ಹತ್ತಿ ಉಡುಗೆ ಫ್ಯಾಶನ್‌ಗೂ ಸೈ


Team Udayavani, Apr 29, 2019, 12:35 PM IST

Cotton

ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ, ಉಡುಗೆ- ತೊಡುಗೆಯೂ ಬದಲಾಗುತ್ತಿರ ಬೇಕು. ಚಳಿಗೊಂದು, ಮಳೆ ಗೊಂದು ಎಂಬಂತೆ ಬೇಸಗೆಗೂಂದು ಉಡುಗೆಯಬೇಕು. ಬೇಸಗೆಯ ಬಿಸಿಯನ್ನು ತಡೆಯಲು, ದೇಹವನ್ನು ಕೂಲ್‌ ಕೂಲ್‌ ಆಗಿರಿಸಲು ಮೃದು ವಾದ ಉಡುಪು ಬೇಕೇ ಬೇಕು. ಹೀಗಾಗಿಯೇ ಬೇಸಗೆ ಬಂದಂತೆ ಹತ್ತಿ ಬಟ್ಟೆ ಗಳಿಗೆ ಬೇಡಿಕೆ ಸಹಜವಾಗಿ ಹೆಚ್ಚಾಗುತ್ತದೆ.

ಪಾಲಿಸ್ಟರ್‌ ಮತ್ತು ರೇಯಾನ್‌ಗಿಂತ ಕಾಟನ್‌ ಬಟ್ಟೆ ಗಳು ಬೇಸಗೆಗೆ ಸೂಕ್ತ. ಬೆವರನ್ನು ಬೇಗನೆ ಹೀರಿ, ಬೇಗನೆ ಒಣವ ಕಾರಣದಿಂದಲೇ ಇದು ಎಲ್ಲರ ಅಚ್ಚು ಮೆಚ್ಚಿನ ದಿರಿಸು.

ಹಿಂದಿನ ಕಾಲದಲ್ಲಿ ಹೆಚ್ಚಿನವರು ಹತ್ತಿಯ ಬಟ್ಟೆಗಳನ್ನೇ ಅವಲಂಬಿತರಾಗಿದ್ದರು. ಆದರೆ ಆಧುನಿಕ ವಸ್ತ್ರ ಭರಾಟೆಯಲ್ಲಿ ಹತ್ತಿ ಬಟ್ಟೆಗಳು ಕೊಂಚ ಮೂಲೆ ಗುಂಪಾಯಿತು. ಆದರೆ ಪ್ರತಿ ಬಾರಿಯಂತೆ ಬೇಸಗೆ ಆರಂಭವಾಗುತ್ತಿದ್ದಂತೆ ಎಲ್ಲರೂ ಮತ್ತೆ ಹತ್ತಿ ಬಟ್ಟೆಯ ಜಪ ಮಾಡ ತೊಡಗುತ್ತಾರೆ.

ಬಲು ಸೊಗಸು
ತುಂಬು ತೋಳಿನ ಹತ್ತಿಯ ಸಡಿಲವಾದ ತೆಳು ಬಟ್ಟೆಗಳು ಸೂರ್ಯನ ಬಿಸಿಲಿನ ಶಾಖದಿಂದ ನಮ್ಮ ದೇಹವನ್ನು ರಕ್ಷಿ ಸುತ್ತದೆ. ನಮ್ಮ ದೇಹಕ್ಕೆ ಒಪ್ಪುವ ಮತ್ತು ಉತ್ತಮ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡುವುದು ಅತಿ ಮುಖ್ಯ. ಜರಿ ಬಟ್ಟೆಗಳು ಬೇಸಗೆಗೆ ಸೂಕ್ತವಲ್ಲ.  ಇದರಿಂದ ಹೆಚ್ಚು ಸೆಕೆ ಉಂಟಾಗುತ್ತದೆ. ಸೀರೆ, ಚೂಡಿದಾರ್‌ ಯಾವುದೇ ಇರಲಿ ಹತ್ತಿ ಬಟ್ಟೆಯೇ ಬಲು ಸೊಗಸು.

ತಿಳಿ ಬಣ್ಣವಿರಲಿ
ಗಾಢ ಬಣ್ಣದ ಉಡುಪುಗಳು ಬಿಸಿಲನ್ನು ಹೆಚ್ಚು ಹೀರಿಕೊಳ್ಳುತ್ತವೆ. ಹೀಗಾಗಿ ಬೇಸಗೆಯಲ್ಲಿ ಹೆಚ್ಚಾಗಿ ತಿಳಿ ಬಣ್ಣದ ಉಡುಪನ್ನು ಧರಿಸಿ. ಬಿಳಿ ಬಣ್ಣದ ಉಡುಪು ಹೆಚ್ಚು ಬಿಸಿಲನ್ನು ಹೀರಿಕೊಳ್ಳುವುದಿಲ್ಲ. ಹೀಗಾಗಿ ಬಿಳಿ, ತಿಳಿ ಗುಲಾಬಿ, ತಿಳಿ ಹಳದಿಯಂತಹ ಬಣ್ಣಗಳ ಬಟ್ಟೆಗಳನ್ನೇ ಆಯ್ದುಕೊಳ್ಳಿ. ಕಾಟನ್‌ ಬಟ್ಟೆಗಳೂ ನಾನಾ ಚಿತ್ತಾಕರ್ಷಕ ಡಿಸೈನ್‌ನಿಂದ ಇತ್ತೀಚೆಗೆ ಎಲ್ಲರ ಮನ ಸೆಳೆಯುತ್ತಿದೆ. ಧೋತಿ, ಪೈಜಾಮ, ಪ್ಯಾಂಟ್‌, ಟೀಶರ್ಟ್‌ ಇವೆಲ್ಲ ಪುರುಷರ ಆಯ್ಕೆಯಾದರೆ, ಹರೆಮ್‌, ಜೋಧ್‌ ಪುರಿಯಂತಹ ಪ್ಯಾಂಟ್‌ಗಳೊಂದಿಗೆ ಮಹಿಳೆಯರು ಕುರ್ತಾ, ಟೀಶರ್ಟ್ ಇಷ್ಟಪಡುತ್ತಾರೆ.

ಉದ್ದನೆಯ ಕಾಟನ್‌ ಸ್ಕರ್ಟ್‌ಗಳು ಬೇಸಗೆಗೆ ಧರಿಸಲು ಅನುಕೂಲಕರ ಮಾತ್ರ ವಲ್ಲ ಸ್ಟೈಲಿಶ್‌ ಆಗಿಯೂ ಕಾಣುತ್ತದೆ. ಟ್ರೌಶರ್‌, ಚೂಡಿದಾರ ಕೂಡ ಹಿತ ಕೊಡುತ್ತವೆ. ಲಕ್ನೋ ಕಲಾ ಕೌಶಲದ ಹತ್ತಿಯ ಚೂಡಿದಾರಗಳು ಭಾರತದ ಬೇಸಗೆಯ ದಿರಿಸಿಗಳೆಂದೇ ಪ್ರಸಿದ್ಧವಾಗಿವೆ. ಮನಸೆಳೆಯುವ ಕುಸುರಿ ಕೆಲಸವನ್ನು ಹೊಂದಿರುವ ಅತ್ಯಾಕರ್ಷಕವಾದ ಹತ್ತಿಯ ಗೌನ್‌ಗಳು ಶುಭಸ ಮಾರಂಭಗಳಿಗೆ ಹೆಚ್ಚು ಸೂಕ್ತವಾಗಿ ಹೊಂದಿಕೆಯಾಗುತ್ತದೆ.

ಬೇಡಿಕೆ ಅಧಿಕ
ಬೇಸಗೆ ಬಂತೆಂದರೆ ಹತ್ತಿ ಬಟ್ಟೆಗಳ ಉದ್ಯಮ ಚುರುಗೊಳ್ಳುತ್ತದೆ. ಬೇಡಿಕೆ ಹೆಚ್ಚಾಗುವುದರಿಂದ ಉಡುಪುಗಳೂ ಕೊಂಚ ದುಬಾರಿಯಾಗುತ್ತದೆ. ಹಿಂದೆ ಕೈಮಗ್ಗ ಅಥವಾ ಚರಕದಿಂದ ತಯಾರಿಸುತ್ತಿದ್ದ ಬಟ್ಟೆಗಳು ಇಂದು ಯಂತ್ರದ ಮೂಲಕ ಉತ್ಪಾದಿಸಲ್ಪಡುತ್ತಿದೆ. ಮಾತ್ರವಲ್ಲದೆ ವಿದೇಶಗಳಿಗೆ ರಫ್ತಾಗುತ್ತಿದೆ.

ಖಾದಿ ಚಮತಾರ್‌
ಬೇಸಗೆಗೆ ಒಪ್ಪುವ ದಿರಿಸಿನಲ್ಲಿ ಖಾದಿಯೂ ಒಂದು. ಇದರಲ್ಲೂ ಪುರುಷರು, ಸ್ತ್ರೀಯರಿಗಾಗಿ ಹಲವು ಆಯ್ಕೆಗಳಿವೆ. ಅತ್ಯಂತ ಸರಳ ಲುಕ್‌ ನೀಡುವ ಖಾದಿ ದಿರಿಸುಗಳು ಈಗಿನ ಟ್ರೆಂಡ್‌ ಕೂಡ ಹೌದು.

ಭರತ್‌ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.