

Team Udayavani, Mar 21, 2020, 4:16 AM IST
ಬಹುಪಯೋಗಿಯಾದ ಅಡಿಕೆ ಮರವು ಇಂದು ಅನೇಕ ರೈತರಿಗೆ, ಕುಶಲ ಕರ್ಮಿಗಳಿಗೆ ವರದಾನವಾಗಿದೆ. ಅಡಿಕೆಯನ್ನು ಬೆಳೆದ ರೈತನಿಗೆ ವರದಾನವಾದರೆ, ಇನ್ನೂ ಅಡಿಕೆ ಮರ, ಎಲೆ ಹಾಗೂ ಅದರ ದಿಂಬುಗಳಿಂದ ಮನೆಯ ಪಿಠೊಪಕರಣಗಳನ್ನು ತಯಾರಿಸುವ ಮೂಲಕ ಅಡಿಕೆ ಕುಶಲ ಕರ್ಮಿಗಳಿಗೆ ವರದಾನವಾಗಿದೆ.
ಅಡಿಕೆಯನ್ನು ಕೇವಲ ಪಾನ್ಗಳಲ್ಲಿ ಮಾತ್ರ ಬಳಸಬಹುದು ಎಂಬ ಕಲ್ಪನೆ ತಪ್ಪು, ಅಡಿಕೆಯ ಮರದಿಂದ ಬಿದ್ದ ಎಲೆಗಳು, ದಿಂಬುಗಳಿಂದ ಪೀಠೊಪಕರಣಗಳನ್ನು ತಯಾರಿಸಲಾಗುತ್ತದೆ.
ಅಡಿಕೆ ಮರದ ಉರುವಲಿಗಾಗಿ, ಅಟ್ಟ ಕಟ್ಟಲು ಬಳಸ್ಪಲ್ಪಟ್ಟರೆ, ಪೂಜೆಗೆ ಕೂಡ ಅಡಿಕೆ ಸಿಂಗಾರ ಬಹು ಶ್ರೇಷ್ಠವಾದುದು.
ಅಡಿಕೆ ಮರದಿಂದ ಮನೆಯ ಪೀಠೊಪಕರಣಗಳ ಬಳಕೆಯಿಂದ ಮನೆಯ ಆಂತರಿಕ ಸೌಂದರ್ಯ ಹಾಗೂ ಮನೆಗೆ ಶ್ರೀಮಂತಿಕೆ ಕಳೆಯ ಜತೆಗೆ ಪರಿಸರ ಸ್ನೇಹಿಯಾದ ವಾತಾವರಣವನ್ನು ನಿರ್ಮಿಸಿಬಹುದಾಗಿದೆ.
ಏನೆಲ್ಲಾ ತಯಾರಿಸಬಹುದು
ಅಡಿಕೆ ಮರದಿಂದ ಮನೆಯ ಹೊರಾಂಗಣ ಗೇಟ್ ನಿರ್ಮಾಣ, ಮನೆಯ ಅಟ್ಟ ಕಟ್ಟಲು , ಟೇಬಲ್, ಕಬೋರ್ಡ್, ಮಂಚ ಹಾಗೂ ದೇವರ ಮನೆಯ ದೇವರ ಸ್ಥಾನ ಜತೆ ಜತೆಗೆ ಮುಂತಾದ ರೀತಿಯಾಗಿ ಉಪಕರಣಗಳನ್ನು ತಯಾರಿಸಬಹುದು. ಇದು ಕೂಡ ಮನೆಯ ಆರೋಗ್ಯಕ್ಕೆ ಒಳ್ಳೆಯದು.
ಇನ್ನು ಅಡಿಕೆ ಮರದಿಂದ ತಯಾರಿಸಲಾಗುವ ಪೀಠೊಪಕರಣಗಳ ಬಳಕೆ ಮನೆಯ ಪರಿಸರಕ್ಕೆ ಒಳ್ಳೆಯದು ಏಕೆಂದರೆ, ಮರದ ದಿಂಬುವಿನ ಪಿಠೊಪಕರಣಗಳಿಂದ ಮನೆಯ ಪರಿಸರವನ್ನು ಸುವ್ಯವಸ್ಥಿತವಾಗಿಡಬಹುದು.
ಬಾಳಿಕೆ
ಅಡಿಕೆ ಮರದ ಪಿಠೊಪಕರಣಗಳ ಬಳಕೆಯೂ, ಮನೆಯ ಪರಿಸರಕ್ಕೆ ಒಳ್ಳೆಯದು ಜತೆ ಜತೆಗೆ ಅತಿ ಹೆಚ್ಚು ದಿನಗಳು ಬಾಳಿಕೆ ಬರುತ್ತದೆ ಎಂದು ಕುಶಲ ಕರ್ಮಿಗಳು ಅಭಿಪ್ರಾಯಪಡುತ್ತಾರೆ. ಇನ್ನು ಅಡಿಕೆ ಮರದ ಪೀಠೊಪಕರಣಗಳನ್ನು ಸರಿಯಾಗಿ ಮೊದಲ ಮೂರು ವರ್ಷ ಚೆನ್ನಾಗಿ ನೋಡಿಕೊಂಡರೆ, ಸರಿ ಸುಮಾರು 20 ವರ್ಷಗಳ ಬಾಳಿಕೆ ಬರುತ್ತವೆ.
ಸಾಂಪ್ರಾದಾಯಿಕ ಸೌಂದರ್ಯ
ಮನೆಗಳಲ್ಲಿ ಲೋಹಗಳಿಂದ ತಯಾರಿಸಿದ ಪೀಠೊಪಕರಣಗಳ ಬಳಕೆಗಿಂತ ಮರದಿಂದ ತಯಾರಿಸಿದ ಪಿಠೊಪಕರಣಗಳು ಮನೆಯ ಸಾಂಪ್ರದಾಯಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ ಹಾಗೂ ಮನೆಯಲ್ಲಿ ಒಂದು ನೆಮ್ಮದಿಯ ವಾತಾವರಣವನ್ನು ತಂದು ಕೊಡುತ್ತದೆ.
Ad
ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ
ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್
Kasaragod: ಸಾರ್ವತ್ರಿಕ ಮುಷ್ಕರ: ಬಸ್ ಕೊರತೆ
ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ
Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು
You seem to have an Ad Blocker on.
To continue reading, please turn it off or whitelist Udayavani.