ಒಂದೇ ಬುಡದಲ್ಲಿ ಅರಳಿದ ಮೂರು ವಟವೃಕ್ಷ
ಶ್ರೀಕೃಷ್ಣದೇವರಾಯನ ಕಾಲವನ್ನೂ ಸುವರ್ಣ ಯುಗ ಎಂದು ವಿದೇಶಿ ಪ್ರವಾಸಿಗರು ಬಣ್ಣಿಸಿದ್ದು ಕಾಲಾನಂತರ.
Team Udayavani
-ಮಟಪಾಡಿ ಕುಮಾರಸ್ವಾಮಿ
ದೇಶಕ್ಕೆ ಕೆಟ್ಟ ಯೋಗ ಬಂದಾಗ ದಿಲ್ಲಿಯ ಯಮುನಾ ತೀರದಲ್ಲಿ ಯಜ್ಞ ನಡೆಸಿ ಇನ್ನೇನು ಬರುತ್ತಿದೆ ಎಂಬಂತಿದ್ದ ಮಳೆಯನ್ನು ಇಲ್ಲವಾಗಿಸಿದವರು ಎಂಬುದು ಆ ಕಾಲದ ದೊಡ್ಡ ಸುದ್ದಿ. ಇಂತಹವರ ಸಹಯೋಗದಲ್ಲಿ ಬೆಳೆದ ಶ್ರೀ ವಿಶ್ವೇಶತೀರ್ಥರು ಶಾಸ್ತ್ರವಿದ್ಯೆಯನ್ನೂ, ಆಚಾರವನ್ನೂ ಒಂದಿನಿತೂ ಬಿಡದೆ, ಸಾಮಾಜಿಕ ಕಾರ್ಯವನ್ನು ಮನಸಾರೆ ಮಾಡಿದವರು. ಎರಡು ಏಕಾದಶಿ ಬಂದರೂ ನಿರ್ಜಲ ಉಪವಾಸ, ಮಧ್ಯಾಹ್ನದ ಮಹಾಪೂಜೆ ನಡೆಯುವವರೆಗೆ ಒಂದು ಹನಿ ನೀರೂ ಮುಟ್ಟದ, ಇದೇ ವೇಳೆ ಖಾಲಿ ಹೊಟ್ಟೆಯಲ್ಲಿ ಪಾಠ ಪ್ರವಚನವನ್ನು ಮಾಡುತ್ತಿದ್ದವರು. ಈ ಕಾರಣಕ್ಕಾ ಗಿಯೇ ಅವರ ಧ್ವನಿ ಒಡಕಾಗಿತ್ತು ಎನ್ನುತ್ತಾರೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು ಪೋಷಿಸಿ ಬೆಳೆಸಿದವರು. ರಾಜಕೀಯದಲ್ಲಿ ಭಾರೀ ಪ್ರಭಾವಶಾಲಿಯಾದರೂ ಮಠವನ್ನು ಬಂಡವಾಳಶಾಹಿಯನ್ನಾಗಿ ಮಾಡಿಸಿಕೊಂಡವರಲ್ಲ...