ರಾವಣನದ್ದೇ ಮೊದಲ ವಿಮಾನ ; ನಮ್ಮ ಬಳಿ ದಾಖಲೆ ಇದೆ ಎಂದ ಶ್ರೀಲಂಕಾ ಸರಕಾರ
5 ಸಾವಿರ ವರ್ಷಗಳಷ್ಟು ಹಿಂದೆಯೇ ರಾವಣ ವಿಮಾನದಲ್ಲಿ ಸಂಚರಿಸುತ್ತಿದ್ದ ; ರಾವಣನ ಬಗ್ಗೆ ದಾಖಲೆ, ಪುಸ್ತಕ ಇದ್ದಲ್ಲಿ ನೀಡಿ ಎಂದು ಮನವಿ
Team Udayavani, Jul 20, 2020, 7:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ರಾಮಾಯಣದಲ್ಲಿ ಬರುವ ರಾವಣ, ಭಾರತೀಯರಿಗೆ ರಾಕ್ಷಸನಿರಬಹುದು. ಸೀತೆಯನ್ನು ಕದ್ದೊಯ್ದ ಖಳನಾಯಕನಿರಬಹುದು.
ಆದರೆ, ಶ್ರೀಲಂಕಾನ್ನರಿಗೆ ಆತ ಮಹಾನ್ ರಾಜ, ವಿದ್ವಾಂಸ ಹಾಗೂ ವಿಶ್ವದ ಮೊದಲ ವಾಯುಯಾನಿ.
ಮೊಟ್ಟಮೊದಲ ಬಾರಿಗೆ ವಿಮಾನದ ಮೂಲಕ ಹಾರಾಟ ನಡೆಸಿದ ರಾಜ ಎಂಬ ಬಲವಾದ ನಂಬಿಕೆ ಅವರದು.
5 ಸಾವಿರ ವರ್ಷಗಳಷ್ಟು ಹಿಂದೆಯೇ ಆತ ವಿಮಾನದ ಮೂಲಕ ಹಾರಾಟ ನಡೆಸಿದ್ದ ಎಂದು ಪ್ರತಿಪಾದಿಸುವ ಶ್ರೀಲಂಕಾದ ನಾಗರಿಕ ವಿಮಾನ ಯಾನ ಪ್ರಾಧಿಕಾರ, ಪ್ರಾಚೀನ ಕಾಲದಲ್ಲಿಯೇ ಆತ ವಿಮಾನ ಹಾರಿಸಲು ಬಳಸಿದ ತಂತ್ರಜ್ಞಾನ ಕುರಿತು ಸಂಶೋಧನೆ ಕೈಗೊಳ್ಳಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಪ್ರವಾಸೋದ್ಯಮ ಮತ್ತು ವಾಯುಯಾನ ಸಚಿವಾಲಯ ಪತ್ರಿಕೆಗಳಿಗೆ ಜಾಹೀರಾತೊಂದನ್ನು ನೀಡಿದ್ದು, ರಾವಣನ ಬಗ್ಗೆ ಮಾಹಿತಿ ಇದ್ದರೆ, ರಾವಣನ ಕುರಿತಾದ ದಾಖಲೆಗಳು, ಪುಸ್ತಕಗಳಿದ್ದರೆ ಅದನ್ನು ನಮಗೆ ಕಳುಹಿಸಿಕೊಡಿ. ಪೌರಾಣಿಕ ಹಿನ್ನೆಲೆಯ ರಾಜನ ಕುರಿತಾಗಿ, ಕಳೆದುಹೋದ ಪರಂಪರೆಯ ಕುರಿತಾಗಿ ಅಧ್ಯಯನ ನಡೆಸಲು, ಸಂಶೋಧನೆ ಕೈಗೊಳ್ಳಲು ಇದು ನಮಗೆ ನೆರವಾಗಬಹುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ದನಾತುಂಗೆ, ರಾವಣ, ವಿಶ್ವದ ಮೊದಲ ವಾಯುಯಾನಿ ಎಂಬುದು ಪುರಾಣದ ಕತೆಯಲ್ಲ. ಸತ್ಯ ಸಂಗತಿ. ಇದಕ್ಕೆ ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಇದನ್ನು ಸಾಬೀತುಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ಶ್ರೀಲಂಕಾ ಇತ್ತೀಚೆಗೆ ಮೊದಲ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ್ದು, ಅದಕ್ಕೆ ರಾವಣನ ಹೆಸರಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?