ಈ ರಾಶಿಯವರಿಂದು ಪಾಲುಗಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹಾಕುವುದು ಉತ್ತಮವಲ್ಲ
Team Udayavani, Feb 4, 2021, 7:47 AM IST
04-02-2021
ಮೇಷ: ವಿದ್ಯಾರ್ಥಿಗಳಿಗೆ ಮನಸ್ಸಿನ ಎಣಿಕೆಯಂತೆ ಯಶಸ್ಸಿದೆ. ಗುರುವಿನ ಪ್ರತಿಕೂಲತೆಯಿಂದ ವರ್ಗಾವಣೆಯ ಸಾಧ್ಯತೆ ಇರುತ್ತದೆ. ಸ್ಥಾನಭ್ರಂಶ ಯೋಗವಿದೆ. ಕಫ, ವಾತ ದೋಷದಿಂದ ಆರೋಗ್ಯ ಕೆಟ್ಟಿತು.
ವೃಷಭ: ಪಾಲುದಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ಅವಶ್ಯಕವಾಗಿರುತ್ತದೆ. ರಾಜಕೀಯದವರಿಗೆ ನಿರೀಕ್ಷಿತ ರೀತಿಯಲ್ಲಿ ಸ್ಥಾನಮಾನದ ಲಾಭ ತಂದುಕೊಡಲಿದೆ. ನೂತನ ದಂಪತಿಗಳಿಗೆ ಶುಭ ಸಮಾಚಾರ ಇರುತ್ತದೆ.
ಮಿಥುನ: ಸಾಮಾಜಿಕವಾಗಿ ಸ್ಥಾನವರ್ಧನೆಗ ಅವಕಾಶವನ್ನು ಬಳಸಿಕೊಂಡಲ್ಲಿ ನಿಮ್ಮ ದುಡಿಮೆಯು ಸಾರ್ಥಕವಾಗಲಿದೆ. ಪುಣ್ಯಕ್ಷೇತ್ರಗಳ ಸಂದರ್ಶನದ ಯೋಗ ಬಂದೀತು. ಆಕಸ್ಮಿಕ ಧನಲಾಭದ ಯೋಗವಿದೆ.
ಕರ್ಕ: ಪಾಲುಗಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹಾಕುವುದು ಉತ್ತಮವಲ್ಲ. ಆಗಾಗ ಧನಹಾನಿ ಇದ್ದರೂ ಸುಖಭಾಗ್ಯದ ವರ್ಧನೆಯಿಂದ ಫಲವೂ, ಹರ್ಷವೂ ಹೆಚ್ಚಾದೀತು. ಸಂಚಾರ ಯೋಗವಿದೆ.
ಸಿಂಹ: ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನವು, ಗೌರವೂ, ಪುರಸ್ಕಾರವೂ ತೋರಿಬರಲಿದೆ. ಕೆಲಸಕಾರ್ಯಗಳ ಒತ್ತಡದಿಂದ ಮನಸ್ಸಿನ ನೆಮ್ಮದಿ ಕೆಟ್ಟು ಹೋದೀತು. ದೇಹಾಯಾಸವು ತೋರಿಬಂದೀತು. ಧೈರ್ಯದಿಂದಿರಿ.
ಕನ್ಯಾ: ಉಗ್ರ ಕೋಪಿಗಳಾದರೂ ಸಮಾಧಾನಿಗಳಾಗುವರು. ಸಂಕುಚಿತ ಪ್ರವೃತ್ತಿಯವರಾದರೂ ಸಂದರ್ಭ ಬಂದಲ್ಲಿ ಯಾವ ತ್ಯಾಗಕ್ಕೂ ಸಿದ್ಧರು. ನಿಮ್ಮ ಮನಸ್ಸನ್ನು ಸ್ವತ್ಛವಾಗಿಟ್ಟುಕೊಳ್ಳಿರಿ. ಪ್ರಯಾಣ ಕಂಡುಬರಲಿದೆ.
ತುಲಾ: ಬಂದ ಅವಕಾಶವನ್ನು ಸದುಪಯೋಗಿಸಿ ಕೊಂಡಲ್ಲಿ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳ ಬಹುದು. ಅತಿಯಾದ ಆಸೆಗಳನ್ನು ಇಟ್ಟುಕೊಳ್ಳದಿರಿ. ಅನಾವಶ್ಯಕ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರಾದೀತು.
ವೃಶ್ಚಿಕ: ಅಧಿಕಾರಿ ಜನರಿಂದ ಕಷ್ಟನಷ್ಟಗಳು, ಸ್ಥಾನಮಾನಗಳಿಗೆ ಹಾನಿಯಾದೀತು. ಹಿತಶತ್ರುಗಳಿಂದ ಭಾದೆ ತೋರಿಬರಲಿದೆ. ಪ್ರಯತ್ನಬಲದಿಂದಲೇ ಮುಂದುವರಿಯ ಬೇಕಾದೀತು. ಉದ್ಯೋಗ ದಲ್ಲಿ ಭಡ್ತಿ ಕಂಡುಬರಲಿದೆ.
ಧನು: ಸುಖದುಃಖ ಸಮಾನ ರೀತಿಯಲ್ಲಿರುತ್ತದೆ.ಆದರೂ ಪ್ರಯತ್ನಬಲದಿಂದ ಮುಂದುವರಿದು ಬಂದರೆಒಳ್ಳೆಯ ಫಲ ಪ್ರಾಪ್ತಿಯಾಗಲಿದೆ. ಪತ್ನಿಗೂ ಒಳ್ಳೆಯ ಕೆಲಸವು ಸಿಗಬಹುದು. ದ್ವಂದ್ವ ನೀತಿ ಬೇಡ.
ಮಕರ: ಗೃಹದಲ್ಲಿ ಸಂಭ್ರಮಕ್ಕಾಗಿ ಖರ್ಚುವೆಚ್ಚಗಳು ತೋರಿಬಂದಾವು. ಸಂತಾನಭಾಗ್ಯದ ಕುರುಹು ಕಂಡುಬರಲಿದೆ. ವೃಥಾ ತಿರುಗಾಟ ಬೇಡ. ಅಧಿಕ ಖರ್ಚು, ಆರೋಗ್ಯ ಹಾನಿಯಾದೀತು. ಎಚ್ಚರಿಕೆ ವಹಿಸುವುದು.
ಕುಂಭ: ದಾಕ್ಷಿಣ್ಯ ಪ್ರವೃತ್ತಿ ಇದ್ದರೂ ಕಠಿಣ ನಿರ್ಧಾರ ನಿಮ್ಮನ್ನು ಮುಂದು ಕೊಂಡೊಯ್ಯಲಿದೆ. ಸಾಮಾನ್ಯವಾಗಿ ಕೋಪಗೊಳ್ಳುವ ನೀವು ಅದನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಅತೀ ನಿರೀಕ್ಷೆ ಮಾಡದಿರಿ. ಬೇಸರವಾದೀತು.
ಮೀನ: ಆರ್ಥಿಕವಾಗಿ ಹೆಚ್ಚಿನ ಕೊರತೆ ಇಲ್ಲದಿದ್ದರೂ ಅಧಿಕ ಖರ್ಚು ನಿಮಗೆ ದಿಗ್ಭ್ರಮೆ ಹುಟ್ಟಿಸಲಿದೆ. ಆರೋಗ್ಯ ಸ್ಥಿತಿಯಲ್ಲಿ ಏರುಪೇರುಯಿದೆ. ಮನೆಯ ಕೆಲಸಕಾರ್ಯಗಳಲ್ಲಿ ಅಡಚಣೆ ತೋರಿ ಬರುವುದು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ