ಅಣುಬಾಂಬ್‌, ಕ್ಷಿಪಣಿ ಪರೀಕ್ಷೆಗೆ ಫ‌ುಲ್‌ಸ್ಟಾಪ್‌


Team Udayavani, Apr 22, 2018, 6:00 AM IST

15.jpg

ಸಿಯೋಲ್‌: ಯಾರ ಬೆದರಿಕೆ, ಒತ್ತಡಕ್ಕೂ ಮಣಿಯದೇ ನಿರಂತರವಾಗಿ ಅಣ್ವಸ್ತ್ರಗಳು, ಕ್ಷಿಪಣಿಗಳ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಾ ಉದ್ಧಟತನದಿಂದ ವರ್ತಿಸುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಶನಿವಾರ ಅಚ್ಚರಿಯ ಘೋಷಣೆ ಮಾಡಿದ್ದಾರೆ. ಇನ್ನು ಯಾವ ಕಾರಣಕ್ಕೂ ಕ್ಷಿಪಣಿಗಳು ಹಾಗೂ ಅಣ್ವಸ್ತ್ರಗಳ ಪರೀಕ್ಷೆ ನಡೆಸುವುದಿಲ್ಲ ಹಾಗೂ ಇದಕ್ಕೆಲ್ಲ ಸಂಪೂರ್ಣ ವಿರಾಮ ಹಾಕುತ್ತಿದ್ದೇನೆ ಎಂದು ಕಿಮ್‌ ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಮುನ್ನವೇ ಈ ಬೆಳವಣಿಗೆ ನಡೆದಿದೆ. ಕಿಮ್‌ ನಿರ್ಧಾರವನ್ನು ಅಮೆರಿಕ, ಚೀನಾ ಸೇರಿದಂತೆ ಹಲವು ದೇಶಗಳು ಸ್ವಾಗತಿಸಿವೆ.

ಶನಿವಾರ ಆಡಳಿತಾರೂಢ ವರ್ಕರ್ಸ್‌ ಪಾರ್ಟಿಯ ಕೇಂದ್ರ ಸಮಿತಿ ಸಭೆಯಲ್ಲಿ ಮಾತನಾಡಿದ ಕಿಮ್‌, “ಕ್ಷಿಪಣಿ, ಅಣ್ವಸ್ತ್ರಗಳ ಪರೀಕ್ಷೆಯನ್ನು ಇಲ್ಲಿಗೇ ಸ್ಥಗಿತಗೊಳಿಸುತ್ತೇನೆ. ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷಾ ಕೇಂದ್ರದ ಅಗತ್ಯ ಇನ್ನು ಎದುರಾಗದು’ ಎಂದು ಹೇಳಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಟ್ವೀಟ್‌ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್‌, “ಇದು ಉತ್ತರ ಕೊರಿಯಾ ಮತ್ತು ಇಡೀ ಜಗತ್ತಿಗೆ ಸಿಹಿ ಸುದ್ದಿ. ಅತಿದೊಡ್ಡ ಯಶಸ್ಸು. ನಮ್ಮ ಮಾತುಕತೆಗಾಗಿ ಎದುರು ನೋಡುತ್ತಿದ್ದೇನೆ,’ ಎಂದು ಹೇಳಿದ್ದಾರೆ. ದಕ್ಷಿಣ ಕೊರಿಯಾ ಕೂಡ ಸಂತಸ ವ್ಯಕ್ತಪಡಿಸಿದ್ದು, ಕೊರಿಯಾ ಪರ್ಯಾಯ ದ್ವೀಪವನ್ನು ಅಣ್ವಸ್ತ್ರರಹಿತವಾಗಿಸುವಲ್ಲಿ ಇದು ಅರ್ಥಪೂರ್ಣ ಹೆಜ್ಜೆ ಎಂದು ಬಣ್ಣಿಸಿದೆ. ಚೀನಾ, ಐರೋಪ್ಯ ಒಕ್ಕೂಟ, ಜಪಾನ್‌ ಕೂಡ ಇದನ್ನು ಸ್ವಾಗತಿಸಿವೆ.

ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕಿಮ್‌
ಕಳೆದ ವರ್ಷ ಕಿಮ್‌ ಜಾಂಗ್‌ 6 ಅಣ್ವಸ್ತ್ರ ಪರೀಕ್ಷೆ, ನಿರಂತರ ಕ್ಷಿಪಣಿ ಪರೀಕ್ಷೆಗಳ ಮೂಲಕ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದರು. ಯಾವ ಒತ್ತಡಕ್ಕೂ ಬಗ್ಗದ ಹಿನ್ನೆಲೆಯಲ್ಲಿ ಉ.ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ, ಅಮೆರಿಕ, ಐರೋಪ್ಯ ಒಕ್ಕೂಟ, ದಕ್ಷಿಣ ಕೊರಿಯಾ ಮತ್ತಿತರ ದೇಶಗಳು ನಿರ್ಬಂಧವನ್ನೂ ಹೇರಿದ್ದವು. ಟ್ರಂಪ್‌ ಮತ್ತು ಕಿಮ್‌ ಟ್ವಿಟರ್‌ನಲ್ಲೇ ಬೈದಾಡಿಕೊಂಡಿದ್ದಲ್ಲದೆ, ಪರಸ್ಪರ ಸಮರ ಸಾರುವ ಬೆದರಿಕೆಯನ್ನೂ ಹಾಕಿದ್ದರು. ಶನಿವಾರದ ಘೋಷಣೆಯಿಂದಾಗಿ ಈ ಎಲ್ಲ ಪ್ರಕ್ಷುಬ್ಧತೆಯೂ ಇದೀಗ ತಣ್ಣಗಾದಂತಾಗಿದೆ.

Ad

ಟಾಪ್ ನ್ಯೂಸ್

Feed stray dogs at home: Supreme Court

Stray Dogs: ಬೀದಿ ನಾಯಿಗೆ ಮನೆಯಲ್ಲೇ ಆಹಾರ ನೀಡಿ: ಸುಪ್ರೀಂ ಕೋರ್ಟ್

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

1-aa-aa-bll

Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

Rcb-highcourt

ಐಪಿಎಲ್‌ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ

Surya-Tejasvi-MP

ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಟ್ಟಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ 

drowned

ಗಂಗೊಳ್ಳಿ ದೋಣಿ ದುರಂತ; ಓರ್ವ ಮೀನುಗಾರನ ಶ*ವ ಪತ್ತೆ: ಮುಂದುವರಿದ ಹುಡುಕಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

No compromise on eliminating terrorism: S Jaishankar

SCO: ಉಗ್ರವಾದ ನಿರ್ಮೂಲನೆಯಲ್ಲಿ ರಾಜಿ ಬೇಡ: ಜೈಶಂಕರ್‌ ಗುಡುಗು

ಬಾಹ್ಯಾಕಾಶ ಯಾನ ಮುಗಿಸಿ ಮರಳಿ ಬಂದ ಶುಭಾಂಶು ಶುಕ್ಲಾ

Axiom Mission 4: ಬಾಹ್ಯಾಕಾಶ ಯಾನ ಮುಗಿಸಿ ಮರಳಿ ಬಂದ ಶುಭಾಂಶು ಶುಕ್ಲಾ

New York: ನಾಳೆ ಮಂಗಳನ 25 ಕೆ.ಜಿ. ತೂಕದ ಉಲ್ಕಾಶಿಲೆ ಹರಾಜು!

New York: ನಾಳೆ ಮಂಗಳನ 25 ಕೆ.ಜಿ. ತೂಕದ ಶಿಲೆ ಹರಾಜು!

ಭಿನ್ನಾಭಿಪ್ರಾಯ ವಿವಾದ ಆಗಬಾರದು: ಚೀನಕ್ಕೆ ಜೈಶಂಕರ್‌ ಪರೋಕ್ಷ ಸಂದೇಶ

ಭಿನ್ನಾಭಿಪ್ರಾಯ ವಿವಾದ ಆಗಬಾರದು: ಚೀನಕ್ಕೆ ಜೈಶಂಕರ್‌ ಪರೋಕ್ಷ ಸಂದೇಶ

Melbourne: ಆಸ್ಟ್ರೇಲಿಯಾದಲ್ಲಿ ಅತೀದೊಡ್ಡ ಸಮರಾಭ್ಯಾಸ: ಭಾರತವೂ ಭಾಗಿ

Melbourne: ಆಸ್ಟ್ರೇಲಿಯಾದಲ್ಲಿ ಅತೀದೊಡ್ಡ ಸಮರಾಭ್ಯಾಸ: ಭಾರತವೂ ಭಾಗಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Feed stray dogs at home: Supreme Court

Stray Dogs: ಬೀದಿ ನಾಯಿಗೆ ಮನೆಯಲ್ಲೇ ಆಹಾರ ನೀಡಿ: ಸುಪ್ರೀಂ ಕೋರ್ಟ್

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ

1-aa-aa-bll

Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

police

Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.