ಸಂಸ್ಥಾಪಕರ ದಿನಾಚರಣೆಯಲ್ಲಿ ಗಾನ ಸಿಂಚನ


Team Udayavani, Mar 23, 2018, 6:00 AM IST

3.jpg

ಔದ್ಯೋಗಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಮುನ್ನಡೆಯುವ ಅಗತ್ಯವನ್ನು ಮನಗಂಡಿರುವ ಅನೇಕ ಸಂಸ್ಥೆಗಳು ನಮ್ಮ ಲಲಿತಕಲೆಗಳನ್ನು ಪೋಷಿಸಲು ಮುಂದಾಗುತ್ತವೆ.ಈ ನಿಟ್ಟಿನಲ್ಲಿ “ಕರ್ಣಾಟಕ ಬ್ಯಾಂಕ್‌’ ಹಲವು ವರ್ಷಗಳಿಂದಲೂ ತಮ್ಮ ದೇಣಿಗೆ ಅಥವಾ ಪ್ರಾಯೋಜಕತ್ವದಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿರುವುದು ಹೆಮ್ಮೆಯ ಸಂಗತಿ.

ಫೆ.2ರಂದು “ಕರ್ಣಾಟಕ ಬ್ಯಾಂಕ್‌’ ಸಂಸ್ಥಾಪಕರ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸಿತು. ಅಪರಾಹ್ನದ ಮೊದಲ ಕಾರ್ಯಕ್ರಮವಾಗಿ “ಈಶ ಪೌಂಡೇಶನ್‌’ ಸಂಸ್ಥಾಪಕರಾದ “ಸದ್ಗುರು’ ಜಗ್ಗಿ ವಾಸುದೇವ ಅವರು ಉಪನ್ಯಾಸ ಮತ್ತು ಸೂಕ್ತ ಮಾರ್ಗದರ್ಶನವನ್ನು ನೀಡಿದರು.

ಅನಂತರ ಚೆನ್ನೈನ ರಂಜನಿ ಮತ್ತು ಗಾಯತ್ರಿ ಸಹೋದರಿಯರಿಂದ ದ್ವಂದ್ವ ಗಾಯನ ನಡೆಯಿತು. ಈ ಸೋದರಿಯರ ಕಛೇರಿಯೆಂದರೆ ಲಯ, ಶ್ರುತಿ ಶುದ್ಧವಾದ ಸೌಖ್ಯ ಸಂಗೀತದ ರಸದೌತಣವೇ ಸರಿ. ತಮ್ಮ ನವನವೀನವಾದ ನಿರೂಪಣಾ ವೈಖರಿಗಳಿಂದಾಗಿ ಮತ್ತು ರಾಗಗಳಲ್ಲಿ ಭಾವ ಸೌಂದರ್ಯವನ್ನು ತುಂಬಿ ಬಿಡುವ ಸೂಕ್ಷ್ಮ ಸಂವೇದನೆಗಳಿಂದಾಗಿ ಸಭಿಕರನ್ನು ಕಛೇರಿಯ ಕೊನೆಯವರೆಗೂ ಸೆರೆ ಹಿಡಿದಿಡುವಂತಹ ಅಪೂರ್ವ ಕಲಾವಿದೆಯರು.

ಶ್ರುತಿ ಲೀನತೆಯೊಂದಿಗೆ ಏಕೀಭವಿಸಿದ ನಾಟಿ ರಾಗದ (ಜಯ ಜಾನಕಿ) ರಚನೆಯೊಂದಿಗೆ ಕಛೇರಿ ಪ್ರಾರಂಭ. ನಾಮ (ಅನ್ನಪೂರ್ಣೆ)ಮತ್ತು ನಾಸಿಕಾ ಭೂಷಣ (ಮಾರವೈರಿ ರಮಣಿ) ಕೃತಿಗಳು ಉತ್ತಮವಾಗಿದ್ದವು. ಪ್ರಧಾನವಾಗಿ ಮೆರೆದ ರಾಗಗಳು ತೋಡಿ ಮತ್ತು ಮೋಹನ.ತೋಡಿಯ ಗಮಕಯುಕ್ತವಾದ ಆಲಾಪನೆ ಚಿಕ್ಕದಾಗಿದ್ದರೂ ಅದಕ್ಕೆ ಬೇರೆಯೇ ಮಗ್ಗುಲುಗಳಿಂದ ಹೊಸ ರೀತಿಯ ಆರೈಕೆ ನೀಡಿದವರು ರಂಜನಿ. ಘನವಾಗಿ ಮೂಡಿ ಬಂದ ಕೃತಿ. “ಕಾವೇರಿ ತೀರಮುಲನು’ ಎಂಬಲ್ಲಿ ಮಾಡಿದ ಆಕರ್ಷಕವಾದ ನೆರವಲ್‌ ಮತ್ತು ಸ್ವರ ವಿನ್ಯಾಸಗಳು ಮುದ ನೀಡಿದವು.

ಸಾಮಾನ್ಯವಾಗಿ ಮೋಹನ ರಾಗದಲ್ಲಿ (ನನು ಪಾಲಿಂಬ) ಆಲಾಪನೆಯಲ್ಲಿ ಅಲಂಕಾರಿಕವಾಗಿ ನುಸುಳಿ ಬಿಡುವ ಮೋಹನ ಕಲ್ಯಾಣಿಯ ಛಾಯೆ ಮೂಡದಂತೆ. ರಿ.ಗ.ಪ.ದ. ನಾಲ್ಕೇ ಸ್ವರಗಳ ಮೆಟ್ಟಿಲುಗಳಲ್ಲಿ ನಿಂತು ವಿಸ್ತರಿಸುತ್ತ ಜಂಟಿ ಪ್ರಯೋಗಗಳು ಮತ್ತು ತ್ವರಿತಗತಿಯ “ಆ’ಕಾರಗಳಿಂದ ಅಲಂಕೃತಗೊಂಡ ರೀತಿ ಅನನ್ಯವಾಗಿತ್ತು. ಸ್ವರ ವಿನಿಕೆಗಳಲ್ಲೂ ನೂತನವಾದ ವಿನ್ಯಾಸಗಳು, “ಪೊರುತ್ತಂ’ಗಳು ತಿಸ್ರ ಪ್ರಯೋಗಗಳು, ಕುರೈಪ್ಪುಗಳೇ ಮುಂತಾಗಿ ಲೆಕ್ಕಾಚಾರಗಳೇ ಪ್ರಧಾನವಾಗಿದ್ದರೂ ಯಾವುದೇ ಉದ್ವೇಗವಿಲ್ಲದೆ, ನಿರಾಳವಾಗಿ ನಸುನಗುತ್ತಲೇ ನಿರೂಪಿಸಿ ಬಿಡುವ ಗಾಯಕಿಯರು ಶ್ರೋತೃಗಳಿಗೆ ಸಂಭ್ರಮಾಶ್ಚರ್ಯ ಉಂಟು ಮಾಡಿದರು.

ಪರ್ಯಾಯವಾಗಿ ಹಾಡಲಾದ ಶುಭ ಪಂತುವರಾಳಿ ರಾಗದ ಆಲಾಪನೆಯ “ಗ್ರಹಭೇದ’ದಲ್ಲಿ, ಹಿತವಾಗಿ ಒಳಹೊಕ್ಕು ಅಷ್ಟೇ ನವಿರಾಗಿ ಹೊರಬಂದ “ಬೃಂದಾವನ ಸಾರಂಗ’ ರಸಗ್ರಾಹಿಗಳ ಮುಕ್ತ ಶ್ಲಾಘನೆಯನ್ನು ಪಡೆಯಿತು. “ತಾನಂ’ ಹಾಡಿದ ನಂತರ ಗಾಯಕಿಯರು “ಸತ್ಯ ಜ್ಞಾನಾನಂದಮ|ಯಂ… ಸರ್ವಂ ವಿಷ್ಣುಮ||ಯಂ” ಎಂಬ ಪಲ್ಲವಿಯನ್ನು ಆದಿ ತಾಳದಲ್ಲಿ ಸುಲಲಿತವಾಗಿ ಪ್ರಸ್ತುತ ಪಡಿಸಿದರು. ಸ್ವರ ವಿನಿಕಗಳಲ್ಲಿ ಮಾಲಿಕೆಯಾಗಿ ಮೂಡಿಬಂದ ಶಕುನ, ಕುಮಾರ ಕಲ್ಯಾಣಿ, ಸಿಂಧು ಭೈರವಿ ರಾಗಗಳು ತಮ್ಮ ಭಾವಗಳನ್ನು ಕೇಳುಗರ ಮನದಲ್ಲಿ ಆಳವಾಗಿ ಮುದ್ರಿಸಿದವು.

ತನಿ ಆವರ್ತನದಲ್ಲಿ ಡೆಲ್ಲಿ ಸಾಯಿರಾಂ (ಮೃದಂಗ) ಮತ್ತು ಚಂದ್ರಶೇಖರ ಶರ್ಮ (ಘಟ) ಪಾಂಡಿತ್ಯ ಪ್ರದರ್ಶಿಸಿದರು. ಭಿನ್ನ ಶೈಲಿಯಲ್ಲಿ ರಾಗ ಸಂಯೋಜಿಸಲಾದ ಖರಹರಪ್ರಿಯ (ನರ ಜನ್ಮ) ಶುದ್ಧ ಧನ್ಯಾಸಿ (ನಾರಾಯಣ) ದೇವರ ನಾಮಗಳು, “ಲಲಿತ’ ರಾಗದ ಭಜನ ಮತ್ತು “ಚಂದ್ರ ಕಂಸ’ ರಾಗದ ಅಭಂಗ್‌ ಲಘು ಪ್ರಸ್ತುತಿಗಳಾಗಿದ್ದು ಗಾಯಕಿಯರ ಮಧುರವಾದ ಧ್ವನಿಯಲ್ಲಿ ಮನೋಜ್ಞವಾಗಿ ಮೂಡಿಬಂದು ರಸಿಕರನ್ನು ಸಂಮೋಹನಗೊಳಿಸಿದವು. ಮುಖ್ಯ ಕಲಾವಿದೆಯರಿಗೆ ಸರಿಸಾಟಿಯಾಗಿ ವಯಲಿನ್‌ ನುಡಿಸಿದ ಎಚ್‌.ಎನ್‌. ಭಾಸ್ಕರ್‌ ಅಭಿನಂದನಾರ್ಹರು.

ಈ ಕಛೇರಿಯಲ್ಲಿ ಎರಡೆರಡು “ಮೈಕ್‌’ಗಳ ಪ್ರಭಾವದಿಂದ ಘಟ ಮತ್ತು ಮೃದಂಗದ ಶಬ್ದ ಹೆಚ್ಚಾಗಿ ಅತಿಯಾದ ಅಬ್ಬರವೆನಿಸಿತು ನೇರ ಪ್ರಸಾರದ ಪರದೆಗಳನ್ನು ವೇದಿಕೆಯ ಎಡ, ಬಲಗಳಲ್ಲಿ ಅಳವಡಿಸಿದ್ದರಾಗುತ್ತಿತ್ತು ಎಂದೆನಿಸಿತು. ಸಭಾಗಾಯನದಲ್ಲಿ ಶ್ರೋತೃಗಳು ಪ್ರೇಕ್ಷಕರೂ ಆಗಿರುತ್ತಾರಷ್ಟೆ? ಕಲಾವಿದೆಯರ ಹಿಂದಿನ ಪರದೆಯಲ್ಲಿ ಎಡೆಬಿಡದೆ ನಡೆಯುತ್ತಿದ್ದ ಬೃಹದಾಕಾರದ ಚಿತ್ರ ಸಂಚಲನಗಳಿಂದಾಗಿ ಸಭಿಕರ ಏಕಾಗ್ರತೆ ತಪ್ಪಿದಂತಾಗಿ ಉಂಟಾದ ಗೊಂದಲ ಋಣಾತ್ಮಕ ಅಂಶವೆನಿಸಿತು.

ಸರೋಜಾ ಆರ್‌. ಆಚಾರ್ಯ 

ಟಾಪ್ ನ್ಯೂಸ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.