ಜನಪ್ರಿಯಗೊಳ್ಳುತ್ತಿದೆ ಕ್ಯಾರವನ್ ಪ್ರವಾಸೋದ್ಯಮ; ಏನಿದು ಹೊಸ ಪರಿಕಲ್ಪನೆ
ಸಾಹಸ ರೀತಿಯ ಪ್ರವಾಸಗಳು ಹಾಗೂ ತೀರ್ಥಯಾತ್ರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದು ನೆರವಾಗಲಿದೆ
Team Udayavani
ಜಗತ್ತಿನಾದ್ಯಂತ ಕೊರೊನಾ ಆತಂಕ ಕಡಿಮೆಯಾಗುತ್ತಿರುವಂತೆಯೇ ಪ್ರವಾಸೋದ್ಯಮ ಕ್ಷೇತ್ರ ನಿಧಾನಕ್ಕೆ ಚೇತರಿಕೆ ಕಾಣುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಗಳು ಪ್ರವಾಸಿಗರ ಆಕರ್ಷಣೆಗೆ ಇನ್ನಿಲ್ಲದ ಯೋಜನೆ ಹಾಕಿಕೊಂಡಿವೆ. "ದೇವರ ಸ್ವಂತ ರಾಜ್ಯ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳದ ಪ್ರವಾಸೋದ್ಯಮ ಇಲಾಖೆ "ಕ್ಯಾರವಾನ್ ಪ್ರವಾಸೋದ್ಯಮ' ಎಂಬ ಹೊಸ ಪರಿಕಲ್ಪನೆ ಜಾರಿಗೊಳಿಸಿದೆ. ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಜತೆಗೆ ಹೋದವರ ಗುಂಪಿಗೆ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆರಾಮದಾಯಕವಾಗಿ ಪ್ರವಾಸ ಹಮ್ಮಿಕೊಳ್ಳಬಹುದು...