ಯೋಗ ಶಿಕ್ಷಣ ಬದುಕಿಗೊಂದು ದಾರಿ


Team Udayavani, Mar 18, 2020, 4:22 AM IST

ಯೋಗ ಶಿಕ್ಷಣ ಬದುಕಿಗೊಂದು ದಾರಿ

ಯೋಗ ಕೇವಲ ಆಚರಣೆಯಲ್ಲ. ಅದು ಬದುಕನ್ನು ಕಟ್ಟಿಕೊಡುವ ಕ್ಷೇತ್ರವೂ ಹೌದು. ಯೋಗ ಶಿಕ್ಷಣವು ಇಂದು ವೃತ್ತಿಶಿಕ್ಷಣಗಳ ಸಾಲಿನೊಂದಿಗೆ ಗುರುತಿಸಿಕೊಂಡಿದೆ.

ಯೋಗದ ಕುರಿತು ದೇಶ-ವಿದೇಶಗಳಲ್ಲಿ ಭರವಸೆ-ವಿಶ್ವಾಸಗಳು ಹೆಚ್ಚಾಗಿವೆ. ಈ ಕಾರಣಕ್ಕೆ ಯೋಗದ ಕಲಿಕೆಯೂ ಮೌಲ್ಯವನ್ನು ಸಂಪಾದಿ ಸಿಕೊಳ್ಳುತ್ತಿವೆ. ಸರ್ಟಿಫಿಕೇಟ್‌ ಕೋರ್ಸ್‌ಗಳಿಂದ ಹಿಡಿದು ಪಿಎಚ್‌.ಡಿ. ವರೆಗೂ ಯೋಗವನ್ನು ಹೇಳಿಕೊಡುವ ಕಾಲೇಜುಗಳಿವೆ. ಯೋಗದಲ್ಲಿ ಕೋರ್ಸ್‌ ಮಾಡಿರುವವರಿಗೆ ಬೇಡಿಕೆಯೂ ಇದೆ.

ಖನ್ನತೆ, ಏರುಪೇರಿನ ರಕ್ತದೊತ್ತಡ, ಬೆನ್ನು ನೋವು, ಏಕಾಗ್ರತೆಯ ಕೊರತೆ, ತೂಕ ಹೆಚ್ಚಳ, ಸಕ್ಕರೆ ಕಾಯಿಲೆ, ಥೈರಾಯ್ಡ, ಪಿಸಿಓಡಿ, ಮಂಡಿ ನೋವು, ನಿದ್ರಾಹೀನತೆಗಳಿಂದ ನಲುಗಿ ಹೋಗುತ್ತಿರುವವರಿಗೆ ಯೋಗ ಸಂಜೀವಿನಿಯಾಗಿದೆ. ರಾಜಯೋಗ, ಭಕ್ತಿ ಯೋಗ, ಕರ್ಮಯೋಗ, ಜ್ಞಾನ ಯೋಗಗಳ ಜತೆ ಇಂದಿನ ಕಾಲದ ಮುಖ ಯೋಗ, ನಗೆ ಯೋಗ, ಮ್ಯೂಸಿಕ್‌ ಯೋಗ, ನೃತ್ಯ ಯೋಗ, ಪರ್ವ ಯೋಗಗಳೂ ಸೇರಿಕೊಂಡು ಯೋಗ ಎಂಬ ಕಾನ್ಸೆಫ್ಟ್ ಗೆ ಬೇಡಿಕೆ ಹೆಚ್ಚಾಗಿವೆ.

ಯೋಗದ ಮಹತ್ವವನ್ನರಿತ ಅನೇಕ ಶಿಕ್ಷಣ ಸಂಸ್ಥೆಗಳು ತಮ್ಮ ಕಾಲೇಜುಗಳಲ್ಲಿ ಸರಕಾರಗಳಿಂದ ಅಂಗೀಕೃತವಾದ ಯೋಗದ ಹಲವು ಹಂತ-ಬಗೆಯ ಕೋರ್ಸ್‌ಳನ್ನೂ ಪ್ರಾರಂಭಿಸಿವೆ.

ಉದ್ಯೋಗಗಳೂ ಇವೆ
ಯೋಗ ತರಬೇತುದಾರ, ಯೋಗ ಶಿಕ್ಷಕರಾಗಿ ಹೋಗಬಹುದು. ಪ್ರಸ್ತುತ ಯೋಗ ಥೆರಪಿಸ್ಟ್‌ , ಯೋಗ ಆ್ಯಂಡ್‌ ನ್ಯಾಚುರೋಪತಿ ರಿಸರ್ಚ್‌ ಆಫೀಸರ್‌, ಯೋಗ ಏರೊಬಿಕ್‌ ಇನ್‌ಸ್ಪೆಕ್ಟರ್‌, ಪರ್ಸನಲ್‌ ಯೋಗ ಟ್ರೆನರ್‌ ಅಂತೆಲ್ಲ ಶುರುವಾಗಿದೆ. ಬಹುತೇಕ ಖಾಸಗಿ – ಸರಕಾರಿ ಶಾಲೆಗಳು, ಜಿಮ್‌ಗಳು, ಚಿಕಿತ್ಸಾ ಕೇಂದ್ರಗಳು, ಆಸ್ಪತ್ರೆಗಳಿಗೆ ಯೋಗ ಪದವೀಧರರು ಬೇಕಾಗಿ¨ªಾರೆ. ರೆಸಾರ್ಟ್‌ಗಳು, ಹೌಸಿಂಗ್‌ ಸೊಸೈಟಿಗಳು, ಸರಕಾರಿ ಸ್ವಾಮ್ಯದ ಕ್ರೀಡಾ ಶಾಖೆಗಳು, ಕ್ರೀಡಾ ತರಬೇತಿ ಸಂಸ್ಥೆಗಳು, ಐಟಿ ಕಂಪೆನಿಗಳು, ಆರ್ಮಿ ಪಬ್ಲಿಕ್‌ ಸ್ಕೂಲ್‌ಗ‌ಳಿಗೂ ಇವರ ಅವಶ್ಯಕತೆ ಇದೆ.

ಸರಕಾರದ ಸಹಾಯ
ಕೇಂದ್ರ ಸರಕಾರ ಸ್ಥಾಪಿಸಿರುವ “ಕ್ವಾಲಿಟಿ ಕೌನ್ಸಿಲ್‌ ಆಫ್ ಇಂಡಿಯಾ’ – ಸಂಸ್ಥೆಯು ಯೋಗ ತರಬೇತುದಾರರಿಗೆ ನಾಲ್ಕು ಹಂತದ ಶ್ರೇಣಿಗಳಾದ ತರಬೇತುದಾರ, ಶಿಕ್ಷಕ, ಗುರು ಹಾಗೂ ಆಚಾರ್ಯ ಎಂಬ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಇವರು ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತದ ವಿದೇಶಾಂಗ ಇಲಾಖೆಯ ದೂತಾವಾಸದಲ್ಲಿ ಕೆಲಸ ನಿರ್ವಹಿಸಲು ಅರ್ಹರಾಗಿರುತ್ತಾರೆ.

ಪದವಿ ಕೋರ್ಸ್‌ಗಳು
ಬ್ಯಾಚುಲರ್‌ ಆಫ್ ಆರ್ಟ್ಸ್ ಇನ್‌ ಯೋಗ
ಆ್ಯಂಡ್‌ ನ್ಯಾಚುರೋಪತಿ, ಬ್ಯಾಚುಲರ್‌ ಆಫ್ ಆರ್ಟ್ಸ್
ಇನ್‌ ಯೋಗ ಶಾಸ್ತ್ರ , ಬಿ.ಎಸ್ಸಿ ಒಂದರಲ್ಲೇ, ಬಿ.ಎಸ್ಸಿ ಇನ್‌ ಯೋಗ ಆ್ಯಂಡ್‌ ಎಜುಕೇಶನ್‌, ಯೋಗ ಆ್ಯಂಡ್‌ ಮ್ಯಾನೇಜ್ಮೆಂಟ್‌, ಯೋಗ ಆ್ಯಂಡ್‌ ಕಾನ್ಶಿಯಸ್‌ನೆಸ್‌ ಅಂತ ಮೂರು ವಿಧದ ಅಧ್ಯಯನಗಳಿವೆ.

ಸ್ನಾತಕೋತ್ತರ
ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ಹೆಲ್ತ್‌
ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ನ್ಯಾಚುರೋಪತಿ,
ಎಂ.ಎಸ್ಸಿ. ಇನ್‌ ಯೋಗಿಕ್‌ ಸೈನ್ಸ್‌ ಆ್ಯಂಡ್‌ ಹೋಲಿಸ್ಟಿಕ್‌ ಹೆಲ್ತ್‌, ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ಮ್ಯಾನೇಜ್ಮೆಂಟ್‌ ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ಜರ್ನಲಿಸಂ, ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ಕೌನ್ಸೆಲಿಂಗ್‌ ಸರ್ಟಿಫಿಕೇಟ್‌ ಕೋರ್ಸ್‌ಗಳಿವೆ.

ಕೋರ್ಸ್‌ ಎಲ್ಲೆಲ್ಲಿ ಲಭ್ಯ?
ಬೆಳಗಾವಿಯ ಕೆಎಲ್ಇ ಕಾಲೇಜ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌, ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯ, ಮೈಸೂರಿನ ಸಂಮ್ಯಕ್‌, ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮೂಡಬಿದಿರೆಯ ಆಳ್ವಾಸ್‌ ಕಾಲೇಜ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗ, ಉಜಿರೆಯ ಎಸ್‌ಡಿಎಂ ಕಾಲೇಜ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌, ಪುಣೆಯ ಕೈವಲ್ಯಧಾಮ, ಹೆಬಾrಳದ ವಿವೇಕಾನಂದ ಸ್ಕೂಲ್‌ ಆಫ್ ಯೋಗ, ದಿಲ್ಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಯೋಗ, ಮುಂಬಯಿಯ ಸಾಂತಾಕ್ರೂಜ್‌ ಬಳಿಯ ಯೋಗ ಇನ್‌ಸ್ಟಿಟ್ಯೂಟ್‌, ಹರಿ ದ್ವಾರದ ದೇವ ಸಂಸ್ಕೃತಿ ವಿಶ್ವವಿದ್ಯಾಲಯ, ಭುವನೇಶ್ವರದ ಇನ್‌ಸ್ಟಿಟ್ಯೂಟ್‌ ಆಫ್ ಯೋಗಿಕ್‌ ಸೈನ್ಸ್‌ ಆ್ಯಂಡ್‌ ರಿಸ ರ್ಚ್‌ ಮತ್ತು ಗುಜರಾತ್‌ಗಳಲ್ಲಿ ಯೋಗದ ಹಲವು ಕೋರ್ಸ್‌ಗಳಿವೆ.

ಯಾವ್ಯಾವ ಕೋರ್ಸ್‌ಗಳು ಲಭ್ಯ?
ಸರ್ಟಿಫಿಕೇಟ್‌ ಕೋರ್ಸ್‌ಗಳಿಂದ ಹಿಡಿದು ಪಿಎಚ್‌.ಡಿ.ವರೆಗೂ ಯೋಗವನ್ನು ಹೇಳಿಕೊಡಲಾಗುತ್ತಿದೆ. ಎಸೆಸ್ಸೆಲ್ಸಿ, ಪಿಯುಸಿ ಅನಂತರ – ಫೌಂಡೇಶನ್‌ ಕೋರ್ಸ್‌ ಇನ್‌ ಯೋಗ, ಪಿಜಿ ಡಿಪ್ಲೊಮಾ ಇನ್‌ ಯೋಗ ಆ್ಯಂಡ್‌ ಹೋಲಿಸ್ಟಿಕ್‌ ಹೆಲ್ತ್‌, ಪಿಜಿ ಡಿಪ್ಲೊಮಾ ಇನ್‌ ಯೋಗ ಥೆರಪಿ, ಪಿಜಿ ಡಿಪ್ಲೊಮಾ ಇನ್‌ ಯೋಗ ನ್ಯಾಚುರೋಪತಿ, ಯೋಗಿಕ್‌ ಸೈನ್ಸ್‌, ಯೋಗ ಆ್ಯಂಡ್‌ ಆಲ್ಟರ್‌ನೆಟ್‌ ಥೆರಪಿ ಇದೆ. ಇನ್ನು ಸರ್ಟಿಫಿಕೆಟ್‌ ಕೋರ್ಸುಗಳಲ್ಲಿ ಅಡ್ವಾನ್ಸ್‌ಡ್‌ ಕೋರ್ಸ್‌ ಇನ್‌ ಯೋಗ ಡಿಪ್ಲೊಮಾ ಕೋರ್ಸ್‌ ಇನ್‌ ಯೋಗ ಎಜುಕೇಶನ್‌, ಯೋಗ ಟೀಚರ್‌ ಟ್ರೈನಿಂಗ್‌, ಯೋಗ ಆ್ಯಂಡ್‌ ಹೆಲ್ತ್‌ ಎಜುಕೇಶನ್‌ಗಳಿವೆ.

  ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.