ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಕ್ರಾಂತಿ?
ಭಾರತದ ಆರೋಗ್ಯ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತರಲಿದೆ ಎಂದೇ ಹೇಳಲಾಗುತ್ತಿದೆ.
Team Udayavani
ಕಳೆದ ಎರಡು ವರ್ಷಗಳಿಂದ ಕಾಡಿದ ಕೊರೊನಾ ದೇಶದ ಆರೋಗ್ಯ ಸ್ಥಿತಿಯನ್ನು ಬಹಿರಂಗಪಡಿಸಿತು. ಅಲ್ಲದೆ ಆರೋಗ್ಯ ವ್ಯವಸ್ಥೆಯಲ್ಲಿನ ಎಲ್ಲ ಲೋಪಗಳೂ ಇದೇ ಸಂದರ್ಭದಲ್ಲಿ ಬಹಿರಂಗವಾದವು. ಹೀಗಾಗಿಯೇ ಈಗ ಕೇಂದ್ರ ಸರಕಾರ ಕಡೇ ಪಕ್ಷ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಇರಬೇಕು ಎಂಬ ನಿಟ್ಟಿನಲ್ಲಿ ಕಾಲೇಜುಗಳ ಸ್ಥಾಪನೆ ಮಾಡುತ್ತಿದೆ. ಉತ್ಕೃಷ್ಟ ರೀತಿಯ, ಅಂದರೆ ಏಮ್ಸ್ ರೀತಿಯ ಆಸ್ಪತ್ರೆಗಳ ಸ್ಥಾಪನೆಗೂ ಕೈಹಾಕಿದೆ. ಸರಕಾರಿ ದಾಖಲೆಗಳ ಪ್ರಕಾರವೇ ಪ್ರತೀ ಸಾವಿರ ಮಂದಿಗೆ 1.4 ಹಾಸಿಗೆಗಳ ಸೌಲಭ್ಯವಿದೆ. 1,445 ಮಂದಿಗೆ ಒಬ್ಬ ವೈದ್ಯರು ಹಾಗೂ 1,000 ಮಂದಿಗೆ 17 ಮಂದಿ ನರ್ಸ್ ಗಳಿದ್ದಾರೆ...