ನಾಡೋಜ ಕವಿ ನಡೆದ ಕಣಿವೆ ಹಾದಿ; ಅಪ್ಪಟ ದೇಶಿ ಮನೆತನದ ಪ್ರತಿಭೆ
1950ರಲ್ಲಿ ಪ್ರಕಟವಾದ "ಭಾವಜೀವಿ' ಸಂಗ್ರಹಗಳಲ್ಲಿ ಈ ಅಂಶಗಳನ್ನೂ ಗುರುತಿಸಬಹುದು.
Team Udayavani
1949ರಲ್ಲಿ ಪ್ರಕಟವಾದ "ಕಾವ್ಯಾಕ್ಷಿ', 1950ರಲ್ಲಿ ಪ್ರಕಟವಾದ "ಭಾವಜೀವಿ' ಸಂಗ್ರಹಗಳಲ್ಲಿ ಈ ಅಂಶಗಳನ್ನೂ ಗುರುತಿಸಬಹುದು. 1953ರಲ್ಲಿ ಕಣವಿಯವರ ಮೂರನೆಯ ಕವಿತಾ ಸಂಗ್ರಹ "ಆಕಾಶಬುಟ್ಟಿ' ಪ್ರಕಟವಾಯಿತು. ಅಡಿಗರ ನವ್ಯಕಾವ್ಯದ ಪ್ರಭಾವ ಆ ಕಾಲದ ಎಲ್ಲ ಕವಿಗಳನ್ನು ಆವರಿಸಿ ಕೊಂಡಿದ್ದಾಗಲೂ ಅಡಿಗರ ಕಾವ್ಯ ಪ್ರವಾಹದ ಸೆಳೆತ ದಲ್ಲಿ ಕೊಚ್ಚಿ ಹೋಗದಷ್ಟು ಸಂಯಮವನ್ನು ಕಣವಿ ಸಾಧಿಸಿಕೊಂಡಿದ್ದರು. ಹೀಗಾಗಿಯೇ ಭಿನ್ನವಾಗಿ ಕಾವ್ಯ ರಚಿಸಲು ಸಾಧ್ಯವಾಯಿತು.ಕಣವಿಯವರು ಯಾವ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ಧಾಟಿಯಲ್ಲಿ ಬರೆದರು. ದಾಂಪತ್ಯ, ಮಕ್ಕಳು, ನಿಸರ್ಗವನ್ನು ಕುರಿತು, ಅಷ್ಟೇಕೆ, ಪ್ರಾಣಿ-ಪಕ್ಷಿಗಳನ್ನು ಕುರಿತೂ ಅವರು ಕವಿತೆಗಳನ್ನು ಬರೆದಿದ್ದಾರೆ. 1960ರಲ್ಲಿ "ಮಣ್ಣಿನ ಮೆರವಣಿಗೆ' ಪ್ರಕಟವಾಗುವ ವೇಳೆಗೆ ಕಣವಿ ಅವರ ಕಾವ್ಯವ್ಯಕ್ತಿತ್ವ ಸಾಕಷ್ಟು ಮಾಗಿತ್ತು...