ಕೋವಿಡ್ 19…ಭಾರತದಲ್ಲಿ ಮತ್ತೆ ನಾಲ್ಕನೇ ಅಲೆ; ಆರೋಗ್ಯ ತಜ್ಞರ ಅಭಿಪ್ರಾಯವೇನು?
ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳಲ್ಲಿ ಮತ್ತೆ ಕೊರೊನಾ ಕಠಿನ ನಿಯಮಗಳು ಜಾರಿಯಾಗುತ್ತಿವೆ.
Team Udayavani
ಕೊರೊನಾ ಮೂರನೇ ಅಲೆ ವೇಳೆ ಕಾಣಿಸಿಕೊಂಡಿದ್ದ ಒಮಿಕ್ರಾನ್ ಸೋಂಕು, ಜನರಲ್ಲಿ ಅಷ್ಟೇನೂ ಬಾಧಿಸಲಿಲ್ಲ. 2021ರ ಮಧ್ಯಭಾಗದಲ್ಲೇ 3ನೇ ಅಲೆ ಹೆಚ್ಚಾಗಿ ಕಾಣಿಸಿಕೊಳ್ಳಬೇಕಾಗಿತ್ತು. ಅಲ್ಲದೆ, ಇದು ಹರಡುವಿಕೆಯಲ್ಲಿ ಮಾತ್ರ ಶಕ್ತಿ ಹೊಂದಿದೆ, ಜನರ ಆರೋಗ್ಯದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂಬ ತಜ್ಞರ ಮಾತು ಜನರಲ್ಲಿ ಧೈರ್ಯ ಮೂಡಿಸಿತ್ತು. ಆದರೂ, ಈ ತಿಂಗಳ ಆರಂಭದಲ್ಲಿ ದಿಲ್ಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೊರೊನಾ ಕುರಿತ ಎಲ್ಲ ನಿಬಂಧನೆಗಳನ್ನು ತೆಗೆದು ಹಾಕಿದ್ದವು...