ಜೀವನ ಸುಂದರವಾಗಲು ಉಳಿಪೆಟ್ಟು ಬೀಳಲೇಬೇಕು


Team Udayavani, Oct 29, 2018, 2:47 PM IST

29-october-12.gif

ಸಿಹಿಯಾದ ಗೆಲುವು ತುಂಬಾ ಕಷ್ಟ. ಆಳವಾಗಿರುವ ಗೆಲುವನ್ನು ಸಾಧಿಸಬೇಕಾದರೆ, ಅದಕ್ಕಿಂತ ಮೊದಲು ನಮ್ಮನ್ನು ಕಾಡುವ ಶಕ್ತಿಯನ್ನು ಭೇದಿಸಬೇಕು. ಆದರೆ ಈ ಮಧ್ಯೆ ನಮಗೆ ಸೋಲಾಗುವುದು ಎಂಬ ಭಯದಿಂದ ಶಸ್ತ್ರತ್ಯಾಗ ಮಾಡಬಾರದು. ‘ಕ್ರಿಸ್ಟಲ್‌ ಕ್ಲಿಯರ್‌’ ಎಂಬಂತೆ, ಸಮಾಜ ಯಾವತ್ತು ಸೋಲಿಗೆ ಪ್ರತಿಫ‌ಲ ನೀಡುವುದಿಲ್ಲ. ಒಂದು ಶ್ವೇತವರ್ಣದ ಬಟ್ಟೆ ಅಥವಾ ಗೋಡೆಗಳು ನಮ್ಮ ಕಣ್ಣ ಮುಂದಿದೆ ಎಂದು ಕೊಳ್ಳೋಣ, ನೀವಾಗಿ ಅಲ್ಲಿ ಒಂದು ಪೆನ್ನಿನಿಂದ ಗುರುತು ಮಾಡಿ ಅಲ್ಲಿ ನಮಗೆ ಮೊದಲು ಆ ಕಪ್ಪು ವರ್ತುಲ ಕಾಣುವುದೇ ಹೊರತು ಅದರ ಸುತ್ತ ಇರುವ ಶುಭ್ರ ಶ್ವೇತ ಬಣ್ಣ ಕಾಣದು.

ಇದು ಯಾರಾದರೂ ಸರಿ. ಜೀವನದ ಕುರಿತು ಎಷ್ಟೇ  ಬೋಧನೆ ಮಾಡುವವರೂ ಮೊದಲು ನೋಡುವುದೇ ಆ ಬಾಧಿತ ಅಂಶವನ್ನು ಎಂಬುದಂತು ನಿಜ. ಇದೇ ಪ್ರತಿಯೊಬ್ಬರ ಜೀವನದಲ್ಲೂ ನಡೆಯುತ್ತಿರುತ್ತದೆ. ಓರ್ವ ಜೀವನದಲ್ಲಿ ಒಂದು ಮೆಟ್ಟಿಲು ಕುಸಿತ ಅನುಭವಿಸಿದರೆ, ಅವನತ್ತ ಬೆರಳು ಮಾಡಿ ಹೀಯಾಳಿಸುವ ಕ್ರಮ ಇದೆ. ಶಿಲ್ಪಿಯಿಂದ ಸರಿಯಾಗಿ ಪೆಟ್ಟು ತಿಂದ ಶಿಲೆ ಮಾತ್ರ ನಾಳೆ ಸುಂದರ ಮೂರ್ತಿಯಾಗಿ ಎದ್ದು ನಿಲ್ಲುತ್ತದೆ. ಒಂದು ವೇಳೆ ಆ ಶಿಲೆ ಶಿಲ್ಪಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ, ನಾಲ್ಕು ಜನ ತುಳಿದು ಹೋಗುವ ಕಲ್ಲಾಗುತ್ತಿತ್ತು.

ವೈಫ‌ಲ್ಯದಿಂದ ಬದುಕಿನ ಪಾಠ
ನಾವು ಇತಿಹಾಸದುದ್ದಕ್ಕೂ ಶ್ರೇಷ್ಠ ಚಿಂತಕರನ್ನು ಹತ್ತಿರದಿಂದ ನೋಡಿದಾಗ, ವೈಫ‌ಲ್ಯವನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸುವ ಇಚ್ಛೆ ಬೇಕಾಗಿದೆ. ಅದು ಸಾಮಾನ್ಯವಾದ ಚಿಂತನೆಯಲ್ಲ. ವೈಫ‌ಲ್ಯ ಮತ್ತು ಸೋಲು ಜೀವನದ ಅತಿ ಶ್ರೇಷ್ಠ ಶಿಕ್ಷಕರು. ಆದರೆ ದುಃಖಕರವಾಗಿರುವ ಕಾರಣ ಜನರು ಅದರ ಹತ್ತಿರ ಹೋಗಲು ಬಯಸುವುದಿಲ್ಲ. ಸೋತಾಗ ಕುಗ್ಗದೇ ಯಾರೂ ಮುಂದಡಿಯಿಡುತ್ತಾರೆಯೋ ಅವರು ತಮ್ಮ ಸುಂದರ ಬದುಕಿನ ಶಿಲ್ಪಿಯಾಗುತ್ತಾರೆ. ಸಾಧನೆಯ ಶಿಖರವನ್ನು ಎರುವಲ್ಲಿ ಯಶಸ್ವಿಯಾಗುತ್ತಾರೆ.

ವಿನಾಯಿತಿಗಳೇ ಸೋಲು
ಬದುಕಿನಲ್ಲಿ ಸೋತಾಗ ನಮ್ಮನ್ನು ವಿನಾ ಪ್ರಶ್ನಿಸಲೆಂದೇ ಪದೇ ಪದೇ ಮಾತನಾಡಿಸುವವರು ಇರುತ್ತಾರೆ. ಆದರೆ ನಾವು ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಯಾರು ಇಂತಹ ಸವಾಲುಗಳನ್ನು ಸ್ವೀಕರಿಸುತ್ತಾರೋ ಅವರು ನಾಳೆ ಸಮಾಜದ ಪ್ರತಿನಿಧಿಯಾಗುತ್ತಾರೆ ಎಂಬುವುದರಲ್ಲಿ ಸಂಶಯವಿಲ್ಲ. ಸವಾಲುಗಳ ಸ್ವೀಕಾರ ಅಥವಾ ಸಾಧನೆಯ ಹಾದಿಯ ಜತೆ ನಾವು ಕಾಂಪ್ರಮೈಸ್‌ ಆಗಬಾರದು. ಇಂತಹ ಸಂದರ್ಭದಲ್ಲಿ ನಾವು ವಿನಾಯಿತಿ ಬಯಸಿದ್ದೇ ಆದರೆ, ಅದು ವಿಫ‌ಲತೆಯ ಮೊದಲ ಹೆಜ್ಜೆ ಎಂದೇ ಭಾವಿಸಬಹುದಾಗಿದೆ. ಎಡಿಸನ್‌ ಟಂಗ್‌ಸ್ಟನ್‌ ಬಲ್ಬನ್ನು ಆವಿಷ್ಕರಿಸುವ ಹಂತದಲ್ಲಿ ಹಲವು ಬಾರಿ ವಿಫ‌ಲನಾಗಿದ್ದ. ಆದರೆ ಕೊನೆಗೆ ಸಫ‌ಲನಾಗುತ್ತಾನೆ. ಈ ಕುರಿತು ಎಡಿಸನ್‌ ಹೇಳುವ ಮಾತು ಪ್ರತಿಯೊಬ್ಬನನ್ನು ಬಡಿದೆಬ್ಬಿಸುವಂತಿದೆ. ಒಂದು ಬಲ್ಬನ್ನು ಕಂಡುಹಿಡಿಯಲು ನಾನು ಅನುಭವಿಸಿದ ವಿಫ‌ಲತೆ ನನ್ನ ಪಾಲಿಗೆ ಸೋಲಾಗಿ ಕಾಣಲಿಲ್ಲ. ಬದಲಾಗಿ ಅಷ್ಟು ಅವಕಾಶಗಳು ನನಗೆ ಲಭಿಸಿತು ಎಂದು ವಿಶ್ಲೇಷಿಸುತ್ತಾರೆ. ಅವರ ಮೊದಲ ಆವಿಷ್ಕಾರ ಇಂದು ಹಲವು ಮನೆ- ಮನಗಳನ್ನು ಬೆಳಗಿತು, ಇನ್ನೂ ಬೆಳಗುತ್ತಿದೆ.

ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.