ದುಬಾರಿ ಪಾತ್ರೆಗಳ ನಿರ್ವಹಣೆಗೆ ಕೆಲವು ಟಿಪ್ಸ್‌ 


Team Udayavani, Aug 18, 2018, 2:22 PM IST

18-agust-12.jpg

ಅಡುಗೆ ಮನೆಯಲ್ಲಿ ದುಬಾರಿ ಮೌಲ್ಯದ ಪಾತ್ರೆಗಳಿಗೆ ಈಗ ಪ್ರಮುಖ ಸ್ಥಾನ ಸಿಕ್ಕಿದೆ. ತಟ್ಟೆ, ಲೋಟ ಸಹಿತ ಇನ್ನಿತರೆ ಅಡುಗೆ ಸಾಮಗ್ರಿಗಳು ಹೆಚ್ಚಾಗಿ ಚೀನಾಮೇಡ್‌ ಆಗಿರುತ್ತವೆ. ಚೀನಾ ಮೇಡ್‌ ಅಡುಗೆ ಪಾತ್ರೆಗಳಲ್ಲಿ ಶೇ. 30ರಷ್ಟನ್ನು ಪ್ರಾಣಿಗಳ ಮೂಳೆ ಉಳಿದಂತೆ ಗಟ್ಟಿ ಮಣ್ಣು ಬಳಸಿ ತಯಾರಿಸಿರುತ್ತಾರೆ. ಹೀಗೆ ತಯಾರಿಸಲಾದ ವಸ್ತುಗಳನ್ನು ದೀರ್ಘ‌ಕಾಲ ಬಳಿಕೆ ಬರುವಂತೆ ಮತ್ತು ಅವುಗಳ ಸೌಂದರ್ಯ ಹಾಳಾಗದಂತೆ ಉಳಿಸಿಕೊಳ್ಳುವುದಕ್ಕೆ ಇಲ್ಲಿವೆ ಕೆಲವು ಟಿಪ್ಸ್‌.

ಜೋಡಿಸಿ ಇಡುವಾಗ ಎಚ್ಚರ
ಇಂತ ಹ ಪಾತ್ರೆಗಳನ್ನು ಒಂದರ ಮೇಲೆ ಇನ್ನೊಂದನ್ನು ಜೋಡಿಸಿಟ್ಟಾಗ ಅವುಗಳು ಒಡೆಯುವುದು ಅಥವಾ ಬಿರುಕು ಬೀಳುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಈ ಪಾತ್ರೆ ಗಳ ಮಧ್ಯೆ ಮೃದುವಾದ ಕಾಗದಗಳು ಅಥವಾ ಟಿಶ್ಯೂಗಳನ್ನು ಬಳಸುವ ಮೂಲಕ ನಾವು ಅವುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.

ಭಾರವಾಗದಿರಲಿ 
ಇನ್ನು ಟಿಶ್ಯೂ ಬಳಸಿ ಪಾತ್ರೆಗಳನ್ನು ಜೊಡಿಸುವಾಗಲೂ ಹೆಚ್ಚು ಭಾರವಾಗುವಂತೆ ಒಂದರ ಮೇಲೊಂದು ಇಡಬೇಡಿ. ಏಕೆಂದರೆ ಭಾರ ಹೆಚ್ಚಾಗಿ ಕೆಳಗಿನ ಪಾತ್ರೆಗಳು ಒಡೆಯುವ ಸಾಧ್ಯತೆಗಳೂ ಇರುತ್ತವೆ. ಅದರ ಬದಲು 6 ರಿಂದ 8 ಪಾತ್ರೆಗಳನ್ನಷ್ಟೇ ಒಂದು ಗುಂಪಿನಲ್ಲಿ ಜೋಡಿಸಿ.

 ಪತ್ರಿಕೆಗಳನ್ನು ಉಜ್ಜಬೇಡಿ
ಪತ್ರಿಕೆಗಳ ಅಕ್ಷರಗಳಲ್ಲಿನ ಶಾಯಿ ಆರೋಗ್ಯದ ದೃಷ್ಟಿಯಿಂದ ಹಿತವಲ್ಲ. ಆ ಕಾರಣಕ್ಕಾಗಿ ಚೀನಾ ಪಾತ್ರೆಗಳ ಸೆಟ್‌ ಅನ್ನು ನ್ಯೂಸ್‌ ಪೇಪರ್‌ಗಳನ್ನು ಬಳಸಿ ಉಜ್ಜಬೇಡಿ. ಅವುಗಳಲ್ಲಿನ ಶಾಯಿಯ ವಿಷಕಾರಕ ಅಂಶಗಳು ತಿನ್ನುವ ಆಹಾರಕ್ಕೆ ಸೇರಿ ದೇಹವನ್ನು ಸೇರುತ್ತವೆ. ಹಾಗಾಗಿ ಈ ಬಗ್ಗೆ ಕಾಳಜಿ ವಹಿಸಿ.

ಅತೀ ತಂಪು/ ಹೆಚ್ಚು ಬಿಸಿ ನೀರು ಬಳಸಬೇಡಿ
ಪಾತ್ರೆಗಳನ್ನು ಆದಷ್ಟು ಸಾಮಾನ್ಯ ನೀರಿನಲ್ಲಿಯೇ ತೊಳೆಯಿರಿ. ಹೆಚ್ಚು ಬೆಚ್ಚಗಿನ ನೀರು ಮತ್ತು ಅತೀ ತಂಪಾಗಿರುವ ನೀರು ಇವೆರಡೂ ಪಾತ್ರೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ದುಬಾರಿ ಪಾತ್ರೆಗಳು ಸೌಂದರ್ಯ ಕಳೆದುಕೊಳ್ಳುತ್ತವೆ. 

ಸಿಂಕ್‌ಗೆ ಮೃದು ಬಟ್ಟೆ ಹಾಸಿ
ಪಾತ್ರೆಗಳನ್ನು ತೊಳೆಯುವ ಸಂದರ್ಭದಲ್ಲಿ ವಾಷ್‌ ಬೇಸಿನ್‌ನ ಸಿಂಕ್‌ಗೆ ಮೃದುವಾದ ಬಟ್ಟೆ ಹಾಸಿ. ಏಕೆಂದರೆ, ಪಾತ್ರೆಗಳನ್ನು ಸೋಪ್‌ ಬಳಸಿ ತೊಳೆಯುವ ಸಂದರ್ಭದಲ್ಲಿ ಅವುಗಳು ಜಾರುವ ಸಂಭವಗಳೂ ಹೆಚ್ಚು. ಹೀಗೆ ಒಂದು ವೇಳೆ ಕೈತಪ್ಪಿ ಕೆಳಗೆ ಬಿದ್ದಾಗಲೂ ಯಾವುದೇ ಹಾನಿ ಸಂಭವಿಸದೇ ಇರಲು ಈ ದಾರಿ ಸೂಕ್ತ. ಅಲ್ಲದೆ ಪಾತ್ರೆಗಳನ್ನು ಉಜ್ಜಿಡುವುದಕ್ಕೂ ಮೃದು ಬಟ್ಟೆಗಳ ಬಳಕೆ ಉತ್ತಮ. ಇದರಿಂದ ಪಾತ್ರೆಗೆ ಗೆರೆ ಬೀಳುವ ಅಥವಾ ಹಾನಿಯಾಗುವುನ್ನು ತಪ್ಪಿಸಬಹುದು.

 ಭುವನಾ ಬಾಬು ಪುತ್ತೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.