ಶವದ ಪೆಟ್ಟಿಗೆಯಲ್ಲಿ ವರನನ್ನು ಮಂಟಪಕ್ಕೆ ಹೊತ್ತು ತಂದ ಸ್ನೇಹಿತರು! ವಿಡಿಯೋ ವೈರಲ್‌


Team Udayavani, Nov 17, 2022, 4:35 PM IST

TDY-1

ವಾಷಿಂಗ್ಟನ್:‌ ಇಂಟರ್‌ ನೆಟ್‌ ನಲ್ಲಿ ದಿನಕ್ಕೆ ನೂರಾರು ವಿಡಿಯೋಗಳು ಹರಿದಾಡುತ್ತವೆ. ಕೆಲವೊಂದು ವಿಡಿಯೋಗಳು ವೈರಲ್‌ ಆಗುತ್ತವೆ. ಮದುವೆಯ ದಿನ ವರನೊಬ್ಬ ಮದುವೆ ಮಂಟಪಕ್ಕೆ ಬಂದಿರುವ ರೀತಿ ನೋಡಿ ಇಲ್ಲಿ ಎಲ್ಲರಿಗೆ ಅಚ್ಚರಿಯಾಗಿದೆ.

ಮದುವೆ ಅಂದರೆ ಸಂಭ್ರಮ ಹಾಗೂ ಸಂತಸ. ಕೆಲ ಹುಡುಗರಿಗೆ ತನ್ನ ಗೆಳೆಯರು ಮದುವೆ ಇದ್ದರೆ ಅಲ್ಲೊಂದಿಷ್ಟು ಮೋಜು – ಮಸ್ತಿಯನ್ನು ಮಾಡುತ್ತಾರೆ. ಇಂಥದ್ದೇ ಒಂದು ಘಟನೆ ಅಮೆರಿಕಾದಲ್ಲಿ ನಡೆದಿದೆ.

ಅಲ್ಲಿ ಮದುವೆಗೆ ಕ್ಷಣಗಣನೆ ಆರಂಭವಾಗಿತ್ತು… ಮದುವೆ ಹೆಣ್ಣು ಶೃಂಗಾರಗೊಂಡು ಸಿದ್ದವಾಗಿದ್ದಳು. ಅತಿಥಿಗಳೂ ನೆರೆದಿದ್ದರು. ಎಲ್ಲರೂ ಮದುವೆ ವರನಿಗಾಗಿ ಕಾಯುತ್ತಿದ್ದರು.. ಈ ಸಂತಸದ ಸಮಯದಲ್ಲಿ ಅಲ್ಲೊಂದು ಕಾರು ಬರುತ್ತದೆ. ಆ ಕಾರಿನಿಂದ ಇಳಿದ ಕೆಲವರು ಕಾರಿನ ಹಿಂಬದಿಯಿಂದ ಶವದ ಪೆಟ್ಟಿಗೆಯನ್ನು ಹೊರಕ್ಕೆ ತರುತ್ತಾರೆ. ನಾಲ್ಕೈದು ಮಂದಿ ಶವದ ಪೆಟ್ಟಿಗೆ ಹಿಡಿದು ಮಂಟಪದ ಬಳಿಗೆ ಬರುತ್ತಾರೆ. ಸಂಭ್ರಮದ ಕ್ಷಣದಲ್ಲಿದ್ದವರಿಗೆ ಇದು ಅಚ್ಚರಿಯಾಗುತ್ತದೆ. ಎಲ್ಲರೂ ಒಮ್ಮೆ ಶಾಕ್‌ ನಿಂದ ನೋಡುತ್ತಾರೆ.

ಇದಾದ ಬಳಿಕ ಆ ಶವದ ಪೆಟ್ಟಿಗೆ ಯಿಂದ ಒಬ್ಬ ವ್ಯಕ್ತಿ ಹೊರ ಬರುತ್ತಾನೆ. ಆತ ಬೇರೆ ಯಾರು ಅಲ್ಲ…ವರ! ಶವದ ಪೆಟ್ಟಿಗೆಯಲ್ಲಿ ವರನನ್ನು ಮದುವೆ ಮಂಟಪಕ್ಕೆ ತರುವ ಪ್ಲ್ಯಾನ್‌ ಮಾಡಿಕೊಂಡು, ಎಲ್ಲರಿಗೂ ಶಾಕ್‌ ಕೊಟ್ಟಿದ್ದು ವರನ ಸ್ನೇಹಿತರು. ಈ ಇಡೀ ಘಟನೆಯನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿದು ಟಿಕ್‌ ಟಾಕ್‌ ನಲ್ಲಿ ಪೋಸ್ಟ್‌ ಮಾಡಿದ್ದು ಸದ್ಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಟಾಪ್ ನ್ಯೂಸ್

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

joshi

ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ

1-fdsad-ad

ನಿರೀಕ್ಷಣಾ ಜಾಮೀನು: ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್ ಜಾರಿ

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

NIA (2)

ಪ್ರವೀಣ್ ನೆಟ್ಟಾರು ಕೇಸ್ : ಸುಳ್ಯ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡಿದ ಎನ್‌ಐಎ

4-shivamogga

ಒಳ ಮೀಸಲಾತಿ ಬೇಗುದಿ ; ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ, ಪ್ರತಿಭಟನೆ

tdy-16

ಆಕಾಂಕ್ಷಾ ದುಬೆ ಬಳಿಕ ಮತ್ತೊಂದು ಘಟನೆ: ನೇಣು ಬಿಗಿದ ಸ್ಥಿತಿಯಲ್ಲಿ ಯುವ ನಟಿ ಪತ್ತೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

ಆರ್ಥಿಕ ಸಂಕಷ್ಟದಲ್ಲಿ ಡಾಯಿಷ್‌ ಬ್ಯಾಂಕ್‌!

ಆರ್ಥಿಕ ಸಂಕಷ್ಟದಲ್ಲಿ ಡಾಯಿಷ್‌ ಬ್ಯಾಂಕ್‌!

ಬೆಲಾರುಸ್‌ನಲ್ಲಿ ವ್ಯೂಹಾತ್ಮಕ ಅಣ್ವಸ್ತ್ರ ನಿಯೋಜನೆ

ಬೆಲಾರುಸ್‌ನಲ್ಲಿ ವ್ಯೂಹಾತ್ಮಕ ಅಣ್ವಸ್ತ್ರ ನಿಯೋಜನೆ

ಆರ್ಥಿಕ ಬಿಕ್ಕಟ್ಟು: ಪಾಕಿಸ್ತಾನ ಹಣದುಬ್ಬರ ಶೇ.47 ಹೆಚ್ಚಳ

ಆರ್ಥಿಕ ಬಿಕ್ಕಟ್ಟು: ಪಾಕಿಸ್ತಾನ ಹಣದುಬ್ಬರ ಶೇ.47 ಹೆಚ್ಚಳ

tdy-6

ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 19 ಮಂದಿ ಮೃತ್ಯು: 4 ದಿನದಲ್ಲಿ 5ನೇ ಘಟನೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

1-weqewqew

ಮಂಗಳೂರಿನಲ್ಲಿ ಗಾಂಜಾ ಜಾಲ; ಪೆಡ್ಲರ್ ಸಹಿತ ನಾಲ್ವರ ಬಂಧನ

joshi

ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ

tdy-19

ಗುಬ್ಬಿ, ತುಮಕೂರು ನಗರ, ಗ್ರಾಮಾಂತರ ಕ್ಷೇತ್ರ ಕಗ್ಗಂಟು

1-fdsad-ad

ನಿರೀಕ್ಷಣಾ ಜಾಮೀನು: ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.