ಕಾರವಾರದಲ್ಲಿ BJP ಬಂಡಾಯ: ಮಾಜಿ ಶಾಸಕ ಗಂಗಾಧರ ಭಟ್ ನಾಮಪತ್ರ ಸಲ್ಲಿಕೆ
15 ವರ್ಷಗಳಿಂದ ಟಿಕೆಟ್ ಗಾಗಿ ಕಾದೆ....ಮೂಲೆ ಗುಂಪು ಮಾಡಿದರು
Team Udayavani, Apr 17, 2023, 4:22 PM IST
ಕಾರವಾರ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಗಂಗಾಧರ ಭಟ್ ನಾಮಪತ್ರ ಸಲ್ಲಿಸಿದರು. ಅವರ ಬೆಂಬಲಿಗರ ಜೊತೆ ಆಗಮಿಸಿದ ಅವರು ಹಾಲಿ ಶಾಸಕಿ, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾನು 2004 ರಲ್ಲಿ ಕಾರವಾರ ಜೊಯಿಡಾ ಕ್ಷೇತ್ರ ಇದ್ದಾಗ ಮೊದಲ ಬಾರಿಗೆ ಬಿಜೆಪಿಗೆ ಜಯ ತಂದುಕೊಟ್ಟಿದ್ದೆ .ಅಲ್ಲಿಂದ ನನಗೆ ಮೂರು ಸಲ ಟಿಕೆಟ್ ವಂಚಿಸಲಾಗುತ್ತಿದೆ. ಈಗ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಾಗುತ್ತಿಲ್ಲ. ಮೂರು ತಿಂಗಳ ಹಿಂದೆ ಪಕ್ಷದ ಹಿರಿಯರು ನನ್ನ ಕರೆಯಿಸಿಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಿ, ಟಿಕೆಟ್ ಕೊಡ್ತೇವೆ ಅಂದಿದ್ದರು. ನಾನು ಸಹ ಲಕ್ಷಾಂತರ ರೂ.ಪಾರ್ಟಿ ಫಂಡ್ ಕೊಟ್ಟು ಬಂದಿದ್ದೆ. ಈಗ ನೋಡಿದರೆ ನನಗೆ ಟಿಕೆಟ್ ಕೊಟ್ಟಿಲ್ಲ. ಪಕ್ಷದಲ್ಲಿ ಏನಾಗುತ್ತಿದೆ ಎಂಬುದೇ ನನಗೆ ತಿಳಿಯುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಕಾಲದ ಬಿಜೆಪಿ ಈಗ ಇಲ್ಲ ಎಂದರು. ನನ್ನ ನಂಬಿಸಿ, ಹಣ ಪಡೆದು ಟಿಕೆಟ್ ತಪ್ಪಿಸಲಾಗಿದೆ.
ಇದು ನನ್ನ ಕೊನೆಯ ಚುನಾವಣೆ. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಆದರೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಇರುವೆ ಎಂದರು. 2004ರಲ್ಲಿ ನಾನು ಬಿಜೆಪಿ ಶಾಸಕನಾಗಿದ್ದಾಗ ನಮಗೆ ೪೦ ತಿಂಗಳು ಮಾತ್ರ ಅಧಿಕಾರ ಇತ್ತು . ನಂತರ ನಡೆದ ಚುನಾವಣೆಯಲ್ಲಿ ಟಕೆಟ್ ತಪ್ಪಿಸಲಾಯಿತು . ನಂತರ ಮತ್ತೆ ಟಿಕೆಟ್ ಗೆ ಕಾದೆ. ಮೂರು ಚುನಾವಣೆ ಅಂದರೆ 15 ವರ್ಷಗಳಿಂದ ಟಿಕೆಟ್ ಗಾಗಿ ಕಾದೆ. ಆದರೆ ಪಕ್ಷದಲ್ಲಿ ನನ್ನ ಕೆಲಸ ಪಡೆದು ,ಹಣ ಪಡೆದು ಮೂಲೆ ಗುಂಪು ಮಾಡಿದರು ಎಂದು ಮಾಜಿ ಶಾಸಕ ಗಂಗಾಧರ ಭಟ್ ನೋವು ಹೊರ ಹಾಕಿದರು.
ಅವರ ಬೆಂಬಲಿಗರು ಈ ವೇಳೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ