![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ದುಬಾರಿ ಪಾತ್ರೆಗಳ ನಿರ್ವಹಣೆಗೆ ಕೆಲವು ಟಿಪ್ಸ್
Team Udayavani, Aug 18, 2018, 2:22 PM IST
![18-agust-12.jpg](https://www.udayavani.com/wp-content/uploads/2018/08/18/18-agust-12.jpg)
ಅಡುಗೆ ಮನೆಯಲ್ಲಿ ದುಬಾರಿ ಮೌಲ್ಯದ ಪಾತ್ರೆಗಳಿಗೆ ಈಗ ಪ್ರಮುಖ ಸ್ಥಾನ ಸಿಕ್ಕಿದೆ. ತಟ್ಟೆ, ಲೋಟ ಸಹಿತ ಇನ್ನಿತರೆ ಅಡುಗೆ ಸಾಮಗ್ರಿಗಳು ಹೆಚ್ಚಾಗಿ ಚೀನಾಮೇಡ್ ಆಗಿರುತ್ತವೆ. ಚೀನಾ ಮೇಡ್ ಅಡುಗೆ ಪಾತ್ರೆಗಳಲ್ಲಿ ಶೇ. 30ರಷ್ಟನ್ನು ಪ್ರಾಣಿಗಳ ಮೂಳೆ ಉಳಿದಂತೆ ಗಟ್ಟಿ ಮಣ್ಣು ಬಳಸಿ ತಯಾರಿಸಿರುತ್ತಾರೆ. ಹೀಗೆ ತಯಾರಿಸಲಾದ ವಸ್ತುಗಳನ್ನು ದೀರ್ಘಕಾಲ ಬಳಿಕೆ ಬರುವಂತೆ ಮತ್ತು ಅವುಗಳ ಸೌಂದರ್ಯ ಹಾಳಾಗದಂತೆ ಉಳಿಸಿಕೊಳ್ಳುವುದಕ್ಕೆ ಇಲ್ಲಿವೆ ಕೆಲವು ಟಿಪ್ಸ್.
ಜೋಡಿಸಿ ಇಡುವಾಗ ಎಚ್ಚರ
ಇಂತ ಹ ಪಾತ್ರೆಗಳನ್ನು ಒಂದರ ಮೇಲೆ ಇನ್ನೊಂದನ್ನು ಜೋಡಿಸಿಟ್ಟಾಗ ಅವುಗಳು ಒಡೆಯುವುದು ಅಥವಾ ಬಿರುಕು ಬೀಳುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಈ ಪಾತ್ರೆ ಗಳ ಮಧ್ಯೆ ಮೃದುವಾದ ಕಾಗದಗಳು ಅಥವಾ ಟಿಶ್ಯೂಗಳನ್ನು ಬಳಸುವ ಮೂಲಕ ನಾವು ಅವುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.
ಭಾರವಾಗದಿರಲಿ
ಇನ್ನು ಟಿಶ್ಯೂ ಬಳಸಿ ಪಾತ್ರೆಗಳನ್ನು ಜೊಡಿಸುವಾಗಲೂ ಹೆಚ್ಚು ಭಾರವಾಗುವಂತೆ ಒಂದರ ಮೇಲೊಂದು ಇಡಬೇಡಿ. ಏಕೆಂದರೆ ಭಾರ ಹೆಚ್ಚಾಗಿ ಕೆಳಗಿನ ಪಾತ್ರೆಗಳು ಒಡೆಯುವ ಸಾಧ್ಯತೆಗಳೂ ಇರುತ್ತವೆ. ಅದರ ಬದಲು 6 ರಿಂದ 8 ಪಾತ್ರೆಗಳನ್ನಷ್ಟೇ ಒಂದು ಗುಂಪಿನಲ್ಲಿ ಜೋಡಿಸಿ.
ಪತ್ರಿಕೆಗಳನ್ನು ಉಜ್ಜಬೇಡಿ
ಪತ್ರಿಕೆಗಳ ಅಕ್ಷರಗಳಲ್ಲಿನ ಶಾಯಿ ಆರೋಗ್ಯದ ದೃಷ್ಟಿಯಿಂದ ಹಿತವಲ್ಲ. ಆ ಕಾರಣಕ್ಕಾಗಿ ಚೀನಾ ಪಾತ್ರೆಗಳ ಸೆಟ್ ಅನ್ನು ನ್ಯೂಸ್ ಪೇಪರ್ಗಳನ್ನು ಬಳಸಿ ಉಜ್ಜಬೇಡಿ. ಅವುಗಳಲ್ಲಿನ ಶಾಯಿಯ ವಿಷಕಾರಕ ಅಂಶಗಳು ತಿನ್ನುವ ಆಹಾರಕ್ಕೆ ಸೇರಿ ದೇಹವನ್ನು ಸೇರುತ್ತವೆ. ಹಾಗಾಗಿ ಈ ಬಗ್ಗೆ ಕಾಳಜಿ ವಹಿಸಿ.
ಅತೀ ತಂಪು/ ಹೆಚ್ಚು ಬಿಸಿ ನೀರು ಬಳಸಬೇಡಿ
ಪಾತ್ರೆಗಳನ್ನು ಆದಷ್ಟು ಸಾಮಾನ್ಯ ನೀರಿನಲ್ಲಿಯೇ ತೊಳೆಯಿರಿ. ಹೆಚ್ಚು ಬೆಚ್ಚಗಿನ ನೀರು ಮತ್ತು ಅತೀ ತಂಪಾಗಿರುವ ನೀರು ಇವೆರಡೂ ಪಾತ್ರೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ದುಬಾರಿ ಪಾತ್ರೆಗಳು ಸೌಂದರ್ಯ ಕಳೆದುಕೊಳ್ಳುತ್ತವೆ.
ಸಿಂಕ್ಗೆ ಮೃದು ಬಟ್ಟೆ ಹಾಸಿ
ಪಾತ್ರೆಗಳನ್ನು ತೊಳೆಯುವ ಸಂದರ್ಭದಲ್ಲಿ ವಾಷ್ ಬೇಸಿನ್ನ ಸಿಂಕ್ಗೆ ಮೃದುವಾದ ಬಟ್ಟೆ ಹಾಸಿ. ಏಕೆಂದರೆ, ಪಾತ್ರೆಗಳನ್ನು ಸೋಪ್ ಬಳಸಿ ತೊಳೆಯುವ ಸಂದರ್ಭದಲ್ಲಿ ಅವುಗಳು ಜಾರುವ ಸಂಭವಗಳೂ ಹೆಚ್ಚು. ಹೀಗೆ ಒಂದು ವೇಳೆ ಕೈತಪ್ಪಿ ಕೆಳಗೆ ಬಿದ್ದಾಗಲೂ ಯಾವುದೇ ಹಾನಿ ಸಂಭವಿಸದೇ ಇರಲು ಈ ದಾರಿ ಸೂಕ್ತ. ಅಲ್ಲದೆ ಪಾತ್ರೆಗಳನ್ನು ಉಜ್ಜಿಡುವುದಕ್ಕೂ ಮೃದು ಬಟ್ಟೆಗಳ ಬಳಕೆ ಉತ್ತಮ. ಇದರಿಂದ ಪಾತ್ರೆಗೆ ಗೆರೆ ಬೀಳುವ ಅಥವಾ ಹಾನಿಯಾಗುವುನ್ನು ತಪ್ಪಿಸಬಹುದು.
ಭುವನಾ ಬಾಬು ಪುತ್ತೂರು
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.