ಇಸ್ರೇಲ್ ಸೇನೆಯ ಮುಂದುವರಿದ ವೈಮಾನಿಕ ದಾಳಿ: ಹಮಾಸ್ ರಹಸ್ಯ ಸುರಂಗ ಧ್ವಂಸ
Team Udayavani, May 18, 2021, 7:53 AM IST
ಗಾಜಾ ಸಿಟಿ/ವಿಶ್ವಸಂಸ್ಥೆ: ಹಮಾಸ್ ಉಗ್ರರ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನೆ ಸೋಮವಾರವೂ ಗಾಜಾ ಪಟ್ಟಿಯ ಮೇಲೆ ಬಾಂಬ್ ದಾಳಿ ಮುಂದುವರಿಸಿವೆ. ಉಗ್ರ ಸಂಘಟನೆಯ 9 ಕಮಾಂಡರ್ಗಳು ಅಡಗಿದ್ದ ಸುರಂಗಗಳನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗಿದೆ.
ಇಸ್ರೇಲ್ ಸೇನೆ ಹೇಳಿಕೊಂಡ ಪ್ರಕಾರ 15 ಕಿ. ಮೀ. ಉದ್ದದ ರಹಸ್ಯ ಸುರಂಗವನ್ನು ನಾಶಗೊಳಿಸಲಾಗಿದೆ. ಕಳೆದ ಸೋಮವಾರ ಆರಂಭವಾಗಿರುವ ಈ ಕಾಳಗದಲ್ಲಿ ಇದುವರೆಗೆ 55 ಮಕ್ಕಳು, 33 ಮಹಿಳೆಯರೂ ಸೇರಿದಂತೆ 200ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. 1,230ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಇದನ್ನೂ ಓದಿ:ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್ ಗೇಟ್ಸ್ ರಾಜೀನಾಮೆ
ಸೋಮವಾರದ ವೈಮಾನಿಕ ದಾಳಿಯಲ್ಲಿ ಹಮಾಸ್ ಹಿರಿಯ ಕಮಾಂಡರ್ ಹುಸ್ಸಮ್ ಅಬು ಹಬ್ರಿಡ್ನನ್ನು ಕೊಲ್ಲಲಾಗಿದೆ. ಗಾಜಾ ಸಿಟಿಯ ಮೇಯರ್ ಯಾಹ್ಯಾ ಸರ್ರಾಜ್ ನೀಡಿದ ಮಾಹಿತಿ ಪ್ರಕಾರ ಬಾಂಬ್ ದಾಳಿಯಿಂದ ರಸ್ತೆ ಮತ್ತು ಇತರ ಮೂಲ ಸೌಕರ್ಯಗಳಿಗೆ ಭಾರಿ ಹಾನಿ ಉಂಟಾಗಿದೆ. ಗಾಜಾ ಸಿಟಿಗೆ 3 ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಭಾರತೀಯ ಸಂಶೋಧಕರ ರಕ್ಷಣೆ: ದಕ್ಷಿಣ ಇಸ್ರೇಲ್ನ ಬೀರ್ಶೆಬಾ ನಗರದ ಮೇಲೆ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ ವೇಳೆ, ಸ್ಥಳೀಯ ಕ್ರಿಕೆಟ್ ಕ್ಲಬ್ ಭಾರತೀಯ ಸಂಶೋಧಕರನ್ನು ರಕ್ಷಿಸಿದೆ. ಅವರು ಬೆನ್-ಗರಿಯಾನ್ ವಿವಿಯ ಸಂಶೋಧಕರಾಗಿದ್ದಾರೆ. ಕ್ರಿಕೆಟ್ ಕ್ಲಬ್ ಹೊಂದಿರುವ ನೆಲಮಾಳಿಗೆಯಲ್ಲಿ ಸಂಶೋಧಕರು ಮತ್ತು ಸ್ಥಳೀಯರಿಗೆ ರಕ್ಷಣೆ ನೀಡಲಾಗಿದೆ.
ಪ್ಯಾಲೆಸ್ತೀನ್ಗೆ ಬೆಂಬಲ: ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ, ಇಸ್ರೇಲ್ ಮೇಲೆ ಹಮಾಸ್ ನಡೆಸುತ್ತಿರುವ ದಾಳಿ ಖಂಡಿಸಿದ್ದಾರೆ. ಕೇರಳದ ಸೌಮ್ಯಾ ಸಂತೋಷ್ ಸೇರಿದಂತೆ ಹಲವರ ಜೀವಹಾನಿ ಒಪ್ಪತಕ್ಕದ್ದಲ್ಲ ಎಂದಿದ್ದಾರೆ. ಭಾರತ ಪ್ಯಾಲೆಸ್ತೀನ್ ವಿಚಾರಕ್ಕೆ ಮಾತ್ರ ಬೆಂಬಲ ನೀಡುತ್ತದೆ. 2 ಪ್ರತ್ಯೇಕ ರಾಷ್ಟ್ರಗಳ ರಚನೆ ಕೂಡ ಭಾರತಕ್ಕೆ ಸ್ವೀಕಾರಾರ್ಹ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್