ಪ್ರಕೃತಿ ಸೌಂದರ್ಯದ ಖನಿ ಕೋಡಿಬೇಂಗ್ರೆ


Team Udayavani, Mar 19, 2020, 5:05 AM IST

kodibengre

ಒಂದು ಕಡೆ ಶಾಂತವಾಗಿ ಹರಿಯುವ ನದಿ, ಇನ್ನೊಂದೆಡೆ ಸಮುದ್ರ. ನಡುವೆ ತೆಂಗಿನ ತೋಟದೊಳಗೆ ಮನೆಗಳ ಸಾಲು. ಅದರ ಮಧ್ಯದಲ್ಲಿ ಕಾಂಕ್ರೀಟ್‌ ರೋಡ್‌. ಇದು ಉಡುಪಿಯ ಕೋಡಿಬೇಂಗ್ರೆ ಬೀಚ್‌ನ ಸೌಂದರ್ಯ ವೈಶಿಷ್ಟ್ಯ. ಉಡುಪಿ ಜಿಲ್ಲೆಯಲ್ಲಿ ಹಲವು ಬೀಚ್‌ಗಳಿವೆ. ಕಾಪು, ಮಲ್ಪೆ ಮಟ್ಟು ಮುಂತಾದ ಬೀಚ್‌ಗಳು ಸಾಮಾನ್ಯವಾಗಿ ತಿಳಿದಿರುವ ಬೀಚ್‌ಗಳೇ. ಆದರೆ ಅಷ್ಟೊಂದು ಜನಪ್ರಿಯತೆ ಹೊಂದಿರದ ಕೋಡಿಬೇಂಗ್ರೆ ಬೀಚ್‌ಗೆ ಒಮ್ಮೆ ಭೇಟಿ ನೀಡಲೇಬೇಕು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲಲೇಬೇಕು.

ಈ ಕೋಡಿಬೇಂಗ್ರೆ ಬೀಚ್‌ ಸುವರ್ಣ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮ ಸ್ಥಳವಾಗಿದೆ. ನದಿಯೂ ಕಡಲೂ ಶಾಂತವಾಗಿರುವ ಈ ರಮಣೀಯ, ಸುಂದರ ಪ್ರದೇಶದಲ್ಲಿ ಮಧ್ಯದಲ್ಲಿರುವ ಕಾಂಕ್ರೀಟ್‌ ರೋಡಿನಲ್ಲಿ ಕಾಲು ನಡಿಗೆಯಲ್ಲಿ ಸಾಗಿ ಕೋಡಿಬೇಂಗ್ರೆ ಸಂಗಮ ಸ್ಥಳಕ್ಕೆ ಹೋಗುವುದೇ ಒಂದು ರೋಮಾಂಚನ.

ಏಕಾಂತ ಬಯಸುವವರಿಗೆ ಈ ಬೀಚ್‌ ಉತ್ತಮ ಸ್ಥಳ. ಅಷ್ಟೊಂದು ಸದ್ದುಗದ್ದಲ ಇಲ್ಲದ ಈ ಪ್ರದೇಶದಲ್ಲಿ ಹಕ್ಕಿಗಳ ಚಿಲಿಪಿಲಿ, ದೂರದಲ್ಲಿ ಬಲೆ ಬೀಸುತ್ತಿರುವ ಮೀನುಗಾರರು, ಇನ್ನೊಂದು ಕಡೆಯಲ್ಲಿ ಏಕಾಗ್ರತೆಯಿಂದ ಮೀನಿಗೆ ಗಾಳ ಹಾಕುವ ಮಂದಿ, ಹಸುರು ಪರಿಸರ- ಇವೆಲ್ಲ ಬದುಕಿಗೆ ಜೀವನೋಲ್ಲಾಸವನ್ನು ತಂದು ಕೊಡುತ್ತದೆ. ಇನ್ನೂ ಮಧ್ಯಾಹ್ನದ ಹೊತ್ತಿಗೆ ಸಮಯವನ್ನು ಶಾಂತಿಯುತವಾಗಿ ಕಳೆಯಲು ಇಷ್ಟಪಡುವುದಾದರೆ ಈ ಸ್ಥಳ ಅದ್ಭುತವಾಗಿದೆ.

ಮಂಗಳೂರಿನಿಂದ ಉಡುಪಿಗೆ ಬಂದು ಅಲ್ಲಿನದ ಕೋಡಿಬೇಂಗ್ರೆ ಬೀಚ್‌ ಉಡುಪಿಯಿಂದ 18 ಕಿ.ಮೀ. ದೂರದಲ್ಲಿದೆ. ಖಾಸಗಿ ವಾಹನದಲ್ಲಾದರೆ ಉಡುಪಿಯಿಂದ ಅರ್ಧ ಗಂಟೆ ಪ್ರಯಾಣ. ಬಸ್‌ಗಳು ಕೂಡ ಇವೆ. ಮಲ್ಪೆ ಬೀಚ್‌ನಿಂದ ಹೋಗುವುದಾರೆ 10 ಕಿ.ಮೀ. ದೂರವಿದೆ.

ಬೋಟ್‌ ಹೌಸ್‌
ಇನ್ನು ನೀವು ಬೋಟ್‌ ಹೌಸ್‌ನಲ್ಲಿ ಸಂಚರಿಸಲು ಕೇರಳಕ್ಕೆ ಹೋಗಬೇಕಾಗಿಲ್ಲ. ಇಲ್ಲಿ ಅದಕ್ಕೆ ವ್ಯವಸ್ಥೆ ಇದೆ. ಬೋಟ್‌ ಹೌಸ್‌ನಲ್ಲಿ ಪ್ರಯಾಣಿಸಿ ನದಿ ಮಧ್ಯದಲ್ಲಿರುವ ಕುದ್ರು (ದ್ವೀಪ) ಗಳನ್ನು ನೋಡಬಹುದು. ನೀವು ಒಂದು ವೇಳೆ ಮೀನು ಪ್ರಿಯರಾಗಿದ್ದರೆ ಇಲ್ಲಿ ನಿಮಗೆ ವಿವಿಧ ಬಗೆಯ ರುಚಿಕರ ಮೀನಿನ ಖಾದ್ಯಗಳು ಸವಿಯಲು ಲಭ್ಯ. ಹತ್ತಿರದಲ್ಲಿ ಕೆಮ್ಮನ್ನು ಹ್ಯಾಂಗಿಂಗ್‌ ಬ್ರಿಜ್‌ ಇದೆ. ಇದು ಕೂಡ ಪ್ರಕೃತಿ ಮಧ್ಯದಲ್ಲಿ ಸುಂದರವಾಗಿ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಪ್ರಿ ವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್‌ ಪೋಟೋಗ್ರಫಿ ಮಾಡಬಯಸುವವರಿಗೆ ಈ ಹ್ಯಾಂಗಿಂಗ್‌ ಬ್ರಿಜ್‌ ಹೇಳಿ ಮಾಡಿಸಿದ ಸ್ಥಳ. ಒಟ್ಟಿನಲ್ಲಿ ನಿಮ್ಮ ಒಂದು ದಿನದ ರಜೆಯನ್ನು ಎಂಜಾಯ್‌ ಮಾಡಲು ಇದು ಸೂಕ್ತ ಸ್ಥಳ.

 ಪೂರ್ಣಿಮಾ ಪೆರ್ಣಂಕಿಲ

ಟಾಪ್ ನ್ಯೂಸ್

ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

Actor Rahul Bose:ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

TDY-10

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

1-sdsad

Guarantee; ಮಂತ್ರಿ ಪರಿಷತ್ ಸಭೆ: ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

1-sasad

Malaysia: ಪಾಕಿಸ್ತಾನ ಏರ್‌ಲೈನ್ಸ್ ಜೆಟ್ ಜಪ್ತಿ; ಪ್ರಯಾಣಿಕರು ಸಂಕಷ್ಟಕ್ಕೆ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಆಸ್ಪತ್ರೆಗೆ ದಾಖಲು!

MS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಆಸ್ಪತ್ರೆಗೆ !

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್‌ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್‌ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ವಾನ ಜಗದೊಳಗೆಒಂದು ಸುತ್ತಾಟ

ನಾವು ನೋಡಿದ ಸಿನಿಮಾ: ಶ್ವಾನ ಜಗದೊಳಗೆಒಂದು ಸುತ್ತಾಟ

costalwood-kangal

ಕೊರೊನಾ ಕಪಿಮುಷ್ಟಿಗೆ ಕಂಗಾಲು!

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

ಸಿಂಪಲ್‌ ಆಗಿ ಮಾಡಿ ಬಗೆಬಗೆಯ ದೋಸೆಗಳು

pingara-2

ತೆರೆಗೆ ಬರಲು ಅಣಿಯಾಗಿದೆ ಪಿಂಗಾರ

ponmudi

ಪೊನ್ಮುಡಿ ಪ್ರವಾಸಿ ತಾಣ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಪ್ರಿಯಕರನ ಮೇಲೆ ಬಿಸಿ ನೀರು ಎರಚಿದ ನರ್ಸ್‌! 

ಪ್ರಿಯಕರನ ಮೇಲೆ ಬಿಸಿ ನೀರು ಎರಚಿದ ನರ್ಸ್‌! 

ಮಳೆಗಾಲಕ್ಕೂ ಮುನ್ನ ಸಕಲ ಸಿದ್ಧತೆ: ರೋಗ ರುಜಿನ ತಡೆಗೆ ಆರೋಗ್ಯ ಇಲಾಖೆ ಒತ್ತು

ಮಳೆಗಾಲಕ್ಕೂ ಮುನ್ನ ಸಕಲ ಸಿದ್ಧತೆ: ರೋಗ ರುಜಿನ ತಡೆಗೆ ಆರೋಗ್ಯ ಇಲಾಖೆ ಒತ್ತು

ರಾಣಿಬೆನ್ನೂರ: ಋತುಸ್ರಾವದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ಮಂಜುಳಾ

ರಾಣಿಬೆನ್ನೂರ: ಋತುಸ್ರಾವದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ಮಂಜುಳಾ

ಟೀಸರ್‌ ಮತ್ತು ಹಾಡಿನಲ್ಲಿ ಅರಳಿದ ಹೂವುಗಳು

ಟೀಸರ್‌ ಮತ್ತು ಹಾಡಿನಲ್ಲಿ ಅರಳಿದ ಹೂವುಗಳು

crime (2)

Goaಕ್ಕೆ ಪ್ರವಾಸಕ್ಕೆಂದು ತೆರಳಿದ್ದ ತುಮಕೂರಿನ ಯುವಕ ಆತ್ಮಹತ್ಯೆ