದ ಅಸುನೀಗಿದರೆ, 54,435 ಮಂದಿ ಕೊರೊನಾದೊಂದಿಗೆ ಇತರೆ ಕಾಯಿಲೆಗಳು ಉಲ್ಬಣಗೊಂಡು ಮೃತಪಟ್ಟಿದ್ದಾರೆ ಎಂದು ಚೀನದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಅಲ್ಲದೆ, ಇದು ಕೇವಲ ಆಸ್ಪತ್ರೆಯಲ್ಲಿ ಮೃತಪಟ್ಟಿರುವವರ ದತ್ತಾಂಶವಾಗಿದ್ದು, ಮನೆಯಲ್ಲಿ ಕೊನೆಯುಸಿರೆಳೆದವರ ಮಾಹಿತಿಯನ್ನು ಸೇರಿಸಿಲ್ಲ ಎಂದೂ ಸ್ಪಷ್ಟಪಡಿಸಿದೆ. ಹೀಗಾಗಿ, ಚೀನದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ವಾಸ್ತವದಲ್ಲಿ ಮತ್ತಷ್ಟು ಹೆಚ್ಚಿರುವ ಸಾಧ್ಯತೆಯಿದೆ. 60 ಸಾವಿರ ಮಂದಿಯ ಪೈಕಿ ಶೇ.90ರಷ್ಟು ಮಂದಿ 65 ವರ್ಷ ದಾಟಿದವರು ಎಂದೂ ಹೇಳಲಾಗಿದೆ.

90 ಕೋಟಿ ಮಂದಿಗೆ ಸೋಂಕು!
ಜ.11ರವರೆಗೆ ಚೀನದಲ್ಲಿ ಬರೋಬ್ಬರಿ 90 ಕೋಟಿ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅಂದರೆ, ದೇಶದ ಒಟ್ಟು ಜನಸಂಖ್ಯೆಯ ಶೇ.60ರಷ್ಟು ಮಂದಿ ಸೋಂಕಿತರಾಗಿದ್ದಾರೆ ಎಂದು ಚೀನದ ಪೆಕಿಂಗ್‌ ವಿವಿ ಅಧ್ಯಯನ ವರದಿ ತಿಳಿಸಿದೆ. ಸೋಂಕಿನ ಉತ್ತುಂಗದ ಅವಧಿ ಇನ್ನೂ 2-3 ತಿಂಗಳು ಮುಂದುವರಿಯಲಿದೆ. ಗ್ರಾಮೀಣ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ವ್ಯಾಪಿಸಲಿದೆ ಎಂದೂ ವರದಿ ಹೇಳಿದೆ.

ಟಾಪ್ ನ್ಯೂಸ್

1-asasa

Doordarshan ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ವಿಧಿವಶ

rain

ಬಿಪೊರ್ ಜಾಯ್ ಚಂಡಮಾರುತ: ಕರಾವಳಿಯಲ್ಲಿ ಎಚ್ಚರ ವಹಿಸಲು ಸೂಚನೆ

1-wewqew

Manipur ಆಂಬ್ಯುಲೆನ್ಸ್‌ಗೆ ದುಷ್ಕರ್ಮಿಗಳಿಂದ ಬೆಂಕಿ; 8 ವರ್ಷದ ಬಾಲಕ ಸೇರಿ ಮೂವರು ಬಲಿ

1-kabini

Kabini ಹಿನ್ನೀರಲ್ಲಿ 3.5 ಟನ್‌ ತ್ಯಾಜ್ಯ ಸಂಗ್ರಹಿಸಿದ ಅರಣ್ಯ ಸಿಬಂದಿ, ಸ್ವಯಂಸೇವಕರು

1-sadasd

Wrestlers ಪ್ರತಿಭಟನೆ ಜೂನ್ 15 ರವರೆಗೆ ಸ್ಥಗಿತಕ್ಕೆ ಒಪ್ಪಿಗೆ; ಕಾಯುವಂತೆ ಸರ್ಕಾರ ಒತ್ತಾಯ

sunil-kkl

Education ಗುಲಾಮಿ ಚಿಂತನೆಯನ್ನು ತುರುಕುತ್ತೀರಾ?:ಸಿಎಂ ಸಿದ್ದರಾಮಯ್ಯರಿಗೆ ಸುನಿಲ್ ಪ್ರಶ್ನೆ

BJP Symbol

2024 Election; ಬಿಜೆಪಿಯ ಎನ್‌ಡಿಎ ವಿಸ್ತರಣೆ ಅಜೆಂಡಾ ಕಾರ್ಯಗತವಾಗಬಹುದೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

constellations

ಒಂದೇ ಚಿತ್ರದಲ್ಲಿ 45,000 ನಕ್ಷತ್ರಪುಂಜಗಳು

RUSSIA DAM

DAM ಮೇಲೆ ರಷ್ಯಾ ದಾಳಿ? ಉಕ್ರೇನ್‌ಗೆ ಪ್ರವಾಹ ಭೀತಿ

Taiwan Strait; ಅಮೆರಿಕ ನೌಕೆಗೆ ಢಿಕ್ಕಿ: ಚೀನ ಪ್ರಯತ್ನ?

Taiwan Strait; ಅಮೆರಿಕ ನೌಕೆಗೆ ಢಿಕ್ಕಿ: ಚೀನ ಪ್ರಯತ್ನ?

PM Modi ಭವಿಷ್ಯದ ಬಗ್ಗೆ ಮಾತಾಡಲ್ಲ: ರಾಹುಲ್‌ ಗಾಂಧಿ

PM Modi ಭವಿಷ್ಯದ ಬಗ್ಗೆ ಮಾತಾಡಲ್ಲ: ರಾಹುಲ್‌ ಗಾಂಧಿ

Washington; ಅಮೆರಿಕ ವಿಮಾನ ಪತನ: 4 ಸಾವು

Washington; ಅಮೆರಿಕ ವಿಮಾನ ಪತನ: 4 ಸಾವು

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

1-scrain

ಕುಳಗೇರಿ ಕ್ರಾಸ್: ಕ್ರೇನ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

1-asasa

Doordarshan ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ವಿಧಿವಶ

rain

ಬಿಪೊರ್ ಜಾಯ್ ಚಂಡಮಾರುತ: ಕರಾವಳಿಯಲ್ಲಿ ಎಚ್ಚರ ವಹಿಸಲು ಸೂಚನೆ

1-wewqew

Manipur ಆಂಬ್ಯುಲೆನ್ಸ್‌ಗೆ ದುಷ್ಕರ್ಮಿಗಳಿಂದ ಬೆಂಕಿ; 8 ವರ್ಷದ ಬಾಲಕ ಸೇರಿ ಮೂವರು ಬಲಿ

1——–asasdasd

Gangavathi ನಗರಸಭೆ ಸಾಮಾನ್ಯಸಭೆ: ಶಾಸಕ ರೆಡ್ಡಿ ಅವರಿಂದ ಅಧಿಕಾರಿಗಳ ತರಾಟೆ