ಶಾಲಾ-ಕಾಲೇಜುಗಳಲ್ಲಿ ಜ್ಞಾನಾರ್ಜನೆಗಿರಲಿ ಪ್ರಾಶಸ್ತ್ಯ
ಬೇಕಾದ ಹಾಗೆ ಬಳಸಿಕೊಳ್ಳುವ ಹಿತಾಸಕ್ತಿಗಳೇ ದೇಶದ ಪ್ರಗತಿಗೆ ಮಾರಕ.
Team Udayavani
- ವಿದ್ಯಾ ಅಮ್ಮಣ್ಣಾಯ, ಕಾಪು
ಶಿಸ್ತು ಪಾಲನೆ ಹಾಗೂ ಸಮಾನತೆಯ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡು ಬಂದ ನಿಯಮ. ಬೇರೆ ಬೇರೆ ಕಾಲೇಜುಗಳು ವಿದ್ಯಾರ್ಥಿಗಳ ಅನುಕೂಲತೆಗಳನ್ನು ಆಧರಿಸಿಕೊಂಡು ಬೇರೆ ಬೇರೆ ರೀತಿಯ ಸಮವಸ್ತ್ರವನ್ನು ಕಡ್ಡಾಯಗೊಳಿಸುತ್ತವೆ. ಸಮವಸ್ತ್ರ ಬೇಡ ಎಂದು ಯಾವ ವಿದ್ಯಾರ್ಥಿಗಳೂ ಹೇಳುವುದಿಲ್ಲ ಕಾರಣ ಅವರಿಗೂ ಅದರಿಂದ ಅನುಕೂಲತೆಗಳೇ ಹೆಚ್ಚು. ಶ್ರೀಮಂತ ಕುಟುಂಬ ದಲ್ಲಿ ಜನಿಸಿದ ವಿದ್ಯಾರ್ಥಿಗಳು ಧರಿಸುವ ಉಡುಗೆ-ತೊಡುಗೆಗಳು ಇತರ ವಿದ್ಯಾರ್ಥಿಗಳಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು. ಎಷ್ಟೋ ಪೋಷಕರಿಗೆ ಹೆಚ್ಚು ಬಟ್ಟೆಗಳನ್ನು ಕೊಡಿ ಸಲು ಸಾಧ್ಯವಾಗದಿರಬಹುದು. ಇದರಿಂದಾಗಿ ಪೋಷಕರಿಗೆ ಅನಪೇಕ್ಷಿತ ಒತ್ತಡಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲದೆ ಈಗಿನ ಯುವಕ ಯುವತಿಯರು ಧರಿಸುವ ಆಧುನಿಕ...