JDS candidate ಚೋಪ್ರಾಗೆ ಸೇರಿದ ರೂ. 42 ಲಕ್ಷ ಮೌಲ್ಯದ ಹೊಲಿಗೆ ಯಂತ್ರಗಳು ವಶ
Team Udayavani, Apr 19, 2023, 10:28 PM IST
ಸವದತ್ತಿ: ಜೆಡಿಎಸ್ ಅಭ್ಯರ್ಥಿ ಸೌರಭ ಆನಂದ ಚೋಪ್ರಾ ಅವರ ಭಾವಚಿತ್ರವಿರುವ ಹೊಲಿಗೆ ಯಂತ್ರಗಳನ್ನು ಸಂಗ್ರಹಿಸಿಟ್ಟ ಗೋದಾಮಿನ ಮೇಲೆ ಕರ್ನಾಟಕ ವಿಧಾನಸಭಾ ಚುನಾವಣೆಯ ಕರ್ತವ್ಯದಲ್ಲಿ ಎಫ್ಎಸ್ಟಿ (ಫ್ಲೈಯಿಂಗ್ ಸ್ಕಾಡ್) ಪೊಲೀಸ್ ಹಾಗೂ ಜಿಎಸ್ಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಇಲ್ಲಿನ ಎಸ್ಬಿಆಯ್ ಎದುರಿಗೆ ಇರುವ ಸಂಭವ ಎಂಟರ ಪ್ರೈಸಿಸ್ನಲ್ಲಿ ಮಂಗಳವಾರ ತಡರಾತ್ರಿಯವರೆಗೆ ದಾಳಿ ನಡೆಸಿ ಸುಮಾರು ರೂ. 42 ಲಕ್ಷ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ರೂ. 23.84 ಲಕ್ಷದ ಮೌಲ್ಯದ 1012 ಹೊಲಿಗೆ ಯಂತ್ರ, ರೂ. 4.56 ಲಕ್ಷ ಮೌಲ್ಯದ 1200 ಹೊಲಿಗೆ ಯಂತ್ರಗಳ ಪೋಷ್ಟಕಗಳು, ರೂ. 11.27 ಲಕ್ಷ ಮೌಲ್ಯದ ಕಬ್ಬಿದ ಸ್ಟ್ಯಾಂಡ, ರೂ. 3.24 ಲಕ್ಷ ಬೆಲೆಯುಳ್ಳ 2160 ಟಿಫಿನ್ ಬಾಕ್ಸ್ ಸೇರಿ ಒಟ್ಟು 42.92 ಲಕ್ಷ ರೂಪಾಯಿಯ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡಲು ದಾಸ್ತಾನು ಮಾಡಿದ ಹೊಲಿಗೆ ಯಂತ್ರ, ಕಬ್ಬಿಣದ ಸ್ಟ್ಯಾಂಡ ಹಾಗೂ ಟಿಫಿನ ಬಾಕ್ಸಗಳ ಕುರಿತು ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್ಸಿ ನಂ. 06/2023 ಕಲಂ:171(ಇ), 171(ಎಫ್) ಆಯ್ಪಿಸಿ ಸೆಕ್ಷನ್ ಆಧಾರಿತ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
Belgavi; ಪ್ರಯಾಣಿಕರ ಲಗೇಜನ್ನು ಬೆಂಗಳೂರಿನಲ್ಲೇ ಬಿಟ್ಟು ಬಂದ ವಿಮಾನ!
Belgavi;ಗೋ ಸಾಗಾಟ ಲಾರಿ ತಡೆದ ಹಿಂದೂ ಕಾರ್ಯಕರ್ತರು: ಬಿಗುವಿನ ವಾತಾವರಣ
Belagavi; ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಯತ್ನಿಸಿದ ದಂಪತಿ ಬಂಧನ
MUST WATCH
ಹೊಸ ಸೇರ್ಪಡೆ
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ