ಶ್ರೀಲಂಕಾಗೆ ಭಾರತದಿಂದ 429 ಕೋಟಿ ರೂ. ಸಾಲ
Team Udayavani, Jun 11, 2022, 6:45 AM IST
ಕೊಲಂಬೋ: ತನ್ನ ರೈತರಿಗೆ ಬೇಕಾದ ರಸಗೊಬ್ಬರ ಕೊಳ್ಳುವುದಕ್ಕಾಗಿ ಸಾಲ ನೀಡುವಂತೆ ಶ್ರೀಲಂಕಾ ಸರಕಾರ ಭಾರತವನ್ನು ಪ್ರಾರ್ಥಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಭಾರತ, ಶ್ರೀಲಂಕಾಕ್ಕೆ 429 ಕೋಟಿ ರೂ.ಗಳನ್ನು ಸಾಲವನ್ನಾಗಿ ನೀಡಲು ಒಪ್ಪಿದೆ.
ಈ ಹಣದಿಂದ 65 ಮೆಟ್ರಿಕ್ ಟನ್ನಷ್ಟು ರಸಗೊಬ್ಬರ ತರಿಸಿಕೊಳ್ಳುವುದಾಗಿ ಲಂಕಾ ನಿರ್ಧರಿಸಿದೆ.
ಇದೇ ವೇಳೆ ವಿಶ್ವಸಂಸ್ಥೆ ಕೂಡ ಶ್ರೀಲಂಕಾದ 17 ಲಕ್ಷ ನಿರ್ಗತಿಕರಿಗೆ ನೆರವಾಗುವ ಉದ್ದೇಶದಿಂದ 367 ಕೋಟಿ ರೂ.ಗಳ ನೆರವು ನೀಡುವುದಾಗಿ ಪ್ರಕಟಿಸಿದೆ. ಈ ನಡುವೆ, ಗುರುವಾರ ಶ್ರೀಲಂಕಾದ ಉತ್ತರ ಭಾಗದಲ್ಲಿ ವಿದ್ಯುತ್ ಸ್ಥಾಪರವನ್ನು ಭಾರತದ ಅದಾನಿ ಗ್ರೂಪ್ ಜತೆಗೆ ಕೈ ಜೋಡಿಸಿ ನಿರ್ಮಿಸುವ ಪ್ರಸ್ತಾವನೆಗೆ ಅಲ್ಲಿನ ಸಂಸತ್ತು ಒಪ್ಪಿಗೆ ನೀಡಿದೆ.
ದುಸ್ಥಿತಿಗೆ ಸಿಲುಕಿರುವ ಶ್ರೀಲಂಕಾದ ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶಕ್ಕಾಗಿ, ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು, “ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆ ಉತ್ತೇಜನ ಇಲಾಖೆ’ ಹಾಗೂ “ಮಹಿಳೆಯರು, ಮಕ್ಕಳ ಸಬಲೀಕರಣ ಇಲಾಖೆ’ ಎಂಬ ಎರಡು ಇಲಾಖೆಗಳನ್ನು ಹೊಸದಾಗಿ ಸ್ಥಾಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ