
ಬೆಚ್ಚಿ ಬೀಳಿಸುವ ಘಟನೆ: ಸತ್ತ ಮೊಸಳೆಯ ಹೊಟ್ಟೆಯಲ್ಲಿತ್ತು ಬಾಲಕನ ದೇಹದ ಭಾಗಗಳು
Team Udayavani, Nov 30, 2022, 1:38 PM IST

ನ್ಯೂಯಾರ್ಕ್: ನೀರಿನಲ್ಲಿರುವ ಅತ್ಯಂತ ಅಪಾಯಕಾರಿ ಪ್ರಾಣಿಯೆಂದರೆ ಮೊಸಳೆ ಹಾಗಾಗಿ ಕಾಡು ಪ್ರಾಣಿಗಳು ತಮ್ಮ ದಾಹ ತಣಿಯಲು ನೀರು ಕುಡಿಯುವ ವೇಳೆ ಮೊಸಳೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಸಜ್ಜಾಗಿ ನೀರು ಕುಡಿಯುತ್ತವೆ, ಯಾವ ಹೊತ್ತಿಗೆ ಮೊಸಳೆ ದಾಳಿ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಕಾಡು ಪ್ರಾಣಿಗಳು ಭಯದಿಂದಲೇ ನೀರು ಕುಡಿಯುತ್ತವೆ. ಆದರೆ ಇದೀಗ ಕೋಸ್ಟರಿಕಾದ ಮಟಿನಾ ನದಿಯಲ್ಲಿ ಬೇಟೆಗಾರನೊಬ್ಬ ಬೇಟೆಯಾಡಿದ ಮೊಸಳೆಯ ಹೊಟ್ಟೆಯೊಳಗೆ ಬಾಲಕನ ದೇಹದ ಅವಶೇಷಗಳು ಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿವೆ.
ಕಳೆದ ತಿಂಗಳು ಅಕ್ಟೋಬರ್ 30 ರಂದು ಜೂಲಿಯೊ ಒಟೆರೊ ಫೆರ್ನಾಂಡಿಸ್ ಎಂಬ ಬಾಲಕ ತನ್ನ ಪೋಷಕರು ಹಾಗೂ ಸಂಬಂಧಿಕರ ಜೊತೆ ಕೋಸ್ಟರಿಕಾದ ಲಿಮನ್ ನಗರದಲ್ಲಿರುವ ಮಟಿನಾ ನದಿಯ ದಡಕ್ಕೆ ತೆರಳಿದ್ದಾರೆ ಈ ವೇಳೆ ಪೋಷಕರು ನದಿಯಲ್ಲಿ ಮೀನು ಹಿಡಿಯುತಿದ್ದರೆ ಜೂಲಿಯೊ ಓಟೆರೊ ನದಿ ನೀರಿನಲ್ಲಿ ಆಟವಾಡುತ್ತಿದ್ದ, ಆದರೆ ಇವರಿಗೆ ಈ ನದಿಯಲ್ಲಿ ಮೊಸಳೆ ಇರುವುದು ಗೊತ್ತಿರಲಿಲ್ಲ, ದುರದೃಷ್ಟವಶಾತ್ ನದಿಯಲ್ಲಿದ್ದ ಮೊಸಳೆ ಪೋಷಕರ ಎದುರೇ ಬಾಲಕನ ಮೇಲೆ ದಾಳಿ ಮಾಡಿ ನೀರಿನೊಳಗೆ ಎಳೆದೊಯ್ದಿದೆ ಇದನ್ನು ಕಂಡ ಪೋಷಕರು ಕಂಗಾಲಾಗಿದ್ದಾರೆ, ಒಮ್ಮೆಗೆ ಏನು ಮಾಡಬೇಕೆನ್ನುವುದೇ ಅವರಿಗೆ ತೋಚಲಿಲ್ಲ, ಬಳಿಕ ಕೆಲವು ಹೊತ್ತಿನ ಬಳಿಕ ಬಾಲಕನನ್ನು ನೀರಿನ ಮೇಲೆ ಎಳೆ ತಂದ ಮೊಸಳೆ ಮತ್ತೊಮ್ಮೆ ಬಾಲಕನ ತಲೆಯನ್ನೇ ತುಂಡರಿಸಿ ನೀರಿನೊಳಗೆ ಎಳೆದೊಯ್ದಿದಿತ್ತು.
ಇದಾದ ಒಂದು ತಿಂಗಳ ಬಳಿಕ ಅಂದರೆ ನವೆಂಬರ್ 26 ರಂದು ಬೇಟೆಗಾರನೊಬ್ಬ ಇದೆ ನದಿಯಲ್ಲಿ ಮೊಸಳೆಯನ್ನು ಬೇಟೆಯಾಡಿದ್ದಾನೆ ಆದರೆ ಪ್ರಾಣಿ ಬೇಟೆ ಅಪರಾಧವಾಗಿರುವುದರಿಂದ ಹೆದರಿದ ಬೇಟೆಗಾರ ಮೊಸಳೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ, ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮೊಸಳೆಯ ಹೊಟ್ಟೆ ಸೀಳಿದಾಗ ಹೊಟ್ಟೆಯೊಳಗೆ ಮಾನವ ದೇಹದ ಅವಶೇಷಗಳು ಪತ್ತೆಯಾಗಿವೆ. ಇದೆಲ್ಲವನ್ನು ಕಂಡಾಗ ತಿಂಗಳ ಹಿಂದೆ ಮೊಸಳೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಜೂಲಿಯೊ ಒಟೆರೊ ಫೆರ್ನಾಂಡಿಸ್ ಅವನ ದೇಹದ ಭಾಗಗಳೇ ಇರಬಹುದು ಎಂದು ಹೇಳಲಾಗಿದೆ. ಸದ್ಯ ಅಧಿಕಾರಿಗಳ ತಂಡ ಮೊಸಳೆಯ ಹೊಟ್ಟೆಯಲ್ಲಿ ಸಿಕ್ಕಿದ, ತಲೆಕೂದಲು, ಎಲುಬುಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್ಸಿನ ಬ್ರೇಕ್ ಫೇಲ್… ಚಾಲಕನ ಸಮಯ ಪ್ರಜ್ಞೆ, ತಪ್ಪಿದ ದುರಂತ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀಲಂಕಾದಂತೆಯೇ ದಿವಾಳಿಯಾಗುವಂಚಿಗೆ ಪಾಕ್

ಹೆಚ್ಚುತ್ತಿದೆ ದೇಗುಲ ದಾಳಿ; ಖಲಿಸ್ಥಾನ ಪ್ರತ್ಯೇಕತಾವಾದಿಗಳ ಉಪಟಳ

ಕೆನಡಾದ ಹಿಂದೂ ದೇವಸ್ಥಾನದಲ್ಲಿ ಭಾರತ ವಿರೋಧಿ ಬರಹಗಳು; ವ್ಯಾಪಕ ಆಕ್ರೋಶ

1000 ಮಂದಿಯ ಕಣ್ಣ ದೃಷ್ಟಿ ಬರಲು ಹಣ ಸಹಾಯ ಮಾಡಿದ ಮಿ.ಬೀಸ್ಟ್ : ಅಂಧರ ಬಾಳಿಗೆ ಬೆಳಕಾದ ಯೂಟ್ಯೂಬರ್

“ಮಾಹಿತಿ ಯುದ್ಧ ನಡೆಸುತ್ತಿದೆ..” ಬಿಬಿಸಿ ಡಾಕ್ಯುಮೆಂಟರಿ ಪ್ರಕರಣದಲ್ಲಿ ಭಾರತದ ಬೆಂಬಲಕ್ಕೆ ನಿಂತ ರಷ್ಯಾ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಸಲ್ಮಾನ್ ಖಾನ್ ಗೆ ಸಿನಿಮಾ ಆಫರ್ ಕೊಟ್ಟ ಆಮಿರ್: ನಿರ್ಮಾಪಕರಾಗಿ ಕಂಬ್ಯಾಕ್ ಮಾಡ್ತಾರ ಮಿ.ಪರ್ಫೆಕ್ಟ್?

ಜಾನಪದ ಕಲೆಗೆ ವಿಶೇಷ ಒತ್ತು ಅಗತ್ಯ

ದಳಪತಿ 67ನೇ ಸಿನಿಮಾಕ್ಕೆ ನಾಯಕಿಯಾಗಿ ತ್ರಿಷಾ ಆಯ್ಕೆ: 14 ವರ್ಷದ ಬಳಿಕ ಒಂದೇ ಸ್ಕ್ರೀನ್ ನಲ್ಲಿ ನಟನೆ

5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ತಲುಪಲು ಈ ಬಜೆಟ್ ಸಹಕಾರಿ: ರಾಜನಾಥ್ ಸಿಂಗ್

Union Budget 2023: ಪೊಲ್ಯೂಟಿಂಗ್ ಪದದ ಬದಲು ಓಲ್ಡ್ ಪಾಲಿಟಿಕಲ್ ಎಂದ ಸಚಿವೆ ನಿರ್ಮಲಾ: ಸದನದಲ್ಲಿ ನಗೆಯ ಅಲೆ!