ಬ್ರಿಟನ್‌ ಮಂತ್ರಿಮಂಡಲದಲ್ಲಿ ಭಾರತದ ಕಂಪು


Team Udayavani, Jul 26, 2019, 5:24 AM IST

m-57

ಬ್ರಿಟನ್‌ನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಬೋರಿಸ್‌ ಜಾನ್ಸನ್‌ ಅವರ ಮಂತ್ರಿಮಂಡಲದಲ್ಲಿ ಭಾರತದ ಕಂಪು ಅರಳಿದೆ. ಭಾರತ ಮೂಲದ ಪ್ರೀತಿ ಪಟೇಲ್‌ರನ್ನು ಗೃಹ ಸಚಿವರನ್ನಾಗಿ ನೇಮಿಸಲಾಗಿದ್ದು, ಅಲೋಕ್‌ ಶರ್ಮಾಗೆ ಅಂತಾರಾಷ್ಟ್ರೀಯ ಬಾಂಧವ್ಯಗಳ ಅಭಿವೃದ್ಧಿ ಸಚಿವ ಸ್ಥಾನ ನೀಡಲಾಗಿದೆ. ಇನ್ನು, ಇನ್ಫೋಸಿಸ್‌ ಸಂಸ್ಥಾಪಕರಾದ ಕನ್ನಡಿಗ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್‌ ಅವರನ್ನು ವಿತ್ತ ಸಚಿವರನ್ನಾಗಿ ನೇಮಿಸಲಾಗಿದೆ.

ಯಾರು ಪ್ರೀತಿ ಪಟೇಲ್?
ಇವರ ತಂದೆಯ ಹೆಸರು ಸುಶೀಲ್ ಹಾಗೂ ತಾಯಿ ಅಂಜನಾ ಪಟೇಲ್. ಮೂಲತಃ ಗುಜರಾತ್‌ನವರು. 1960ರಲ್ಲಿ ಉಗಾಂಡಕ್ಕೆ ಸ್ಥಳಾಂತರಗೊಂಡಿದ್ದ ಈ ಕುಟುಂಬ, 1972ರಲ್ಲಿ ಬ್ರಿಟನ್‌ಗೆ ಬಂದು ನೆಲೆಸಿತ್ತು. ಪ್ರೀತಿ ಅವರು ಲಂಡನ್‌ನಲ್ಲೇ ಹುಟ್ಟಿ ಬೆಳೆ ದಿದ್ದು, ಕೀಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಪಡೆದಿ ದ್ದಾರೆ. 1995ರಿಂದ ಕನ್ಸರ್ವೇಟಿವ್‌ ಪಕ್ಷಕ್ಕೆ ಸೇರ್ಪಡೆಗೊಂಡ ಅವರು, 2010ರಿಂದ ಎಸ್ಸೆಕ್ಸ್‌ ಪ್ರಾಂತ್ಯದ ವಿಥಾಮ್‌ ಕ್ಷೇತ್ರದಿಂದ ಸಂಸದೆಯಾಗಿ ಸತತವಾಗಿ ಆಯ್ಕೆಯಾಗಿ ದ್ದಾರೆ. ಈಗಿನ ಸರ್ಕಾರದಲ್ಲೇ ಈ ಹಿಂದೆ ಪ್ರಧಾನಿಗಳಾಗಿದ್ದ ಜೇಮ್ಸ್‌ ಕ್ಯಾಮರೂನ್‌, ಥೆರೇಸಾ ಮೇ ಅವರ ಸಂಪುಟದಲ್ಲಿ ಅಂತಾರಾಷ್ಟ್ರೀಯ ಬಾಂಧವ್ಯ ಅಭಿವೃದ್ಧಿ, ಕಾರ್ಮಿಕ ಮುಂತಾದ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ಫಿ ಮೂರ್ತಿಯ ಅಳಿಯ
ಸುನಕ್‌ರವರ ತಂದೆ-ತಾಯಿ, ಲಂಡನ್‌ನಲ್ಲೇ ಹುಟ್ಟಿ ಬೆಳೆದವರು. ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಲ್ಲದೆ, ಸ್ವಂತ ಫಾರ್ಮಸಿ ನಡೆಸಿದ್ದವರು. ಹ್ಯಾಂಪ್‌ಶೈರ್‌ನಲ್ಲಿ 1980ರ ಮೇ 12ರಂದು ಹುಟ್ಟಿದ ರಿಷಿ, ಆಕ್ಸ್‌ಫ‌ರ್ಡ್‌ ವಿವಿಯಿಂದ ತತ್ವಶಾಸ್ತ್ರ, ರಾಜಕೀಯ, ಅರ್ಥಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ. ನಂತರ, ಅಮೆರಿಕದ ಸ್ಟಾನ್‌ಫೋರ್ಡ್‌ ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ. ಷೇರು ಮಾರು ಕಟ್ಟೆ ಕ್ಷೇತ್ರದಲ್ಲಿ ಉದ್ಯೋಗ ಆರಂಭಿಸಿದ್ದ ಅವರು, 2015ರಿಂದ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು. ಅದೇ ವರ್ಷ, ರಿಚ್‌ಮಂಡ್‌ ಕ್ಷೇತ್ರದಲ್ಲಿ ಕನ್ಸರ್ವೇಟಿವ್‌ ಪಕ್ಷದಿಂದ ಸಂಸದರಾಗಿ ಆಯ್ಕೆಯಾದರು. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯವರನ್ನು ಅವರು ವಿವಾಹವಾಗಿದ್ದಾರೆ.

ಆಗ್ರಾ ಮೂಲದ ಅಲೋಕ್‌
ರೀಡಿಂಗ್‌ ವೆಸ್ಟ್‌ ಕ್ಷೇತ್ರದಿಂದ ಸಂಸದರಾಗಿರುವ ಇವರು, ಭಾರತದ ಆಗ್ರಾದಲ್ಲಿ 1967ರ ಸೆ. 7ರಂದು ಜನಿಸಿದರು. ಐದು ವರ್ಷದವರಾಗಿದ್ದಾಗಲೇ ಲಂಡನ್‌ಗೆ ತಮ್ಮ ಹೆತ್ತವರೊಂದಿಗೆ ವಲಸೆ ಹೋಗಿದ್ದ ಅವರು, ಸಾಲ್ಫೋರ್ಡ್‌ ವಿವಿಯಿಂದ ಬಿಎಸ್‌ಸಿ (ಅಪ್ಲೈಡ್‌ ಫಿಸಿಕ್ಸ್‌ ಹಾಗೂ ಎಲೆಕ್ಟ್ರಾನಿಕ್ಸ್‌) ಪದವಿ ಪಡೆದಿದ್ದಾರೆ. ರೀಡಿಂಗ್‌ ವೆಸ್ಟ್‌ ಕ್ಷೇತ್ರದಲ್ಲಿ 2010ರಲ್ಲಿ ಸಂಸದರಾಗಿ ಆಯ್ಕೆಯಾದ ಅವರು, 2017ರಲ್ಲಿ ಥೆರೇಸಾ ಮೇ ಸಂಪುಟದಲ್ಲಿ ಸಚಿವರಾದರು. ಅವರ ಸಂಪುಟದಲ್ಲಿ ಏಷ್ಯಾ-ಪೆಸಿಫಿಕ್‌ ವ್ಯವಹಾರಗಳ ಸಚಿವರಾಗಿ, ಆನಂತರ ವಸತಿ ಇಲಾಖೆ, ಕಾರ್ಮಿಕ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಜಾನ್ಸನ್‌ಗೂ ಇದೆ ಭಾರತದ ನಂಟು
ಬ್ರಿಟನ್‌ನ ನೂತನ ಪ್ರಧಾನಿಯಾದ ಬೋರಿಸ್‌ ಜಾನ್ಸನ್‌ ಅವರನ್ನು ಈ ಹಿಂದೆ ಭಾರತದ ಅಳಿಯ ಎಂದೇ ಕರೆಯಲಾಗುತ್ತಿತ್ತು. ಜಾನ್ಸನ್‌ ಅವರ ಮಾಜಿ ಪತ್ನಿಯಾದ ಮರಿನಾ ವ್ಹೀಲರ್‌ ಅವರು ಭಾರತದ ಖ್ಯಾತ ಪತ್ರಕರ್ತ ಖುಷ್ವಂತ್‌ ಸಿಂಗ್‌ ಅವರ ಸಂಬಂಧಿ. ಅಂದರೆ, ಮರಿನಾ ಅವರ ತಾಯಿ ದೀಪ್‌ ಸಿಂಗ್‌ ಅವರು, ಖುಷ್ವಂತ್‌ ಸಿಂಗ್‌ ಅವರ ಕಿರಿಯ ಸಹೋದರ ದಲ್ಜೀತ್‌ ಸಿಂಗ್‌ ಅವರನ್ನು ಮದುವೆಯಾಗಿದ್ದರು. ಹಾಗಾಗಿ, ಮರಿನಾ ಅವರಿಗೆ ಭಾರತದ ನಂಟಿದೆ. 1993ರಲ್ಲಿ ಮರೀನಾ ಅವರನ್ನು ಮದುವೆಯಾಗಿದ್ದ ಜಾನ್ಸನ್‌ ಹಲವಾರು ಬಾರಿ ಭಾರತಕ್ಕೆ ಬಂದು ಹೋಗಿದ್ದಾರೆ. 25 ವರ್ಷಗಳ ದಾಂಪತ್ಯದ ನಂತರ ಕಳೆದ ವರ್ಷ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಇವರಿಗೆ ನಾಲ್ವರು ಮಕ್ಕಳು.

ಟಾಪ್ ನ್ಯೂಸ್

wrestlers

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

MARSH RANSHAW

AUSTRALIA ಫೈನಲ್‌ ತಂಡ: ಮಾರ್ಷ್‌, ರೆನ್‌ಶಾ ಹೊರಕ್ಕೆ

SCHOOL TEA-STUDENTS

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ವೃಥಾ ವಿವಾದ ಬೇಡ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb-2

Antarctic ನಲ್ಲಿ ಬೃಹತ್‌ ಸುನಾಮಿ?: ಹವಾಮಾನ ಬದಲಾವಣೆ ಪರಿಣಾಮ ಕಾರಣ ಶಂಕೆ

ERDOGAN

TURKEY: ಅಧಿಕಾರ ಉಳಿಸಿಕೊಂಡ ಎರ್ಡೋಗನ್‌

1-sadasd

Belarus ಅಧ್ಯಕ್ಷ ಆಸ್ಪತ್ರೆಗೆ ದಾಖಲು: ಪುಟಿನ್ ಭೇಟಿ ಬೆನ್ನಲ್ಲೇ ಘಟನೆ: ವರದಿ

Viral Video: ಫಿಲಡೆಲ್ಫಿಯಾ ಬೀದಿ, ಬೀದಿಯಲ್ಲಿ ವಿಚಿತ್ರ ವರ್ತನೆ…ಏನಿದು ಜೋಂಬಿ ಡ್ರಗ್‌ !

Viral Video: ಫಿಲಡೆಲ್ಫಿಯಾ ಬೀದಿ, ಬೀದಿಯಲ್ಲಿ ವಿಚಿತ್ರ ವರ್ತನೆ…ಏನಿದು ಜೋಂಬಿ ಡ್ರಗ್‌ !

1–dasd

Canada ಮದುವೆಯಲ್ಲಿ ಪಂಜಾಬ್ ಮೂಲದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

wrestlers

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

MARSH RANSHAW

AUSTRALIA ಫೈನಲ್‌ ತಂಡ: ಮಾರ್ಷ್‌, ರೆನ್‌ಶಾ ಹೊರಕ್ಕೆ

ಹಣಕಾಸು ವಂಚನೆ: ಮುಂಬಯಿ ಉದ್ಯಮಿ ವಿಶ್ವನಾಥ್‌ ಶೆಟ್ಟಿ ಬಂಧನ

ಹಣಕಾಸು ವಂಚನೆ: ಮುಂಬಯಿ ಉದ್ಯಮಿ ವಿಶ್ವನಾಥ್‌ ಶೆಟ್ಟಿ ಬಂಧನ

SCHOOL TEA-STUDENTS

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ವೃಥಾ ವಿವಾದ ಬೇಡ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ