ಕುಡಿಯಿರಿ, ಕುಡಿಸಿರಿ; ಆರ್ಥಿಕತೆಯನ್ನು ಬೆಳೆಸಿರಿ…!ಇದು ಜಪಾನ್‌ ಸರಕಾರದ ಹೊಸ ಮಂತ್ರ

ಆಲ್ಕೋಹಾಲ್‌ ಸೇವಿಸುವಂತೆ ಯುವಜನತೆಗೆ ಕರೆ ; ಆರ್ಥಿಕತೆ ಹಳಿಗೆ ತರಲು ಯತ್ನ

Team Udayavani, Aug 20, 2022, 7:15 AM IST

thumb-4

ಟೋಕಿಯೋ: ನಮ್ಮ ದೇಶದಲ್ಲಿ “ಹೆಂಡ- ಸಾರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ’ ಎಂಬ ಉದ್ಘೋಷಗಳನ್ನು ನೀವು ಸಾಕಷ್ಟು ಬಾರಿ ಕೇಳಿರಬಹುದು. ಆದರೆ, “ಕುಡಿಯಿರಿ, ಕುಡಿಸಿರಿ; ಆರ್ಥಿಕತೆಯನ್ನು ಬೆಳೆಸಿರಿ’ ಎಂದು ಹೇಳುವುದನ್ನು ಎಲ್ಲಾದರೂ ಕೇಳಿದ್ದೀರಾ?

ಜಪಾನ್‌ನಲ್ಲಿ ಈಗ ಇದೇ ಉದ್ಘೋಷ ಸದ್ದು ಮಾಡುತ್ತಿದೆ. ಸ್ವತಃ ಸರಕಾರವೇ ಮುಂದೆ ನಿಂತು “ಯುವಜನರನ್ನು ಮದ್ಯದಾಸರನ್ನಾಗಿ’ ಮಾಡುತ್ತಿದೆ !

ಅಚ್ಚರಿಯಾದರೂ ಇದು ಸತ್ಯ. ಹೆಚ್ಚು ಹೆಚ್ಚು ಆಲ್ಕೋಹಾಲ್‌ ಸೇವಿಸುವಂತೆ ಅಲ್ಲಿನ ಸರಕಾರ ಯುವಜನತೆಗೆ ಕರೆ ನೀಡಿದೆ. ಇದಕ್ಕೆ ಕಾರಣವೇನಿರಬಹುದು ಎಂದು ಯೋಚಿಸುತ್ತಿದ್ದೀರಾ? ಆರ್ಥಿಕ ಬಿಕ್ಕಟ್ಟು.

ಹೌದು, ಕೊರೊನಾ ಸೋಂಕಿನ ಅನಂತರ ಬಹುತೇಕ ಎಲ್ಲ ದೇಶಗಳೂ ಆರ್ಥಿಕ ಬಿಕ್ಕಟ್ಟಿ ನಿಂದ ನರಳುತ್ತಿವೆ. ಜಪಾನ್‌ ಕೂಡ ಇದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿದೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಹಳಿಗೆ ತರಬೇಕೆಂದರೆ ಸರಕಾರದ ಬೊಕ್ಕಸಕ್ಕೆ ಹಣ ಹರಿದುಬರಬೇಕು. ಎಲ್ಲ ದೇಶಗಳಲ್ಲೂ ಆದಾ ಯದ ದೊಡ್ಡ ಪಾಲುದಾರನೆಂದರೆ ಅಬಕಾರಿ ಇಲಾಖೆ. ಹೀಗಾಗಿ ಜನರು ಹೆಚ್ಚು ಮದ್ಯ ಸೇವಿಸಲು ಆರಂಭಿಸಿದರೆ ತನ್ನಿಂತಾನಾಗಿಯೇ ಅಬಕಾರಿ ಆದಾಯ ಹೆಚ್ಚುತ್ತದೆ ಎನ್ನುವುದು ಜಪಾನ್‌ ಸರಕಾರದ ಲೆಕ್ಕಾಚಾರ.

ತಗ್ಗಿದ ಮದ್ಯ ಸೇವನೆ: ಇಲ್ಲಿನ ತೆರಿಗೆ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶದ ಪ್ರಕಾರ, 1995ಕ್ಕೆ ಹೋಲಿಸಿದರೆ 2020 ರಲ್ಲಿ ಜಪಾನ್‌ ನಾಗರಿಕರ ಮದ್ಯ ಸೇವನೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಹಿಂದೆ ವಾರ್ಷಿಕವಾಗಿ ಸರಾಸರಿ 100 ಲೀಟರ್‌ಗಳಷ್ಟು ಮದ್ಯ ಸೇವನೆಯಾಗುತ್ತಿದ್ದರೆ, ಈಗ ಅದು 75 ಲೀಟರ್‌ಗಳಿಗೆ ಇಳಿದಿದೆ. ಮೂರನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್‌ನಲ್ಲಿ ಆಲ್ಕೋಹಾಲ್‌ನಿಂದ ಬರುತ್ತಿದ್ದ ತೆರಿಗೆ ಆದಾಯವೂ ಕುಸಿತವಾಗಿದೆ. ಮದ್ಯ ಮಾರಾಟದಿಂದ 2020ರಲ್ಲಿ ಸುಮಾರು 6,505 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಈ ಆದಾಯ ಇಷ್ಟೊಂದು ಇಳಿಕೆಯಾಗಿರು ವುದು ಕಳೆದ 31 ವರ್ಷಗಳಲ್ಲೇ ಇದೇ ಮೊದಲು.

ರಾಷ್ಟ್ರಮಟ್ಟದ ಸ್ಪರ್ಧೆ
ಹಿಂದಿನ ತಲೆಮಾರಿಗೆ ಹೋಲಿಸಿದರೆ ಇಂದಿನ ತಲೆಮಾರಿನ ಯುವಕರ “ಮದ್ಯ ಪ್ರೇಮ’ ಕಡಿಮೆಯಾಗಿದೆ. ಹೀಗಾಗಿ, ಜಪಾನ್‌ ಸರಕಾರ ಈಗ “ಸೇಕ್‌ ವಿವಾ’ ಎಂಬ ಅಭಿಯಾನ ಆರಂಭಿಸಿದೆ. ಜಪಾನ್‌ನ ಅಕ್ಕಿಯ ವೈನ್‌, ಶೋಚು, ವಿಸ್ಕಿ, ಬಿಯರ್‌ ಅಥವಾ ಇತರ ವೈನ್‌ಗಳನ್ನು ಕುಡಿಯುವಂತೆ ಯುವಜನತೆಗೆ ಸರಕಾರ ಕರೆ ನೀಡಿದೆ. ಜತೆಗೆ, ರಾಷ್ಟ್ರಮಟ್ಟದ ಸೇಕ್‌ ವಿವಾ ಸ್ಪರ್ಧೆಯನ್ನೂ ಆಯೋಜಿಸಿದ್ದು, ಯುವಜನಾಂಗ ಹೆಚ್ಚು ಹೆಚ್ಚು ಕುಡಿಯುವಂತೆ ಪ್ರೇರೇಪಿಸಲು ಐಡಿಯಾಗಳನ್ನು ಕೊಡಿ ಎಂದೂ ಕೇಳಿಕೊಂಡಿದೆ.

 

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.