ಕೆನಡಾಗೆ ಟ್ರಕ್ಕರ್ಗಳ ಬಿಸಿ ; ಪ್ರತಿಭಟನೆ ಮೂಲಭೂತ ಹಕ್ಕಲ್ಲವೇ?
ಆಹಾರ, ಆಟೋಮೊಬೈಲ್ ಸೇರಿದಂತೆ ಬಹಳಷ್ಟು ವಲಯಗಳಿಗೆ ಪೂರೈಕೆ ಇಲ್ಲದೇ ಹಾನಿಯಾಗಿದೆ.
Team Udayavani
ಟ್ರಕ್ ಚಾಲಕರ ಬ್ಲ್ಯಾಕೇಡ್ನಿಂದಾಗಿ ಅಮೆರಿಕ-ಕೆನಡಾ ಗಡಿ ಮುಚ್ಚಿರುವುದಷ್ಟೇ ಅಲ್ಲ, ಒಟ್ಟಾವೋ ನಗರವೂ ಬಂಧಿಯಾಗಿದೆ. ಹೀಗಾಗಿ, ಏನಾದರೂ ಮಾಡಿ ಈ ಪ್ರತಿಭಟನೆ ನಿಲ್ಲಿಸಲೇಬೇಕಾಗಿದೆ. ಇದಕ್ಕಾಗಿಯೇ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ರೀತಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ತುರ್ತು ಪರಿಸ್ಥಿತಿ ವೇಳೆ, ಯಾರನ್ನು ಬೇಕಾದರೂ ಹೇಳದೇ ಕೇಳದೆ ಬೇರೆಡೆಗೆ ಸ್ಥಳಾಂತರಿಸಬಹುದು, ಗುಂಪು ಸೇರದಂತೆ ತಡೆಯಬಹುದು, ಜತೆಗೆ ಪ್ರಯಾಣಿಸದಂತೆ ನಿರ್ಬಂಧ ಹೇರಬಹುದು. ಹೀಗಾಗಿಯೇ ಜಸ್ಟಿನ್ ಟ್ರಾಡೋ ಈ ಹಾದಿ ತುಳಿದಿದ್ದಾರೆ. ಅಷ್ಟೇ ಅಲ್ಲ, ಪ್ರತಿಭಟನೆ ನಡೆಸುತ್ತಿರುವವರಿಗೆ ಪೆಟ್ರೋಲ್, ಡೀಸೆಲ್ ಸಿಗದಂತೆ ಮಾಡಲಾಗುತ್ತಿದೆ. ಇವರಿಗೆ ಆಹಾರವೂ ಸಿಗದಂತೆ ಮಾಡಲಾಗಿದೆ. ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಜಗತ್ತಿನ ಬಹುತೇಕ ಕಡೆಗಳಲ್ಲಿ ಕ್ಲೌಡ್ ಫಂಡಿಂಗ್ ಮೂಲಕ ಹಣ ನೀಡುತ್ತಿದ್ದರು...