ಆರ್ಥಿಕ ಆಘಾತದ ಭೀತಿಯಲ್ಲಿ ಜಾಗತಿಕ ಸಮುದಾಯ
ಬೆಲೆ ಏರಿಕೆಯ ಹೊಡೆತವನ್ನು ತಾಳಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.
Team Udayavani
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಹಣದುಬ್ಬರದ ವಿಚಾರದಲ್ಲಿ ಈಗಾಗಲೇ ಜನವರಿಯ ಗ್ರಾಹಕ ಸೂಚ್ಯಂಕದ ಪ್ರಮಾಣವು ಶೇ. 6.01 ತಲುಪಿ ಗಡಿರೇಖೆಯನ್ನು ದಾಟಿದೆ. ಸಗಟು ಹಣದುಬ್ಬರವೂ ಕೂಡ ಸತತ 10 ತಿಂಗಳುಗಳಿಂದ ಎರಡಂಕಿ ಮಟ್ಟ ದಾಟಿ ನಿಂತಿದೆ. ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಸರಕಾರ ಮತ್ತು ಆರ್ಬಿಐ ಹೊಂದಾಣಿಕೆ ನೀತಿಯನ್ನು ಅನುಸರಿಸಿದೆ. ಫೆ. 11 ರಂದು ಮುಕ್ತಾಯಗೊಂಡ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ಮತ್ತು ರಿವರ್ಸ್ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲ ಬೆಲೆಯ ದಿಢೀರ್ ಹೆಚ್ಚಳ ಹಣದುಬ್ಬರಕ್ಕೆ ಸವಾಲಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕಾಪಾಡಿಕೊಳ್ಳುವುದು ಕೂಡ ಬಲವಾದ ಸವಾಲು. ಆರ್ಬಿಐ ಹಣದುಬ್ಬರದ ಗಂಭೀರ ಸವಾಲನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆರ್ಬಿಐ ವ್ಯೂಹ ರಚನೆಯ ಯೋಚನೆ ಮತ್ತು ಯೋಜನೆ ರಚನಾತ್ಮಕವಾಗಿರಬೇಕು...