ದಸರೆಗೆ ದುಬಾೖ ದೇಗುಲ ಅರ್ಪಣೆ; ಅ.4ರಂದು ಲೋಕಾರ್ಪಣೆ; ಅ.5ರಿಂದ ಸಾರ್ವಜನಿಕರಿಗೆ ಪ್ರವೇಶ
Team Udayavani, Aug 10, 2022, 7:25 AM IST
ದುಬಾೖ: ಸಂಯುಕ್ತ ಅರಬ್ ಗಣರಾಜ್ಯದ ರಾಜಧಾನಿ ದುಬಾೖಯಲ್ಲಿರುವ ಭಾರತೀಯರಿಗೆ ಈ ಬಾರಿಯ ದಸರೆ ವಿಶೇಷವಾಗಿ ನೆನಪಲ್ಲಿ ಉಳಿಯಲಿದೆ. ಜೆಬೆಲ್ ಅಲಿ ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಗುಲ ಅ.4ರಂದು (ವಿಜಯದಶಮಿ) ಲೋಕಾರ್ಪಣೆಗೊಳ್ಳಲಿದೆ.
ನಿರ್ಮಾಣ ಕಾರ್ಯಮುಕ್ತಾಯಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ನಡೆದಿವೆ. ಹೊಸ ದೇಗುಲದಲ್ಲಿ ಒಟ್ಟು 16 ದೇವರು ವಿಗ್ರಹಗಳನ್ನು ಸ್ಥಾಪಿಸಲಾಗುತ್ತದೆ. ಅ.5ರಿಂದ ಸಾರ್ವಜನಿಕರು ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ನವರಾತ್ರಿಯ ಸಮಯ ದಲ್ಲಿ ದೇಗುಲದ ಪೂಜಾ ಸ್ಥಳ ಮಾತ್ರವೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.
2023ರ ಜ.14ರ ಮಕರ ಸಂಕ್ರಾಂತಿಗೆ ಜ್ಞಾನ ಕೊಠಡಿ, ಸಮುದಾಯ ಕೇಂದ್ರಗಳು ಸಾರ್ವ ಜನಿಕರಿಗೆ ಮುಕ್ತವಾಗಲಿದೆ.
ದೇಗುಲದಲ್ಲಿ ಏನಿದೆ?: ಅಮೃತಶಿಲೆಯಲ್ಲಿ ನಿರ್ಮಿಸಲಾಗಿರುವ ದೇಗುಲದಲ್ಲಿ ಒಂದು ಜ್ಞಾನ ಕೊಠಡಿ, 1 ಸಮುದಾಯ ಕೇಂದ್ರವಿರಲಿದೆ. ಜ್ಞಾನ ಕೊಠಡಿ ಹಾಗೂ ಸಮುದಾಯ ಕೇಂದ್ರಗಳಲ್ಲಿ ಎಲ್ಸಿಡಿ ಸ್ಕ್ರೀನ್ ಅಳವಡಿಸಲಾಗಿರುತ್ತದೆ. ಮದುವೆ ಇತ್ಯಾದಿ ಕಾರ್ಯಕ್ರಮ ಆಯೋಜಿಸಲೂ ಪ್ರತ್ಯೇಕ ಸಭಾಭವನವಿರಲಿದೆ.
ಶಿವನೇ ಪ್ರಮುಖ ದೇವರು: ದೇಗುಲದಲ್ಲಿ ಶಿವನನ್ನೇ ಮುಖ್ಯ ದೇವರನ್ನಾಗಿಸ್ಥಾಪಿಸಲಾಗುವುದು. ಉಳಿದಂತೆ ಕೃಷ್ಣ, ಗಣೇಶ, ಪಾರ್ವತಿ ಹಾಗೆಯೇ ದಕ್ಷಿಣ ಭಾರತದಪ್ರಸಿದ್ಧ ದೇವರಾದ ಅಯ್ಯಪ್ಪ ಸೇರಿ ಅನೇಕ ದೇವರುಗಳನ್ನು ಪ್ರತಿಷ್ಠಾಪಿಸಲಾಗುವುದು. 10-12 ಪುರೋಹಿತರು ದೇವರ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಕನಿಷ್ಠ 8 ಭಕ್ತರು ದೇಗುಲದ ಪೂರ್ಣಾವಧಿ ನೌಕರರಾಗಿ ಕೆಲಸ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ