ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಸಂಚಲನ
ಪ್ರತೀ ರಾಜಕೀಯ ತೀರ್ಮಾನ ಅಥವಾ ತಂತ್ರಗಾರಿಕೆ ರಾಜ್ಯದ ರಾಜಕೀಯ ಚಿತ್ರಣ ಬದಲಿಸಬಹುದು
Team Udayavani
- ಎಸ್.ಲಕ್ಷ್ಮೀ ನಾರಾಯಣ
ರಾಜ್ಯದಲ್ಲಿ ಸಂಪುಟ ಪುನಾರಚನೆಯಾದರೆ ಹಿರಿಯ ಸಚಿವರನ್ನು ಕೈ ಬಿಟ್ಟು ಪಕ್ಷದ ಕೆಲಸಕ್ಕೆ ಹಚ್ಚಿದರೆ ಬಂಡಾಯ ಭುಗಿಲೆದ್ದು ರಾಷ್ಟ್ರಪತಿ ಆಳ್ವಿಕೆ ಬರಬಹುದು ಅಥವಾ ಅವಧಿಗೆ ಮುನ್ನ ಚುನಾವಣೆ ಎದುರಾಗಬಹುದು ಎಂಬ ಮಾತುಗಳೂ ಇವೆ. ಒಂದೊಮ್ಮೆ ಸಂಪುಟ ಪುನಾರಚನೆ ಮಾಡದಿದ್ದರೂ ಬಿಜೆಪಿ ಯಲ್ಲಿನ ಆಂತರಿಕ ಸಂಘರ್ಷ ಸ್ಫೋಟವಾಗಬಹುದು ಎಂಬ ಆತಂಕ ವೂ ಇದೆ. ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆಯೂ ಇದೆ. ಒಂದೊಮ್ಮೆ ಆ ರೀತಿ ಆಗಿದ್ದೇ ಆದರೆ ರಾಜ್ಯ ರಾಜಕಾರಣದ ಸ್ವರೂಪ ಅಥವಾ ದಿಕ್ಕು ಬದಲಾಗಲಿದೆ. ಪಂಚರಾಜ್ಯಗಳ ಚುನಾವಣೆ ಅದರಲ್ಲೂ ಉತ್ತರಪ್ರದೇಶ, ಗೋವಾ, ಪಂಜಾಬ್ ಚುನಾವಣೆಯತ್ತ ರಾಜ್ಯದ ಮೂರೂ ಪಕ್ಷಗಳ ನಾಯಕರು ಚಿತ್ತ ಹರಿಸಿ ಅಲ್ಲಿನ ಫಲಿತಾಂಶ ಏನಾಗಬಹುದು ಎಂದು ಕಾಯುತ್ತಿದ್ದಾರೆ. ಐದು ರಾಜ್ಯಗಳ ಫಲಿತಾಂಶ ಕರ್ನಾಟಕಕ್ಕಷ್ಟೇ ಅಲ್ಲ...