ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಖುಲಾಸೆಗೊಳ್ಳಿ; Public Prosecutor
Team Udayavani, Mar 30, 2017, 3:49 PM IST
ಇಸ್ಲಾಮಾಬಾದ್ : ಅತ್ಯಂತ ಆಘಾತಕಾರಿ ವಿದ್ಯಮಾನವೊಂದರಲ್ಲಿ ಹಿರಿಯ ಪಾಕಿಸ್ಥಾನೀ ಪ್ರಾಸಿಕ್ಯೂಟರ್ ಒಬ್ಬರು ಕ್ರೈಸ್ತ ಸಮುದಾಯದ 42 ಕೊಲೆ ಆರೋಪಿಗಳಿಗೆ, “ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಿ, ಕೊಲೆ ಆರೋಪದಿಂದ ಖುಲಾಸೆಗೊಳ್ಳಿ, ಶಿಕ್ಷೆಯನ್ನು ತಪ್ಪಿಸಿಕೊಳ್ಳಿ’ ಎಂದು ಹೇಳಿರುವುದಾಗಿ ವರದಿಯಾಗಿದೆ.
2015ರ ಮಾರ್ಚ್ 15ರಂದು ಲಾಹೋರ್ನಲ್ಲಿ ಕ್ರೈಸ್ತ ಸಮುದಾಯದವರು ನೆಲೆಸಿಕೊಂಡಿರುವ ಯೋಹಾನಾಬಾದ್ನಲ್ಲಿನ ಎರಡು ಚರ್ಚುಗಳನ್ನು ಗುರಿ ಇರಿಸಿ ಭಾನುವಾರದ ಪ್ರಾರ್ಥನಾ ಸಭೆಯ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಅದನ್ನು ಅನುಸರಿಸಿ ಇಬ್ಬರು ಮುಸ್ಲಿಮರನ್ನು ಹೊಡೆದು ಸಾಯಿಸಿರುವುದಾಗಿ 42 ಮಂದಿ ಕ್ರೈಸ್ತರ ಮೇಲೆ ಆರೋಪ ಹೊರಿಸಲಾಗಿತ್ತು.
ಕೊಲೆ ಕೃತ್ಯಕ್ಕಾಗಿ ಶಿಕ್ಷೆಗೆ ಗುರಿಯಾಗುವುದನ್ನು ತಪ್ಪಿಸಲು ಆರೋಪಿಗಳಿಗೆ ಕ್ರೈಸ್ತ ಮತವನ್ನು ತೊರೆದು ಇಸ್ಲಾಂ ಮತಕ್ಕೆ ಸೇರುವಂತೆ ಜಿಲ್ಲಾ ಉಪ ಪಬ್ಲಿಕ್ ಪ್ರಾಸಿಕ್ಯೂಟರ್ (ಡಿಡಿಪಿಪಿ) ಸೈಯದ್ ಅನೀಸ್ ಶಾ ಆಫರ್ ಕೊಟ್ಟಿದ್ದರು ಎಂದು ಆರೋಪಿಗಳಿಗೆ ಕಾನೂನು ನೆರವು ನೀಡುತ್ತಿದ್ದ ಬಲಪಂಥೀಯ ಕಾರ್ಯಕರ್ತ ಜೋಸೆಫ್ ಫ್ರಾನ್ಸಿ ಹೇಳಿರುವುದನ್ನು “ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
“ನೀವು ಇಸ್ಲಾಂ ಮತಕ್ಕೆ ಸೇರಿದಲ್ಲಿ ನಿಮ್ಮನ್ನು ಕೊಲೆ ಆರೋಪದಿಂದ ಖುಲಾಸೆಗೊಳಿಸಲಾಗುವುದು, ಶಿಕ್ಷೆಯಿಂದಲೂ ನೀವು ಮುಕ್ತರಾಗಬಹುದು’ ಎಂದು ಡಿಡಿಪಿಪಿ ಸೈಯದ್ ಅನೀಸ್ ಆರೋಪಿಗಳಿಗೆ ಭರವಸೆ ನೀಡಿದ್ದರು ಎಂದು ಜೋಸೆಫ್ ಫ್ರಾನ್ಸಿ ಹೇಳಿದರು.
ಈ ಬಗ್ಗೆ ಡಿಡಿಪಿಪಿ ಶಾ ಅವರನ್ನು ಮಾಧ್ಯಮದವರು ಸಂಪರ್ಕಿಸಿದಾಗ, “ನಾನು ಆರೋಪಿಗಳಿಗೆ ಇಸ್ಲಾಂ ಧರ್ಮವನ್ನು ಸೇರುವಂತೆ ಕೇಳಿಲ್ಲ; ಬದಲು ಅವರ ಮುಂದೆ ಕೇವಲ ಆಯ್ಕೆಯನ್ನಷ್ಟೇ ಇಟ್ಟಿದ್ದೆ’ ಎಂದು ಹೇಳಿದರು.
ಇಸ್ಲಾಂ ಧರ್ಮವನ್ನು ಸೇರುವಂತೆ ನೀವು ಆರೋಪಿಗಳನ್ನು ಕೇಳಿಕೊಂಡಾಗಿನ ವಿಡಿಯೋ ಚಿತ್ರಿಕೆಯೊಂದು ಆರೋಪಿಗಳ ಬಳಿ ಇದೆ ಎಂದು ಹೇಳಿದಾಗ ಶಾ ನುಣುಚಿಕೊಂಡರು. 42 ಕ್ರೈಸ್ತ ಕೊಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ