65 ಗಂಟೆ, 3 ದೇಶಗಳು, 25 ಸಭೆ…ಜಾಗತಿಕ ನಾಯಕನಾಗಿ ಭಾರತ
ಜಾಗತಿಕ ನಾಯಕನೆಂಬ ತನ್ನ ಹಕ್ಕನ್ನು ಪಡೆದುಕೊಳ್ಳಲು ಇದು ಸಕಾಲವಾಗಿದೆ
Team Udayavani
-ಡಾ| ಸಮೀರ್ ಕಾಗಲ್ಕರ್, ಆರ್ಥಿಕ ತಜ್ಞ
ಪ್ರಧಾನಿ ಮೋದಿ ನೇತೃತ್ವದ ಭಾರತ ಉಜ್ವಲ ಭವಿಷ್ಯ ಹೊಂದಿದೆ. ಮೇಕ್ ಇನ್ ಇಂಡಿಯಾ, ಪಿಎಲ್ ಐ ಯೋಜನೆಗಳು ಮತ್ತು ಆತ್ಮನಿರ್ಭರ ಭಾರತ ದೃಷ್ಟಿಕೋನವು ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚು ಸ್ವಾವಲಂಬಿಯಾಗಿಸಿದೆ. ಆದರೆ ಮೋದಿ ಅವರು ನಮ್ಮ ದೇಶದ ಭವಿಷ್ಯದ ಅಗತ್ಯಗಳ ಬಗ್ಗೆ ತಿಳಿದಿದ್ದಾರೆ. ಆದ್ದರಿಂದ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಭವಿಷ್ಯದ ಮೊಬೈಲ್ ಟೆಕ್, ಕ್ಲೀನ್ ಟೆಕ್ ಮತ್ತು ಸ್ಮಾರ್ಟ್ ಗ್ರಿಡ್ಗಳಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಉತ್ತಮ ಸಹಭಾಗಿತ್ವ ಇರಲಿದೆ. ಇದರ ಜತೆಯಲ್ಲೇ ನಾವು ಇಲ್ಲಿ ಹಸುರು ಇಂಧನವನ್ನು ಮರೆಯಬಾರದು. ಭಾರತದ ಮುಕ್ತ ವ್ಯಾಪಾರ ಒಪ್ಪಂದವು ಆರ್ಸಿಇಪಿ ತರಹ ಇರದೇ ಎಲ್ಲ ರಾಷ್ಟ್ರಗಳಿಗೂ ಅನುಕೂಲಕರವಾಗಲಿದೆ. ಆರ್ಸಿಇಪಿಯಿಂದ ಹೊರಬರುವುದರ ಮೂಲಕ ಭಾರತ...