ತಾಂತ್ರಿಕವಾಗಿ ಕನ್ನಡ ಸಾಹಿತ್ಯಕ್ಕೆ ಮರುಜೀವ
ಕಸಾಪವನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಬದಲಿಸುವೆ: ಡಾ| ಮಹೇಶ್ ಜೋಶಿ
Team Udayavani
-ದೇವೇಶ ಸೂರಗುಪ್ಪ
ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಕಟ್ಟಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿದ್ದು 1915ರಲ್ಲಿ. ಅಂದಿನ ಅಧಿನಿಯಮಗಳು ಈಗಲೂ ಇವೆ. ಕಾಲ ಕಾಲಕ್ಕೆ ತಕ್ಕಂತೆ ಅವು ಬದಲಾವಣೆ ಆಗಬೇಕು. ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯ ಕೀಯ ಸಾಹಿತ್ಯ, ಕಾನೂನು ಸಾಹಿತ್ಯ ಸೇರಿದಂತೆ ಎಲ್ಲ ಪ್ರಕ ರಣಗಳೂ ಒಂದೇ ಸೂರಿನಡಿ ತಂದು ಅದಕ್ಕೆ ವೈವಿಧ್ಯತೆ ನೀಡುತ್ತೇನೆ. ಇವತ್ತು ಎಂಜಿನಿಯರಿಂಗ್ ಪಠ್ಯಗಳೂ ಕನ್ನಡದಲ್ಲಿ ಬರುತ್ತಿವೆ. ಮುಂದೆ ಮೆಡಿಕಲ್ ಪಠ್ಯ ಕನ್ನಡದಲ್ಲಿ ಸಿಗುತ್ತೆ...