ದ.ಕ. ಜಿಲ್ಲೆಯಲ್ಲಿ ಶೇ.76.15 ಶೇ. 83ರ ಗುರಿ ತಲುಪಲು ವಿಫಲ
Team Udayavani, May 11, 2023, 6:45 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಮತದಾನ ಒಂದೆರಡು ಸಣ್ಣಪುಟ್ಟ ಘರ್ಷಣೆ ಹೊರತು ಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದೆ. ಸದ್ಯದ ಲೆಕ್ಕಾಚಾರದಂತೆ ಶೇ. 76.15 ರಷ್ಟು ಮತದಾನವಾಗಿದೆ. ಆದರೆ ಗುರುವಾರ ಖಚಿತ ಅಂಕಿಅಂಶಗಳು ಲಭ್ಯವಾಗಲಿದ್ದು, ಕೊಂಚ ಏರುಪೇರಾಗಬಹುದು.
ಕಳೆದ ಬಾರಿಯ(2018) ಶೇ.77.67 ಮತದಾನವನ್ನು ಮೀರಿಸುವ ಚುನಾವಣ ಆಯೋಗದ ಗುರಿ ಈಡೇರಿದಂತೆ ಕಾಣು ತ್ತಿಲ್ಲ. ಪೂರ್ಣ ವಿವರ ಗುರುವಾರ ಲಭ್ಯ ವಾಗಲಿದೆ. 2013ರಲ್ಲಿ ದ.ಕ ಜಿಲ್ಲೆಯಲ್ಲಿ 74.48 ಮತದಾನವಾಗಿದ್ದು, 2018ರಲ್ಲಿ ಉತ್ತಮ ಏರಿಕೆ ಕಂಡಿತ್ತು.
ಮಂಗಳೂರು ನಗರ ದಕ್ಷಿಣ 65.10, ಮಂಗಳೂರು ನಗರ ಉತ್ತರ 72.32, ಮಂಗಳೂರು 77.60, ಮೂಡುಬಿದಿರೆ 76.11, ಬಂಟ್ವಾಳ 80.17, ಬೆಳ್ತಂಗಡಿ 80.80, ಸುಳ್ಯ 78.94 ಹಾಗೂ ಪುತ್ತೂರಿನಲ್ಲಿ 80.02 ರಷ್ಟು ಮತದಾನ ನಡೆದಿದೆ.
ಈ ಬಾರಿ 6,58,761 ಪುರುಷರು, 6,92,803 ಮಹಿಳಾ ಮತದಾರರು ಹಾಗೂ 18 ತƒತೀಯ ಲಿಂಗಿಗಳು ಮತದಾನ ಮಾಡಿದ್ದಾರೆ.
2018ರಲ್ಲಿ ಮಂಗಳೂರು ನಗರ ದಕ್ಷಿಣ 67.47, ಮಂಗಳೂರು ನಗರ ಉತ್ತರ 74.55, ಮಂಗಳೂರು 75.73, ಮೂಡು ಬಿದಿರೆ 75.44, ಬಂಟ್ವಾಳ 81.89, ಬೆಳ್ತಂಗಡಿ 81.40, ಸುಳ್ಯ 83.98 ಹಾಗೂ ಪುತ್ತೂರಿನಲ್ಲಿ 81.70ರಷ್ಟು ಮತದಾನ ನಡೆದಿತ್ತು.
ನಗರದ ಹೊರವಲಯದ ಮೂಡುಶೆಡ್ಡೆ ಯಲ್ಲಿ ಮೂಡುಬಿದಿರೆಯ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲೆಸೆದಿರುವುದು, ಮೂಡುಬಿದಿರೆಯ ಬೆಳುವಾಯಿಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ. ಅದು ಬಿಟ್ಟರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲೆಯಾದ್ಯಂತ ಜನರು ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಮತದಾನದಲ್ಲಿ ಭಾಗಿಯಾದರು.
ಮಳೆಯಿಂದಾಗಿ ತುಸು ವಿಳಂಬ
ಮಧ್ಯಾಹ್ನದ ವೇಳೆ ಜಿಲ್ಲೆಯಲ್ಲಿ ಶೇ.44 ರಷ್ಟು ಮತದಾನ ನಡೆದಿದ್ದರೆ ಸಂಜೆ ವೇಳೆ ಮತ ಹಾಕಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವೇಳೆ ಬಿಸಿಲಿನ ಝಳದಲ್ಲಿ ಮತದಾನದ ಗತಿ ಮಂದವಾಗಿತ್ತು. ಬೆಳ್ತಂಗಡಿ, ಪುತ್ತೂರಿನ ಕೆಲ ಭಾಗಗಳಲ್ಲಿ ಬುಧವಾರ ಸಂಜೆ ವೇಳೆಗೆ ಭಾರಿ ಗುಡುಗು ಸಿಡಿಲು ಸಹಿತ ಮಳೆಯಾಗಿರುವುದರಿಂದ ಕೊನೆ ಕ್ಷಣದ ಮತದಾನಕ್ಕೆ ಅಡ್ಡಿಯಾಯಿತು. ವಿದ್ಯುತ್ ವ್ಯತ್ಯಯದ ಕಾರಣ ಕೆಲ ಮತಗಟ್ಟೆಗಳಲ್ಲಿ ಕತ್ತಲಾವರಿಸಿ ಮತ ಹಾಕಲು ಸಮಸ್ಯೆಯಾಯಿತು.
ಕೊಡಗು: ಶೇ. 74.74 ಮತದಾನ
ಮಡಿಕೇರಿ ಮೇ 10: ಕೊಡಗು ಜಿಲ್ಲೆ ಯಲ್ಲಿ ಶೇ. 74.74ರಷ್ಟು ಮತದಾನವಾಗಿದೆ. ಒಟ್ಟು 4,56,313 ಮತದಾರರಲ್ಲಿ 3,41,046 ಮಂದಿ ಮತದಾನ ಮಾಡಿದ್ದಾರೆ.
ಮಡಿಕೇರಿ ಕ್ಷೇತ್ರದ ಒಟ್ಟು 2,32,148 ಮತದಾರರಲ್ಲಿ 1,75,009 ಮಂದಿ ಮತ ಚಲಾಯಿಸಿದ್ದು, ಶೇ.75.39 ರಷ್ಟು ಮತದಾನವಾಗಿದೆ. ವೀರಾಜಪೇಟೆ ಕ್ಷೇತ್ರದ ಒಟ್ಟು 2,24,165 ಮತದಾರರಲ್ಲಿ 1,66,037 ಮಂದಿ ಮತ ಚಲಾಯಿಸಿದ್ದು, ಶೇ.74.07ರಷ್ಟು ಮತದಾನವಾಗಿದೆ.
ಕಡಿಮೆಯಾಗಲು ಕಾರಣವೇನು?
ಮಂಗಳೂರು ನಗರ ದಕ್ಷಿಣದಲ್ಲಿ ಎಂದಿನಂತೆ ಹೆಚ್ಚಿನ ಎನ್ಆರ್ಐ ಮತದಾರರಿದ್ದಾರೆ. ಅವರೆಲ್ಲರೂ ಅಪಾರ್ಟ್ಮೆಂಟ್ಗಳಲ್ಲಿದ್ದು, ಅಂತಹವರನ್ನು ಮತದಾನಕ್ಕೆ ಸೆಳೆಯುವಲ್ಲಿ ಸೀÌಪ್ ಸಮಿತಿ ಅಷ್ಟಾಗಿ ಯಶಸ್ವಿಯಾದಂತಿಲ್ಲ. ಕಳೆದ ಬಾರಿಗಿಂತಲೂ ಈ ಬಾರಿ ಮತದಾನ ಕಡಿಮೆಯಾಗಿದೆ. ಉಳಿದಂತೆ 2018ರ ರೀತಿಯ ಸರಕಾರ ವಿರೋಧಿ ಅಥವಾ ಪರ ಅಲೆ ಇಲ್ಲದಿರುವುದೂ ಮತದಾನ ಕುಸಿಯಲು ಕಾರಣ ಇರಬಹುದು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ