ಬಲಗಾಲಿಗೆ ನಾಲ್ಕು ಗುಂಡುಗಳು ತಗುಲಿವೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ನನ್ನ ಮೇಲೆ ದಾಳಿ ನಡೆಯಲಿದೆ ಎಂದು ಒಂದು ದಿನದ ಹಿಂದೆಯೇ ನನಗೆ ತಿಳಿದಿತ್ತು
Team Udayavani, Nov 4, 2022, 9:22 PM IST
ಲಾಹೋರ್: ಪಂಜಾಬ್ ಪ್ರಾಂತ್ಯದಲ್ಲಿ ಗುರುವಾರ ರಾಜಕೀಯ ಮೆರವಣಿಗೆಯ ವೇಳೆ ನಡೆದ ಹತ್ಯೆ ಯತ್ನದಲ್ಲಿ ತನ್ನ ಬಲಗಾಲಿಗೆ ನಾಲ್ಕು ಗುಂಡುಗಳು ತಗುಲಿದ್ದವು ಎಂದು ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ.
ಇಲ್ಲಿನ ಶೌಕತ್ ಖಾನಮ್ ಆಸ್ಪತ್ರೆಯಿಂದ ಹತ್ಯೆ ಯತ್ನದ ನಂತರದ ಮೊದಲ ಭಾಷಣದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಾನ್, ‘ತನ್ನನ್ನು ಕೊಲ್ಲುವ ಸಂಚು ನನಗೆ ತಿಳಿದಿತ್ತು’ ಎಂದು ಹೇಳಿದರು.
“ನಾನು ದಾಳಿಯ ವಿವರಗಳಿಗೆ ನಂತರ ಬರುತ್ತೇನೆ. ವಜೀರಾಬಾದ್ನಲ್ಲಿ ಅವರು ನನ್ನನ್ನು ಕೊಲ್ಲಲು ಯೋಜಿಸಿದ್ದಾರೆ ಎಂದು ದಾಳಿ ನಡೆದ ಹಿಂದಿನ ದಿನ ನನಗೆ ತಿಳಿದಿತ್ತು”ಎಂದು ಪಾಕಿಸ್ಥಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ 70 ವರ್ಷದ ಮುಖ್ಯಸ್ಥ ಖಾನ್ ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ, ರಾಜಕಾರಣಿ ಖಾನ್ ಗೆ ಚಿಕಿತ್ಸೆ ನೀಡುತ್ತಿರುವ ಡಾ. ಫೈಸಲ್ ಸುಲ್ತಾನ್, ಖಾನ್ ಅವರ ಬಲಗಾಲಿನ ಎಕ್ಸ್ ರೇ ಯಲ್ಲಿ ಅವರ ಟಿಬಿಯಾ ಮುರಿತವಾಗಿದೆ ಎಂದು ತೋರಿಸಿದೆ. ಈ ಸ್ಕ್ಯಾನ್ನಲ್ಲಿ, ಬಲ ಕಾಲಿನ ಮೇಲೆ ಗುಂಡಿನ ತುಣುಕುಗಳಿವೆ ಎಂದು ಹೇಳಿದರು.
ಪಂಜಾಬ್ ಪ್ರಾಂತ್ಯದ ವಜೀರಾಬಾದ್ ಪ್ರದೇಶದಲ್ಲಿ ಶೆಹಬಾಜ್ ಷರೀಫ್ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದ ಕಂಟೈನರ್ ಮೌಂಟೆಡ್ ಟ್ರಕ್ನಲ್ಲಿ ಬಂದೂಕು ಹಿಡಿದ ವ್ಯಕ್ತಿಯೊಬ್ಬ ಗುಂಡು ಹಾರಿಸಿದಾಗ ಖಾನ್ ಬಲಗಾಲಿಗೆ ಗುಂಡುಗಳು ತಗುಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!