ಟ್ವಿಟರ್‌ “ಬ್ಲೂಟಿಕ್‌’ ಅವಾಂತರಕ್ಕೆ ಜಗತ್ತೇ ತಲ್ಲಣ!”ನಕಲಿ’ಗಳ ಆಟ; ಕಂಪೆನಿಗಳಿಗೆ ಪ್ರಾಣಸಂಕಟ

ತಲೆನೋವು ತಾಳಲಾಗದೇ ಚಂದಾದಾರಿಕೆಯೇ ಸ್ಥಗಿತ

Team Udayavani, Nov 13, 2022, 7:30 AM IST

ಟ್ವಿಟರ್‌ “ಬ್ಲೂಟಿಕ್‌’ ಅವಾಂತರಕ್ಕೆ ಜಗತ್ತೇ ತಲ್ಲಣ!”ನಕಲಿ’ಗಳ ಆಟ; ಕಂಪೆನಿಗಳಿಗೆ ಪ್ರಾಣಸಂಕಟ

ಸ್ಯಾನ್‌ಫ್ರಾನ್ಸಿಸ್ಕೋ: ಟ್ವಿಟರ್‌ನ ಹೊಸ ಮಾಲಕ ಎಲಾನ್‌ ಮಸ್ಕ್ ಎಡವಟ್ಟುಗಳ ಮೇಲೆ ಎಡ ವಟ್ಟು ಮಾಡುತ್ತಿದ್ದಾರೆ. ಟ್ವಿಟರ್‌ನ “ಬ್ಲೂಟಿಕ್‌’ (ದೃಢೀಕರಿಸಲ್ಪಟ್ಟ ಖಾತೆ)ಗೆ ಮಾಸಿಕ 8 ಡಾಲರ್‌ ಮೊತ್ತ ನಿಗದಿಪಡಿಸುವ ಮೂಲಕ ನಕಲಿ ಖಾತೆಗಳನ್ನೆಲ್ಲ ಬಂದ್‌ ಮಾಡಿಸುತ್ತೇನೆ ಎಂದು ಘೋಷಿಸಿದ್ದ ಮಸ್ಕ್  ಈಗ ಅದೇ “ಬ್ಲೂಟಿಕ್‌ ಚಂದಾದಾರಿಕೆ’ ತಿರುಗು ಬಾಣವಾಗಿದೆ!

ಹಿಂದೆಲ್ಲ ಟ್ವಿಟರ್‌, ತಮ್ಮ ಖಾತೆ ದಾರರನ್ನು ಸಂಪರ್ಕಿಸಿ, ಅದು ಅವರದ್ದೇ ಖಾತೆ ಎಂಬುದು ದೃಢಪಟ್ಟ ಬಳಿಕವಷ್ಟೇ ಬ್ಲೂಟಿಕ್‌ ನೀಡುತ್ತಿತ್ತು. ಆದರೆ ಕಂಪೆನಿ ಯನ್ನು ಮಸ್ಕ್ ಖರೀದಿಸಿದ ಬಳಿಕ, 8 ಡಾಲರ್‌ ಪಾವತಿಸಿದವರಿಗೆ ಬ್ಲೂಟಿಕ್‌ ನೀಡುವ ನಿಯಮ ಜಾರಿಯಾಗಿದೆ. ಇದು ಜಾರಿಯಾಗಿದ್ದೇ ತಡ, ವಿಶ್ವಾದ್ಯಂತ “ನಕಲಿ ಖಾತೆ’ಗಳ ಸುನಾಮಿಯೇ ಎದ್ದಿದೆ. ಹಲವು ಕಿಡಿಗೇಡಿಗಳು 8 ಡಾಲರ್‌ ನೀಡಿ ಜಗತ್ತಿನ ಪ್ರಮುಖ ಬ್ರ್ಯಾಂಡ್‌ಗಳು, ದಿಗ್ಗಜ ಕಂಪೆನಿಗಳು, ಗಣ್ಯರ ಹೆಸರಲ್ಲಿ ಬ್ಲೂಟಿಕ್‌ಗಳನ್ನು ಖರೀದಿಸಿ ಟ್ವೀಟ್‌ ಮಾಡಲು ಶುರುವಿಟ್ಟಿದ್ದಾರೆ.

ಇದು ಈಗ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಪ್ರಮುಖ ಕಂಪೆನಿಗಳ ಬುಡವನ್ನೇ ಅಲ್ಲಾಡಿಸ ತೊಡಗಿದೆ. ಕಂಪೆನಿಗಳ ಹೆಸರಲ್ಲಿ ಸುಳ್ಳೇ ಸುಳ್ಳು ಟ್ವೀಟ್‌ಗಳು ಹರಿದಾಡ ತೊಡಗಿವೆ. ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ಅಧಿ ಕೃತ, ಯಾವುದು ನಕಲಿ ಎಂಬುದನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಸುಳ್ಳು ಟ್ವೀಟ್‌ಗಳು ಕಂಪೆನಿಗಳ ಷೇರುಗಳ ಮೇಲೂ ಪರಿಣಾಮ ಬೀರತೊಡಗಿವೆ. ಎಲ್ಲೆಡೆಯಿಂದ ದೂರುಗಳ ಸುರಿಮಳೆ ಗಳು ಬಂದ ಕಾರಣ, ತಾತ್ಕಾಲಿಕವಾಗಿ ಬ್ಲೂಟಿಕ್‌ ಚಂದಾದಾರಿಕೆಯನ್ನು ಟ್ವಿಟರ್‌ ಸ್ಥಗಿತಗೊಳಿಸಿದೆ. ಒಟ್ಟಿನಲ್ಲಿ ಈ ಕಿರಿಕ್‌ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬ ಪ್ರಶ್ನೆಯೆದ್ದಿದೆ.

“ಬ್ಲೂಟಿಕ್‌’ನಿಂದ ಹೆಚ್ಚಿದ “ನಕಲಿ’ ಹಾವಳಿ
ಫಾರ್ಮಾಸುಟಿಕಲ್‌ ದಿಗ್ಗಜ ಎಲಿ ಲಿಲ್ಲಿ ಕಂಪೆನಿಯ ಹೆಸರಲ್ಲಿ ಬ್ಲೂಟಿಕ್‌ ಪಡೆದ ಕಿಡಿಗೇಡಿಗಳು, “ಇನ್ನು ಮುಂದೆ ಇನ್ಸುಲಿನ್‌ ಅನ್ನು ಉಚಿತವಾಗಿ ನೀಡಲಿ ದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಂಪೆನಿಯ ಷೇರುಗಳು ದಿಢೀರ್‌ ಪತನಗೊಂಡಿವೆೆ. ಕೊನೆಗೆ ಕಂಪೆನಿಯೇ ಪ್ರಕಟನೆೆ ಹೊರಡಿಸಿ, “ಇನ್ಸುಲಿನ್‌ ಉಚಿತವಾಗಿ ಕೊಡುತ್ತಿಲ್ಲ. ಇದು ಸುಳ್ಳು ಮಾಹಿತಿ’ ಎಂದು ಸ್ಪಷ್ಟನೆ ಕೊಡಬೇಕಾಯಿತು.

ರಕ್ಷಣ ಸಾಮಗ್ರಿಗಳ ಉತ್ಪಾದನ ಕಂಪೆನಿ ಲಾಕ್‌ಹೀಡ್‌ ಮಾರ್ಟಿನ್‌ ಹೆಸರಲ್ಲಿರುವ ನಕಲಿ ಖಾತೆಗೆ ಬ್ಲೂಟಿಕ್‌. “ಅಮೆರಿಕ ಸೇರಿದಂತೆ ಕೆಲವು ದೇಶಗಳಿಗೆ ನಾವು ರಕ್ಷಣ ಸಾಮಗ್ರಿ ಮಾರಾಟ ಸ್ಥಗಿತಗೊಳಿಸುತ್ತಿದ್ದೇವೆ’ ಎಂದು ಟ್ವೀಟ್‌. ಏಕಾಏಕಿ ಶೇ.5ರಷ್ಟು ಕುಸಿತ ಕಂಡ ಕಂಪೆನಿಯ ಷೇರು.

ಪೆಪ್ಸಿ ಕಂಪೆನಿಯ ಹೆಸರಲ್ಲಿ ನಕಲಿ ಖಾತೆ ತೆರೆದ ವ್ಯಕ್ತಿಯು, “ಪೆಪ್ಸಿಗಿಂತ ಕೋಕ್‌ ಚೆನ್ನಾಗಿದೆ’ ಎಂದು ಬರೆದುಕೊಂಡಿದ್ದಾನೆ.

ನೆಸ್ಲೆ ಕಂಪೆನಿ ಹೆಸರಲ್ಲಿ ಬ್ಲೂಟಿಕ್‌ ಪಡೆದ ಕಿಡಿಗೇಡಿ, “ನಾವು ನಿಮ್ಮದೇ ನೀರನ್ನು ಕದ್ದು, ನಿಮಗೇ ಮಾರಾಟ ಮಾಡುತ್ತೇವೆ’ ಎಂದು ಟ್ವೀಟ್‌ ಮಾಡಿದ್ದಾನೆ.

ವರ್ಣಭೇದ ನೀತಿ ವಿರುದ್ಧ ಧ್ವನಿಯೆತ್ತಿರುವ ಇಸ್ರೇಲ್‌ನ ಎಐಪಿಎಸಿ ಖಾತೆಯಿಂದ “ನಾವು ವರ್ಣಭೇದ ನೀತಿಯನ್ನು ಪ್ರೀತಿಸುತ್ತೇವೆ’ ಎಂದು ಟ್ವೀಟ್‌.

ಚಿಕ್ವಿಟಾ ಖಾತೆಯಿಂದ “ನಾವು ಬ್ರೆಜಿಲ್‌ ಸರಕಾರ ಪತನಗೊಳಿಸಿದೆವು’ ಎಂದು ಬರೆಯಲಾಗಿದೆ.

 

 

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.