ವಿಶ್ವಸಂಸ್ಥೆಯಲ್ಲಿ “ಕಾಶ್ಮೀರ’ ಅಜೆಂಡಾ: ಸೋಲೊಪ್ಪಿಕೊಂಡ ಪಾಕ್ ವಿದೇಶಾಂಗ ಸಚಿವ ಬಿಲಾವಲ್
Team Udayavani, Mar 12, 2023, 7:20 AM IST
ಇಸ್ಲಾಮಾಬಾದ್: ಪದೇ ಪದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಆಂತರಿಕ ವಿಚಾರವನ್ನೆತ್ತಿ ಕೊನೆಗೆ ಭಾರತದ ಖಡಕ್ ಪ್ರತ್ಯುತ್ತರದಿಂದ ಬೆಚ್ಚಿ ಬೀಳುವ ಪಾಕಿಸ್ತಾನ ಈ ಬಾರಿಯೂ ಅದೇ ಸ್ಥಿತಿ ಎದುರಿಸಿದೆ.
ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ತಿರುಗೇಟಿಗೆ ನಡುಗಿರುವ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, “ಭಾರತದ ರಾಜತಾಂತ್ರಿಕ ಪ್ರಯತ್ನದಿಂದಾಗಿ ಕಾಶ್ಮೀರವನ್ನು ” ವಿಶ್ವಸಂಸ್ಥೆಯ ಪ್ರಮುಖ ಅಜೆಂಡಾ’ವಾಗಿ ಮಾರ್ಪಡಿಸುವಲ್ಲಿ ಪಾಕಿಸ್ತಾನವು ವಿಫಲವಾಯಿತು’ ಎಂದು ಹೇಳಿಕೊಂಡಿದ್ದಾರೆ.
ಶನಿವಾರ ಈ ಕುರಿತು ಮಾತನಾಡಿದ ಭುಟ್ಟೋ, “ನಾವು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದಾಗಲೆಲ್ಲ ನೆರೆರಾಷ್ಟ್ರವು ಕಟುವಾಗಿ ಖಂಡಿಸುತ್ತದೆ. ಇದು ವಿಶ್ವಸಂಸ್ಥೆಯು ಗಮನಿಸಬೇಕಾದ ವಿವಾದವೇ ಅಲ್ಲ ಎಂದು ವಾದಿಸುತ್ತದೆ. ಕಾಶ್ಮೀರ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯವು ಗುರುತಿಸಿರುವ ವಿವಾದಿತ ಪ್ರದೇಶವೇ ಅಲ್ಲ ಎಂದು ಹೇಳುತ್ತದೆ. ಹೀಗಾಗಿ, ನಾವು ಎಷ್ಟೇ ಪ್ರಯತ್ನಿಸಿದರೂ ಸತ್ಯವನ್ನು ಒತ್ತಿಹೇಳಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.
ವಿಶೇಷವೆಂದರೆ, ಬಿಲಾವಲ್ ಭುಟ್ಟೋ ಅವರು ಈ ಹೇಳಿಕೆ ನೀಡುವಾಗ ಮೊದಲಿಗೆ ಭಾರತವನ್ನು “ಮಿತ್ರರಾಷ್ಟ್ರ’ ಎಂದು ಪ್ರಸ್ತಾಪಿಸಿದ್ದು, ನಂತರ ತಮ್ಮ ಮಾತನ್ನು ಸರಿಪಡಿಸಿಕೊಂಡು “ನೆರೆರಾಷ್ಟ್ರ’ ಎಂದು ಸಂಬೋಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ
Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್, ಸಾವಿನ ಸಂಖ್ಯೆ 90ಕ್ಕೆ ಏರಿಕೆ
Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್ ಪಡೆ
ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!
MUST WATCH
ಹೊಸ ಸೇರ್ಪಡೆ
Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ