ಹುಂಬತನದ ವ್ಯಂಗ್ಯ ವಿಡಂಬನೆ ಪುಕ್ಕಟೆ ಸಲಹೆ


Team Udayavani, Oct 26, 2018, 12:23 PM IST

pukkate-salahe-1.jpg

ವರ್ತಮಾನ ಘಟನೆಗಳನ್ನು ಇರಿಸಿಕೊಂಡು, ಸಮಕಾಲೀನ ಸಮಾಜದ ಮನಸ್ಥಿತಿಯನ್ನು ಹಾಸ್ಯಭರಿತ ಮಾತುಗಳ ಮೂಲಕ ತಿವಿಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ಎಚ್‌. ಡುಂಡಿರಾಜ್‌ ಅವರ ವಿಶಿಷ್ಟ ಶೈಲಿಯ ಮನಮುದಗೊಳಿಸುವ ನಾಟಕವನ್ನು ಲಾವಣ್ಯ(ರಿ.) ಬೈಂದೂರು ಇದರ ಹವ್ಯಾಸಿ ಯುವ ಕಲಾವಿದರು ಇತ್ತೀಚೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರದರ್ಶಿಸಿದರು. ಪ್ರಭಾವಶಾಲಿ ಇಲೆಕ್ಟ್ರಾನಿಕ್‌ ಮಾಧ್ಯಮಗಳ ಭರ್ಜರಿ ಪ್ರಚಾರವನ್ನು ಪಡೆದು ಯಶಸ್ಸಿನ ಶಿಖರದಲ್ಲಿ ಪ್ರತಿಷ್ಠಾಪಿಸಿಕೊಂಡಿರುವ ಜ್ಯೋತಿಷಿಗಳ ಭಂಡತನವನ್ನು ತೆರೆದಿಡುವ ನಾಟಕ ಸಭಿಕರನ್ನು ರಂಜಿಸಿತು.ಟಿವಿ ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ಪುಕ್ಕಟೆ ಸಲಹೆಗಾಗಿ ಮುಗಿಬೀಳುವ ಮೂರ್ಖ ಅಭಿಮಾನಿಗಳ ಹುಂಬತನವನ್ನು ತೆರೆದಿಡುವ ಡುಂಡಿರಾಜರ ಕಲ್ಪನೆಗೆ ಮೂರ್ತರೂಪ ಕೊಡಲು ಲಾವಣ್ಯ ಯುವ ಕಲಾವಿದರು ಶ್ರಮಿಸಿದರು.

ಆಕರ್ಷಕ ಉಡುಗೆ ತೊಟ್ಟು, ಕೈಗಳನ್ನು ಆಗಾಗ್ಗೆ ಹಿತಮಿತವಾಗಿ ಉಜ್ಜುತ್ತ ಹ್ಹಹ್ಹಹ್ಹ… ಎಂದು ಬಾಯಗಲಿಸಿ ಸೆಳೆಯುವ ಮೋಹಕ ನಗು ನಗುತ್ತಾ, ಠೀವಿಯಿಂದ ಕುಳಿತುಕೊಳ್ಳುವ ಭಂಗಿಗಳಿಂದ ಪ್ರೇಕ್ಷಕರ ಚಿತ್ತಾಕರ್ಷಿಸಿದ ಚಿನ್ನಾಭರಣಗಳಿಂದ ಅಲಂಕೃತ “ಟೈಮ್‌ ಪಾಸ್‌’ ಟಿವಿಯ ಪುಕ್ಕಟೆ ಜ್ಯೋತಿಷ್ಯ ಸಲಹೆಗಾರ ಲ್ಯಾಪಾನಂದ ಟಾಪಾನಂದ ಪರಮಾನಂದನಾಗಿ ಮೂರ್ತಿ ಬೈಂದೂರು ಭರಪೂರ ಮನರಂಜನೆ ನೀಡಿದರು. ಟಿವಿ ನಿರೂಪಕಿ ನೀರಾಳಾಗಿ ಸಲಹೆ ಪಡೆಯುವ ಮೂರ್ಖರ ದಡ್ಡತನಕ್ಕೆ ಕನ್ನಡಿ ಹಿಡಿದು ಪ್ರೌಢ ಅಭಿನಯದ ಮೂಲಕ ಚೈತ್ರಾ ನಾಟಕಕ್ಕೆ ಕಳೆಕಟ್ಟಿದರು.

ಪದಪುಂಜಗಳಿಂದಲೇ ಹಾಸ್ಯದ ಹೊನಲು ಹರಿಸುವ ಡುಂಡಿ ರಾಜ್‌ ಅವರ ಪಾತ್ರಗಳ ಸಂಭಾಷಣೆಗಳು, ಲ್ಯಾಪಾನಂದ ಟ್ಯಾಪಾನಂದ ಪರಮಾನಂದ, ತಲೆತಿಂತಾಯ ಎನ್ನುವಂತಹ ನಾಮಧೇಯಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದವು. ಬಸುರಿಯ ಸರ್ಜರಿ ಮಾಡಿ ಮಗು ತೆಗೆಯಲು ಶುಭ ಸಮಯ ಕೇಳುವ ಸಾವಿತ್ರಿ ಕತ್ರಿ(ಸ್ವಾತಿ ಅಡಿಗ), ತನಗೆ ಅವಾರ್ಡ್‌ ಯಾವಾಗ ಸಿಗಬಹುದು ಮತ್ತು ಅದಕ್ಕಾಗಿ ಏನು ಮಾಡಬೇಕು ಎಂದು ತಿಳಿಯಬಯಸುವ ಸಾಹಿತಿ ಚಿಕ್ಕ ಪುಟ್ಟಯ್ಯ (ಶಶಿಧರ ಕಾರಂತ್‌) ನಮ್ಮ ಸಮಾಜದಲ್ಲಿನ ವಿದ್ಯಾವಂತರ ಮೌಡ್ಯವನ್ನು ಗೇಲಿ ಮಾಡುತ್ತಾರೆ. ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿ ಜಂಪಣ್ಣ (ಗಣೇಶ ಪರಮಾನಂದ) ರಾಜಕಾರಣದ ಒಳಗುಟ್ಟನ್ನು ಬಯಲಿಗೆಳೆಯುತ್ತಾನೆ. ವರ್ಗಾವಣೆಗಾಗಿ ವರ್ಗ ಪೂಜೆ, ವರ್ಗಾವಣೆ ತಡೆಯಲು ತಿರ್ಗಾ ಪೂಜೆಯ ಡುಂಡಿಯವರ ಕಲ್ಪನೆಯ ಪ್ರವರಗಳು ನಗೆ ಉಕ್ಕಿಸುತ್ತದೆ. ಶರೀರದಲ್ಲಿ ಮಚ್ಚೆಯಿದೆಯೆಂಬುದನ್ನು ಒಪ್ಪಿಕೊಳ್ಳದ ಮಹಿಳೆಗೆ ಅದು ಮುಚ್ಚಿಕೊಂಡಿದೆಯೆಂದು ಮೂರ್ಖಳಾಗಿಸಿ ತಾನೇ ಆಕೆಯಲ್ಲಿಗೆ ಬರುವುದಾಗಿ ನಂಬಿಸಿ ವಿಳಾಸ ಕೇಳುವ ಜ್ಯೋತಿಷಿ ಅತ್ತ ಕಡೆಯಿಂದ ತನ್ನ ಮನೆಯ ಅಡ್ರೆಸ್‌ ಕೇಳಿ ಕುಸಿದು ಬೀಳುತ್ತಾನೆ. 

ಡುಂಡಿಯವರ ಹಾಸ್ಯಮಯ ನಾಟಕವನ್ನು ಲೇಖಕರ ಆಶಯಗಳಿಗನುಸಾರವಾಗಿ ರಂಗಕ್ಕೆ ಪರಿಚಯಿಸಿ ನಿರ್ದೇಶಿಸಿದ ಹಿರಿಯ ರಂಗಕರ್ಮಿ ಗಣೇಶ ಕಾರಂತರ ಶ್ರಮ ಎದ್ದು ಕಾಣುವಂತಿತ್ತು. ಉದಯ ಆಚಾರ್‌ ಅವರ ರಂಗ ಸಜ್ಜಿಕೆ ಮತ್ತು ಸುಮಂತ್‌ ಆಚಾರ್‌ ಅವರ ಬೆಳಕು ನಾಟಕದ ಯಶಸ್ಸಿಗೆ ಪೂರಕವಾದವು. ನಾಗೇಂದ್ರ ಕುಮಾರ್‌ ನೃತ್ಯ ಸಂಯೋಜನೆ ಮತ್ತು ತ್ರಿವಿಕ್ರಮ ಆರ್ಟ್ಸ್ ಉಪ್ಪುಂದ ಅವರ ಪ್ರಸಾಧನ ನಾಟಕಕ್ಕೆ ಮೆರುಗು ನೀಡಿತು. 

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.