ಅಸ್ಪಷ್ಟ ವಿದೇಶಾಂಗ ನೀತಿಯೇ ಪಾಕ್ಗೆ ಮುಳುವಾಯಿತೇ?
ಭಾರತ ಒಂದು ಸಾರ್ವಭೌಮ ರಾಷ್ಟ್ರ. ಅದು ಅಲಿಪ್ತ ನೀತಿ ಅನುಸರಿಸುತ್ತಿದೆ.
Team Udayavani
ಹಲೀಮತ್ ಸಅದಿಯಾ
1961ರಲ್ಲಿ ಬೆಲ್ಗೆಡ್ನಲ್ಲಿ ಅಲಿಪ್ತ ಚಳವಳಿ ಹುಟ್ಟಿಕೊಂಡಿತು. ಆ ಸಮಯದಲ್ಲಿ "ಅಲಿಪ್ತ ನೀತಿಯು ದುರ್ಬಲರ ಅಸ್ತ್ರ' ಎಂಬ ಟೀಕೆಗಳೂ ಕೇಳಿಬಂದವು. ಆಗ ಭಾರತದ ನಿಲುವನ್ನು ಟೀಕಿಸಿದ ದೇಶಗಳ ಪೈಕಿ ಪಾಕಿಸ್ಥಾನವೂ ಒಂದು. ಪಾಕ್ನ ಮಾಜಿ ಅಧ್ಯಕ್ಷ ಜ. ಅಯ್ಯುಬ್ ಖಾನ್ ಅವರು "ಅಲಿಪ್ತ ನೀತಿಯು ಒಂದು ಬೂಟಾ ಟಿಕೆ. ಬೇಲಿಯ ಮೇಲೆ ಕುಳಿತು, ನಾವು ಆ ಕಡೆಗೂ ಇಲ್ಲ, ಈ ಕಡೆಗೂ ಇಲ್ಲ ಎಂದು ಬೊಬ್ಬಿಡುತ್ತಾ ಎರಡೂ ಕಡೆಯಿಂದ ಲಾಭ ಪಡೆಯುವ ತಂತ್ರ' ಎಂದು ಮೂದಲಿಸಿದ್ದರು. ಎಷ್ಟೇ ವಿರೋಧಗಳು, ಮೂದಲಿಕೆಯ ಮಾತುಗಳು ಕೇಳಿಬಂದರೂ ನೆಹರೂ ಮಾತ್ರ ತಮ್ಮ ನಿರ್ಧಾರದಲ್ಲಿ ಅಚಲವಾಗಿದ್ದರು. ಅಂದಿನಿಂದ ಇಂದಿನವರೆಗೂ ಭಾರತ ತನ್ನ ಈ ನೀತಿಯಲ್ಲಿ ರಾಜಿ ಮಾಡಿಕೊಂಡಿಲ್ಲ. ಶಕ್ತಿಶಾಲಿ ರಾಷ್ಟ್ರವಿರಲೀ ದುರ್ಬಲ ದೇಶವೇ ಇರಲಿ, ಎರಡೂ ದೇಶಗಳ ನಡುವೆ ಸಂಘರ್ಷ ಏರ್ಪಟ್ಟಾಗ ಭಾರತವು ಯಾರನ್ನೂ ಬೆಂಬಲಿಸದೇ ಯಾರನ್ನೂ ವಿರೋಧಿಸದೇ ಈ ತಟಸ್ಥ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಈಗ ನಡೆಯುತ್ತಿರುವ ರಷ್ಯಾ - ಉಕ್ರೇನ್...