ಪತನಗೊಂಡ ವಿಮಾನದ ಬ್ಲ್ಯಾಕ್‌ಬಾಕ್ಸ್‌ ಪತ್ತೆ

ಇನ್ನೂ ನಾಲ್ವರಿಗಾಗಿ ಮುಂದುವರಿದ ಶೋಧ

Team Udayavani, Jan 17, 2023, 7:25 AM IST

ಪತನಗೊಂಡ ವಿಮಾನದ ಬ್ಲ್ಯಾಕ್‌ಬಾಕ್ಸ್‌ ಪತ್ತೆ

ಕಠ್ಮಂಡು:ಭಾನುವಾರ ಪತನಗೊಂಡ ನೇಪಾಳದ ಯೇಟಿ ಏರ್‌ಲೈನ್ಸ್‌ ವಿಮಾನದಲ್ಲಿದ್ದ ನಾಲ್ವರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಘಟನಾ ಸ್ಥಳದಲ್ಲಿ ಇವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಉಳಿದ 68 ಮಂದಿಯ ಮೃತದೇಹವನ್ನು ಈಗಾಗಲೇ ಹೊರತೆಗೆಯಲಾಗಿದೆ.

ಇದೇ ವೇಳೆ, ಸೋಮವಾರ ವಿಮಾನದ ಅವಶೇಷಗಳ ನಡುವೆ 2 ಬ್ಲ್ಯಾಕ್‌ಬಾಕ್ಸ್‌ ಪತ್ತೆಯಾಗಿದ್ದು, ಅವುಗಳನ್ನು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಅವುಗಳ ಪರಿಶೀಲನೆಯ ಬಳಿಕ ಪತನಕ್ಕೆ ಕಾರಣವೇನು ಎಂಬುದು ತಿಳಿದುಬರಲಿದೆ.

ವಿಮಾನ ಮಲ್ಯ ಒಡೆತನದಲ್ಲಿತ್ತು!:
ಪತನಕ್ಕೀಡಾದ ಯೇಟಿ ಏರ್‌ಲೈನ್ಸ್‌ನ ವಿಮಾನವು ಈ ಹಿಂದೆ ವಿಜಯ ಮಲ್ಯ ನೇತೃತ್ವದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ಕೈಯ್ಯಲ್ಲಿತ್ತು. 2007ರಲ್ಲಿ ಕಿಂಗ್‌ಫಿಶರ್‌ ಈ ವಿಮಾನವನ್ನು ಖರೀದಿಸಿತ್ತು. ಅದಾದ 6 ವರ್ಷಗಳ ನಂತರ ಥಾಯ್ಲೆಂಡ್‌ನ‌ ಕಂಪನಿ ಅದನ್ನು ಕೊಂಡುಕೊಂಡಿತ್ತು. 2019ರಲ್ಲಿ ಈ ವಿಮಾನವನ್ನು ಏಟಿ ಏರ್‌ಲೈನ್ಸ್‌ ಖರೀದಿ ಮಾಡಿತ್ತು.

ಪತನಕ್ಕೆ ಬಲಿಯಾದ ಪೈಲಟ್‌ ದಂಪತಿ!
ವಿಮಾನ ಪತನದಿಂದ ಪೈಲಟ್‌ವೊಬ್ಬರು ಮೃತಪಟ್ಟ 16 ವರ್ಷಗಳ ಬಳಿಕ ಅವರ ಪತ್ನಿಯೂ ವಿಮಾನ ಪತನದಿಂದಲೇ ಅಸುನೀಗಿದ್ದಾರೆ. ಭಾನುವಾರ ನಡೆದ ಯೇಟಿ ಏರ್‌ಲೈನ್ಸ್‌ ದುರಂತದಲ್ಲಿ ನೇಪಾಳದ ಮಹಿಳಾ ಪೈಲಟ್‌ ಅಂಜು ಖತಿವಾಡ ಸಜೀವ ದಹನಗೊಂಡಿದ್ದಾರೆ. ನೇಪಾಳ ಸೇನೆಯಲ್ಲಿ ಹೆಲಿಕಾಪ್ಟರ್‌ ಪೈಲಟ್‌ ಆಗಿದ್ದ ದೀಪಕ್‌ ಪೋಖರೆಲ್‌ರನ್ನು ಅಂಜು ವಿವಾಹವಾಗಿದ್ದರು. ನಂತರ ದೀಪಕ್‌ ಅವರು ಯೇಟಿ ಏರ್‌ಲೈನ್ಸ್‌ನಲ್ಲಿ ಪೈಲಟ್‌ ಆಗಿ ಸೇರಿದ್ದರು. 16 ವರ್ಷಗಳ ಹಿಂದೆ ಅಂದರೆ 2006ರಲ್ಲಿ ಯೇಟಿ ಏರ್‌ಲೈನ್ಸ್‌ನ ವಿಮಾನ ಪತನಗೊಂಡು ದೀಪಕ್‌ ಮೃತಪಟ್ಟಿದ್ದರು. ಈಗ ಅವರ ಪತ್ನಿಯೂ ಅಂಥದ್ದೇ ದುರಂತದಲ್ಲಿ ಕೊನೆಯುಸಿರೆಳೆದಂತಾಗಿದೆ.

ಹರಕೆ ತೀರಿಸಲು ಹೋಗಿದ್ದರು
ದುರಂತದಲ್ಲಿ ಮಡಿದ ಐವರು ಭಾರತೀಯರ ಪೈಕಿ ಒಬ್ಬರಾದ ಉತ್ತರಪ್ರದೇಶದ ಘಾಜಿಪುರದ ಸೋನು ಜೈಸ್ವಾಲ್‌(35) ಅವರು ಹರಕೆ ತೀರಿಸಲೆಂದು ನೇಪಾಳದ ಪಶುಪತಿನಾಥ ದೇಗುಲಕ್ಕೆ ತೆರಳಿದ್ದರು. ಮಗ ಹುಟ್ಟಲೆಂದು ಹರಕೆ ಹೊತ್ತಿದ್ದ ಜೈಸ್ವಾಲ್‌ಗೆ 6 ತಿಂಗಳ ಹಿಂದೆ ಗಂಡುಮಗುವಾಗಿತ್ತು. ಹೀಗಾಗಿ ಹರಕೆ ತೀರಿಸಲು ತಮ್ಮ ನಾಲ್ವರು ಗೆಳೆಯರೊಂದಿಗೆ ನೇಪಾಳಕ್ಕೆ ತೆರಳಿದ್ದರು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು.

ಬೆಚ್ಚಿಬೀಳಿಸಿದ ಕೊನೇ ಕ್ಷಣದ ವಿಡಿಯೋ!
ವಿಮಾನವು ಪತನಗೊಳ್ಳುವವರೆಗಿನ ಕೊನೇ ಕ್ಷಣದ ವಿಡಿಯೋವೊಂದು ಭಾರೀ ವೈರಲ್‌ ಆಗಿದೆ. ಇದನ್ನು ಮೃತ ಐವರು ಭಾರತೀಯರಲ್ಲಿ ಒಬ್ಬ ಚಿತ್ರೀಕರಿಸಿದ್ದ. ಫೇಸ್‌ಬುಕ್‌ ಲೈವ್‌ ಮೂಲಕ ವಿಮಾನ ಲ್ಯಾಂಡಿಂಗ್‌ ಆಗುವ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿರುತ್ತಾನೆ. ಏಕಾಏಕಿ ವಿಮಾನವು ಓಲಾಡಲು ಆರಂಭವಾಗುತ್ತಿದ್ದಂತೆ, ಅವರೆಲ್ಲರೂ “ಮರಾ ಮರಾ'(ನಾವು ಸತ್ತೆವು, ಸತ್ತೆವು) ಎಂದು ಕಿರುಚುತ್ತಾರೆ. ಕ್ಷಣಮಾತ್ರದಲ್ಲಿ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳುತ್ತದೆ. ಬೆಂಕಿಯ ಕೆನ್ನಾಲಿಗೆಯು ಇಡೀ ವಿಮಾನವನ್ನು ಆವರಿಸಿಕೊಂಡು ಎಲ್ಲವೂ ಸುಟ್ಟು ಕರಕಲಾಗುತ್ತವೆ. ಬೆಚ್ಚಿಬೀಳಿಸುವಂಥ ಈ ಇಡೀ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.