![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಪಾಕಿಸ್ತಾನದ ಕರಾಚಿ ಭಾರತ ವಿರೋಧಿ ಉಗ್ರರ ಕೇಂದ್ರ ಸ್ಥಾನ; ವರದಿ
Team Udayavani, Feb 17, 2017, 3:09 PM IST
![pak-terror-chiefs.jpg](https://www.udayavani.com/wp-content/uploads/2017/02/17/pak-terror-chiefs.jpg)
ನವದೆಹಲಿ: ಪಾಕಿಸ್ತಾನದ ಬಂದರು ನಗರಿ ಕರಾಚಿ ಭಾರತ ವಿರೋಧಿ ಜಿಹಾದಿ ಚಟುವಟಿಕೆಯ ಕೇಂದ್ರ ಸ್ಥಾನವಾಗಿದೆ. ಅಷ್ಟೇ ಅಲ್ಲ ಕ್ರಿಮಿನಲ್ಸ್ ಗಳು ಕೂಡಾ ಪಾಕಿಸ್ತಾನ ಮಿಲಿಟರಿ ಬೆಂಬಲದೊಂದಿಗೆ ಅಟ್ಟಹಾಸಗೈಯುತ್ತಿರುವುದಾಗಿ ಬ್ರುಸೆಲ್ಸ್ ಮೂಲದ ಇಂಟರ್ ನ್ಯಾಷನಲ್ ಕ್ರೈಸಿಸ್ ಗ್ರೂಫ್ ನ ಚಿಂತಕರ ಚಾವಡಿ ಬಿಡುಗಡೆ ಮಾಡಿರುವ ನೂತನ ವರದಿಯಲ್ಲಿ ತಿಳಿಸಿದೆ.
ವರದಿ ಪ್ರಕಾರ, ಜಮಾತ್ ಉದ್ ದಾವಾದಂತಹ ಮಾತೃಸಂಸ್ಥೆಯ ಕೃಪಾಕಟಾಕ್ಷದ ಲಷ್ಕರ್ ಇ ತೊಯ್ಬಾ, ಮೌಲಾನಾ ಮಸೂದ್ ಅಝರ್ ನೇತೃತ್ವದ ಜೈಶ್ ಎ ಮೊಹ್ಮದ್ ಹಾಗೂ ಶಿಯಾ ವಿರೋಧಿ ಲಷ್ಕರ್ ಇ ಜಾಂಘ್ವಿಯಂತಹ ಉಗ್ರಗಾಮಿ ಸಂಘಟನೆಗಳು ಕರಾಚಿಯಲ್ಲಿರುವ ಪ್ರಭಾವಿ ಮದರಸಾಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವುದಾಗಿ ವಿವರಿಸಿದೆ.
ಪಾಕಿಸ್ತಾನದಲ್ಲಿನ ಈ ಅಪಾಯಕಾರಿ ಸಂಘಟನೆಗಳು ಕರಾಚಿಯಲ್ಲಿ ರಾಜಾರೋಷವಾಗಿ ಸಕ್ರಿಯವಾಗಿವೆ. ಈ ಸಂಘಟನೆಗಳು ಮದರಸಾಗಳನ್ನು ಕೂಡಾ ನಡೆಸುತ್ತಿವೆ ಎಂದು ವರದಿ ಹೇಳಿದೆ.
ಪಾಕಿಸ್ತಾನದಲ್ಲಿನ ಭಯೋತ್ಪಾದಕ ಚಟುವಟಿಕೆ ಕುರಿತು ಇಂಟರ್ ನ್ಯಾಶನಲ್ ಕ್ರೈಸಿಸ್ ಗ್ರೂಫ್, ಪಾಕಿಸ್ತಾನ: ಕರಾಚಿಯಲ್ಲಿ ಉರಿಯುತ್ತಿರುವ ಬೆಂಕಿ ಎಂಬ ಹೆಸರಿನಲ್ಲಿ ವರದಿ ತಯಾರಿಸಿದೆ.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.