ವೈರಲ್‌: ಕ್ಯಾನ್ಸರ್‌ ಗೆದ್ದ ಸಂಗಾತಿಯನ್ನು ಕನಸಿನ ಯಾನಕ್ಕೆ ಕರೆದೊಯ್ದ ಪ್ರಿಯಕರ.!


Team Udayavani, Oct 9, 2022, 4:20 PM IST

tdy-9

ನವದೆಹಲಿ: ಪರಸ್ಪರ ಪ್ರೀತಿಸುವ ಎರಡು ಹೃದಯಗಳಿಗೆ ನಂಬಿಕೆಯೇ ಒಂದು ದೊಡ್ಡ ಶಕ್ತಿ. ನಂಬಿಕೆಯಿಂದಲೇ ಇಬ್ಬರು ಬದುಕಿನ ಬಗ್ಗೆ ಬಣ್ಣ ಬಣ್ದದ ಕನಸು ಕಾಣುತ್ತಾರೆ. ಏನೇ ಆಗಲಿ ಒಂದಾಗಿ ಸಮಸ್ಯೆ, ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ನಂಬಿಕೆಯಿಂದ. ಈ ಮಾತನ್ನು ಹೇಳುವುದಕ್ಕೊಂದು ಕಾರಣವಿದೆ.

ಹನ್ನಾ ಮತ್ತು ಚಾರ್ಲಿ ಇಬ್ಬರು ಪ್ರೀತಿಸುವ ಮನಸ್ಸುಗಳು. ವೃತ್ತಿಯಲ್ಲಿ ಟ್ರಾವಲ್‌  ಬ್ಲಾಗರ್‌ ಗಳು. ಯಾವ ಸ್ಥಳಕ್ಕೂ ಹೋದರೂ ಅಲ್ಲಿನ ಆಚಾರ- ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಳ್ಳುವ ಹ್ಯಾಪಿ ಕಪಲ್ಸ್.‌ ಈ ಸುಂದರ ಜೋಡಿಗೆ ಅದು ಯಾರ ದೃಷ್ಟಿ ಬಿತ್ತೋ ಏನೋ, ಹನ್ನಾಗೆ ಕ್ಯಾನ್ಸರ್‌ ಕಾಯಿಲೆ ಒಕ್ಕರಿಸುತ್ತದೆ.

ದಿನ ಕಳೆದಂತೆ ಹನ್ನಾಳ ಆರೋಗ್ಯ ಹದಗೆಡುತ್ತದೆ. ಹನ್ನಾ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿ ಅವರು ನಾಲ್ಕನೇ ಹಂತದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅಷ್ಟು ನೋವಿನಲ್ಲೂ ಹನ್ನಾ ಅವರಿಗೆ ತನ್ನ ಸಂಗಾತಿ ಚಾರ್ಲಿ ಅವರು ಒಂದು ಮಾತು ಕೊಡುತ್ತಾರೆ. ಒಂದು ಸಲ ನಿನ್ನ ಚಿಕಿತ್ಸೆ( (ಕೀಮೋಥೆರಪಿ) ಆದ ಬಳಿಕ ನಿನ್ನ ಕನಸಿನ ಸ್ಥಳ ಕಪಾಡೋಸಿಯಾ (Cappadocia) ದಲ್ಲಿ ಹಾರುವ ಬಲೂನ್‌ ಗಳನ್ನು ತೋರಿಸುತ್ತೇನೆ ಎಂದು ಧೈರ್ಯ ತುಂಬಿ ಪ್ರೀತಿಯಿಂದ ಅಪ್ಪಿಕೊಂಡು ಮಾತು ಕೊಡುತ್ತಾರೆ.

ಹನ್ನಾ ಅವರು ಕ್ಯಾನ್ಸರ್‌ ನಿಂದ ಚಿಕಿತ್ಸೆ ಪಡೆದು ಗೆದ್ದು ಬರುತ್ತಾರೆ. ಸಾವು – ನೋವಿನ ನಡುವಿನ ಹೋರಾಟ ಮಾಡಿ, ಕೀಮೋಥೆರಪಿ ಮುಗಿಸಿ ವಾಪಾಸ್‌ ಬಂದು ತನ್ನ ಸಂಗಾತಿಯನ್ನು ಅಪ್ಪಿಕೊಂಡು ಸಂತಸ ಪಡುತ್ತಾರೆ.

ತನ್ನ ಹುಡುಗಿಗೆ ಮಾತು ಕೊಟ್ಟ ಹಾಗೆ ಚಾರ್ಲಿ ಟರ್ಕಿಯಲ್ಲಿರುವ ಕಪಾಡೋಸಿಯಾಕ್ಕೆ ಪಯಾಣ ಬೆಳೆಸುತ್ತಾರೆ. ತಾವು ಇಬ್ಬರು ಭೇಟಿ ನೀಡುವ ತಾಣವನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.  ಹಾರುವ ಬಲೂನ್‌ ಗಳನ್ನು ನೋಡುತ್ತಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರು “ನಾಲ್ಕು ಬಾರಿಯ ಟ್ರಿಪ್‌ ಕೋವಿಡ್‌ ಹಾಗೂ ಕ್ಯಾನ್ಸರ್‌ ನಿಂದ ರದ್ದಾದ ಬಳಿಕ, ಅಂತಿಮವಾಗಿ ನಾವು ನಮ್ಮ ಲಿಸ್ಟ್‌ ನಲ್ಲಿರುವ ಮತ್ತೊಂದು ಸ್ಥಳಕ್ಕೆ ಬಂದಿದ್ದೇವೆ ಎಂಥಾ ಅದ್ಭುತ ಸೌಂದರ್ಯ ಇದು” ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಹನ್ನಾ ಅವರು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ, ಪ್ರವಾಸ ಹೊರಡಲು ಇರುವ ಟಿಕೆಟ್‌ ಹಾಗೂ ಬಲೂನ್‌ ಗಳನ್ನು ನೋಡುತ್ತಾ ಕೂರುವ ಬಗ್ಗೆ ತೋರಿಸಲಾಗಿದೆ. ವಿಡಿಯೋ 2.3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 14 ಸಾವಿರಕ್ಕೂ ಹೆಚ್ಚಿನ ಮಂದಿ ಲೈಕ್‌ ಮಾಡಿದ್ದಾರೆ.

ಕ್ಯಾನ್ಸರ್‌ ಗೆದ್ದು, ತನ್ನ ಸಂಗಾತಿಯೊಂದಿಗೆ ಕನಸಿನ ಯಾನವನ್ನು ಮಾಡಿರುವ ಹನ್ನಾರ ಲೈಫ್‌ ಜರ್ನಿ ಬಗ್ಗೆ ನೆಟ್ಟಿಗರು ಟ್ವೀಟ್‌ ಮಾಡಿ ಶ್ಲಾಘಿಸಿದ್ದಾರೆ.

 

ಟಾಪ್ ನ್ಯೂಸ್

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.