ಪಾಕ್ ಮಕ್ಕಳ ಭವಿಷ್ಯ ಬಲಿ! ಐಶಾರಾಮಿ ಆಮದು ತೆರಿಗೆ ಹೆಚ್ಚಳ
Team Udayavani, Feb 25, 2023, 7:15 AM IST
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗು ವಂತಾಗಿದ್ದು, ತುತ್ತು ಅನ್ನಕ್ಕಾಗಿ ಮಕ್ಕಳು ಕೂಡ ಪೋಷಕರೊಂದಿಗೆ ಕೂಲಿ ಮಾಡುವ ಪರಿಸ್ಥಿತಿ ಎದುರಾಗಿದೆ.
ಮೊಹಮ್ಮದ್ ಅಮೀನ್ ಎನ್ನುವ ಪಾಕ್ ನಿವಾಸಿ, ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿ ಕೊಂಡಿದ್ದು, ಆರ್ಥಿಕ ಸಂಕಷ್ಟ ದಿಂದಾಗಿ 5ನೇ ತರಗತಿ ಓದುತ್ತಿರುವ ತನ್ನ ಮಗಳು ನಾದಿಯಾಳನ್ನು ಶಾಲೆ ಬಿಡಿಸಿ, ಆಕೆಯ ತಾಯಿಯೊಂದಿಗೆ ಮನೆಗೆಲಸಕ್ಕೆ ಕಳು ಹಿಸುತ್ತಿರುವುದಾಗಿ ಹೇಳಿಕೊಂಡಿ ದ್ದಾರೆ. ಪರಿಸ್ಥಿತಿ ಮುಂದು ವರಿದರೆ 13 ವರ್ಷದ ತಮ್ಮ ಇನ್ನೊಬ್ಬ ಮಗಳನ್ನೂ ಶಾಲೆ ಬಿಡಿಸ ಬೇಕಾದ ಪರಿಸ್ಥಿತಿ ಬರಬಹುದು ಎಂದು ಕಣ್ಣೀರಿಟ್ಟಿದ್ದಾರೆ. ಪಾಕಿಸ್ತಾನದ ಹಲವು ಪೋಷಕರ ಸ್ಥಿತಿಯೂ ಇದುವೇ ಆಗಿದೆ.
ಗಡಿ ನಿರ್ಬಂಧ ರಫ್ತು ಸಂಕಷ್ಟ: ಅಫ್ಘಾನಿಸ್ತಾನದ ಜತೆಗಿನ ಪಾಕಿಸ್ತಾನದ ಸಮರದಿಂದಾಗಿ ಪಾಕ್ ಸರ್ಕಾರಿ ಟೋರ್ಕಾಮ್ ಗಡಿಯನ್ನು ನಿರ್ಬಂಧಿಸಿದೆ. ಇದರಿಂದ ಆಫ^ನ್ ಹಾಗೂ ಮಧ್ಯ ಏಷ್ಯಾ ದೇಶಗಳಿಗೆ ತೆರಳಬೇಕಿದ್ದ ಕೋಟ್ಯಂತರ ಮೌಲ್ಯದ ರಫ್ತು ಸ್ಥಗಿತ ಗೊಂಡಿದ್ದು, ಉದ್ಯಮಿಗಳು ಮತ್ತು ರಫ್ತು ದಾರರು ಸಂಕಷ್ಟ ಎದುರಿಸುವಂತಾಗಿದೆ.
ಐಶಾರಾಮಿ ಆಮದು ತೆರಿಗೆ ಹೆಚ್ಚಳ
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ ಸಾಲ ಪಡೆಯಲು ವಿಧಿಸಿರುವ ಷರತ್ತಿನಂತೆ ತೆರಿಗೆ ಸಂಗ್ರಹ ಹೆಚ್ಚಿಸಲು ಮುಂದಾಗಿರುವ ಪಾಕ್, ಐಶಾರಾಮಿ ವಸ್ತುಗಳು ಹಾಗೂ ಸೇವಾ ಸರಕುಗಳ ಆಮದಿನ ಮೇಲಿನ ತೆರಿಗೆ ಶುಲ್ಕವನ್ನು ಶೇ.17 ರಿಂದ ಶೇ.25ಕ್ಕೆ ಏರಿಕೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ