ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’


Team Udayavani, Mar 20, 2020, 10:18 AM IST

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

ಹಿರಿಯ ವಯಲಿನ್‌ ವಿ| ವಸಂತಿ ರಾಮ ಭಟ್‌ ಅವರು ತಮ್ಮ ಜನ್ಮದಿನ ಮತ್ತು ಜನ್ಮ ನಕ್ಷತ್ರ ಈ ಎರಡೂ ಸಂದರ್ಭಗಳಲ್ಲಿ ಸಂಗೀತದ ರಸದೌತಣವನ್ನು ಆಯೋಜಿಸಿದ್ದರು. ಅಂತೆಯೇ ಈ ಸಂಗೀತ ವೈಭವವನ್ನು ವಿದ್ಯಾಧಿದೇವತೆ ಸರಸ್ವತಿಗೆ ಮತ್ತು ಗುರುಗಳಿಗೆ ಸಮರ್ಪಿಸಿದರು.

ನ.29 ರಂದು ಅವರ ನಿವಾಸದಲ್ಲಿ ಪಿಟೀಲಿನ ನಿನಾದವು ಅನುರಣಿಸಿತು. ಒಂದು ಗಂಟೆ ಕಾಲ ವಸಂತಿ ಭಟ್‌ ಅವರ ಶಿಷ್ಯರು ತಮ್ಮ ಸ್ತರಕ್ಕೆ ಅನುಗುಣವಾಗಿ ಪಿಳ್ಳಾರಿ ಗೀತೆಗಳಿಂದ ತೊಡಗಿ ದೇವರನಾಮದ ವರೆಗೆ ಸುಶ್ರಾವ್ಯವಾಗಿ ನುಡಿಸಿದರು.

ಅನಂತರ ಶ್ರೀ ವೇಣುಗೋಪಾಲ ಶಾನುಭೋಗ ಮತ್ತು ವಸಂತಿ ರಾಮ ಭಟ್‌ ಅವರಿಂದ ಜಂಟಿ ವಯಲಿನ್‌ ವಾದನ ನಡೆಯಿತು. ಈ ಇಬ್ಬರು ಕಲಾವಿದರದ್ದೂ ವಿಭಿನ್ನ ರೀತಿಯ ಪಾಠಾಂತರ. ಸ್ವಂತಿಕೆಯ ಬೇರುಗಳನ್ನು ನೀರೆರೆದು ಪೋಷಿಸುತ್ತ ಕೆಲವು ದಶಕಗಳಿಂದಲೂ ತಮ್ಮದೇ ಬಾನಿಯಲ್ಲಿ ಪಿಟೀಲು ನುಡಿಸಿದ ಅನುಭವ ಅವರದು. ಹಾಗಿದ್ದರೂ ಸುಮಾರು ಎರಡುವರೆ ಗಂಟೆ ಕಾಲ ಒಳ್ಳೆ ಹೊಂದಾಣಿಕೆಯಿಂದ ಅವರಿಬ್ಬರೂ ಒಂದು ಪರಿಪೂರ್ಣ ಕಛೇರಿಯನ್ನು ನೀಡಿದರು.

ಶಹನ ವರ್ಷಾದೊಂದಿಗೆ ಗತ್ತಿನ ಆರಂಭ. ಚಕ್ರವಾಕ (ಗಜಾನನ), ಗೌಳಿ ಪಂತು (ತೆರೆದೀಯಕ) ಅಠಾಣಾ (ಅನುಪಮ), ಕಾಪಿನಾರಾಯಣಿ (ಸರಸಸಾಮದಾನ) ಕೃತಿಗಳ ನಿರೂಪಣೆಯ ನಂತರ ಪಂತುವರಾಳಿಯಲ್ಲಿ ಪರ್ಯಾಯವಾಗಿ ರಾಗ ವಿಸ್ತರಿಸಿದ ಕಲಾವಿದರು ನಿನ್ನೇ ನೆರ ನಮ್ಮಿನಾನು ಕೃತಿ ಮತ್ತು ನೆರವೆಲ್‌ ಅನಂತರ, ಗಣಿತಯುಕ್ತವಾದ ಹತ್ತಾರು ಮುಕ್ತಾಯಗಳ ಸ್ವರವಿನಿಕೆಗಳನ್ನು ನೀಡಿ ರಂಜಿಸಿದರು. ತ್ವರಿತಗತಿಯ ಜಗನ್ಮೋಹಿನಿ (ಶೋಭಿಲ್ಲು ), ಚಂದ್ರ ಜ್ಯೋತಿ (ಬಾಗಾಯನಯ್ಯ) ಕೃತಿಗಳ ನಂತರ ರಾಗಂ-ತಾನಂ-ಪಲ್ಲವಿಗಾಗಿ ಕಾಂಭೋಜಿಯನ್ನು ಎತ್ತಿಕೊಳ್ಳಲಾಯಿತು. ರೂಢಿಗತವಾದ ಮನೋಧರ್ಮ ಸಂಚಾರಗಳನ್ನು ಪರ್ಯಾಯವಾಗಿ ನೇಯ್ದುಕೊಳ್ಳುತ್ತ ಬೆಳೆಸಲಾದ ಕಾಂಭೋಜಿಯ ರಾಗವಿಸ್ತಾರ ಮತ್ತು ಅನಂತರದ ತಾನಂ ರಸಿಕರಿಗೆ ಮುದ ನೀಡಿದವು.

ಹರೇ ರಾಮ ಗೋವಿಂದ ಮುರಾ| ರೇ… ಮುಕುಂದ ಮಾ||ಧವ… ಎಂಬ ಪಲ್ಲವಿಯನ್ನು ಚತುರಸ್ರ ತ್ರಿಪುಟ ತಾಳದಲ್ಲಿ ಕ್ರಮಬದ್ಧವಾಗಿ ನುಡಿಸಿದ ವಾದಕರು, ರಾಗಮಾಲಿಕೆಯಲ್ಲಿ ಸೊಗಸಾದ ಸ್ವರವಿನಿಕೆಗಳನ್ನು ನೀಡಿದರು.

ಈ ಕಛೇರಿಯ ಗರಿಮೆಗೆ ಅನುಗುಣವಾಗಿ ಉನ್ನತಮಟ್ಟದ ತನಿ ಆವರ್ತನವನ್ನು ನೀಡಿದ ಸೂರಳಿ ಗಣೇಶಮೂರ್ತಿ (ಮೃದಂಗ) ಮತ್ತು ಸೂರಳಿ ರಮಾಕಾಂತ್‌ (ಮೋರ್ಚಿಂಗ್‌) ಇಬ್ಬರೂ ಅಭಿನಂದನಾರ್ಹರು. ಒಂದೆರಡು ಲಘು ಪ್ರಸ್ತುತಿಗಳೊಂದಿಗೆ ಕಛೇರಿ ಕೊನೆಗೊಂಡಿತು. ಗಟ್ಟಿಮುಟ್ಟಾದ ತಳಹದಿಯನ್ನು ಹೊಂದಿದ್ದು, ಹಿಂದಿನ ದಶಕಗಳನ್ನು ನೆನಪಿಸಿದ ಈ ನುಡಿಸಾಣಿಕೆಯ ಸಾಂಗತ್ಯ ಒಂದು ವಿನೂತನ ಅನುಭವವಾಗಿತ್ತು.

ಡಿ.12ರಂದು ಉಡುಪಿಯ ನೂತನ ರವೀಂದ್ರ ಮಂಟಪದಲ್ಲಿ ಮೈಸೂರು ನಾಗರಾಜ್‌ ಮತ್ತು ಮೈಸೂರು ಮಂಜುನಾಥ್‌ ಸೋದರರಿಂದ ದ್ವಂದ್ವ ಪಿಟೀಲು ವಾದನ ನಡೆಯಿತು.

ಸಾವೇರಿ ವರ್ಣದ ನಂತರ ನಾಸಿಕಾಭೂಷಣಿಯ (ಮಾರ ವೈರಿ) ವಿವಾದಿಛಾಯೆಗಳ ಹೊಳಹುಗಳನ್ನು ಮತ್ತು ರೀತಿಗೌಳದ (ಜನನೀ ನಿನುವಿನಾ) ನೈಜಮಾಧುರ್ಯವನ್ನು ನಿಧಾನವಾಗಿ, ಎಸಳೆಸಳಾಗಿ ತೆರೆದಿಟ್ಟ ಕಲಾವಿದರು ಪ್ರಧಾನವಾಗಿ ಲತಾಂಗಿಯನ್ನು ಆಯ್ದುಕೊಂಡರು. (ಮರಿವೇರೆ – ಖಂಡಛಾಪು ತಾಳ).

ಉತ್ತಮ ರಾಗವಿಸ್ತಾರ, ಕೃತಿ ನಿರೂಪಣೆ ಮತ್ತು ವಿವಿಧ ನಡೆಗಳಲ್ಲಿ ನೀಡಲಾದ ಸ್ವರವಿನಿಕೆಗಳು ಲಯಪ್ರಿಯರ ಮೆಚ್ಚುಗೆಯನ್ನು ಪಡೆದವು. ರಾಗಂ-ತಾನಂ-ಪಲ್ಲವಿಗಾಗಿ ಭಾಗೇಶ್ರೀ ರಾಗವನ್ನು ಆಯ್ದುಕೊಂಡ ಕಲಾವಿದರು ತಮ್ಮ ವಿಸ್ತಾರವಾದ ಮನೋಧರ್ಮದ, ಅಂತೆಯೇ ಪಿಟೀಲನ್ನು ನೂತನವಾದ ಆಯಾಮಗಳಲ್ಲಿ ದುಡಿಸಿಕೊಳ್ಳುವ ಚಾಕಚಕ್ಯತೆಯಿಂದ ಅದ್ಭುತವಾದ ರಾಗ-ಹಂದರವನ್ನು ನಿರ್ಮಿಸಿ ಶ್ರೋತೃಗಳನ್ನು ಬೇರೆಯೇ ಗಾನ ಪ್ರಪಂಚಕ್ಕೆ ಕರೆದೊಯ್ದರು. ತಾನಂ ಅನಂತರ ಮಾ||ಧವ ಕೇಶವ ಉಡುಪಿ ಶ್ರೀ ಕೃ|ಷ್ಣಾ ವಾಸಂತಿ ಪ್ರಿಯ …|| ಎಂಬ ಅತೀತ ಎಡುಪ್ಪಿನ ಪಲ್ಲವಿಯನ್ನು ಆಗಿಂದಾಗಲೇ ರಚಿಸಿ – ಚತುರಸ್ರ ತ್ರಿಪೋಟಿ ತಾಳದಲ್ಲಿ ಅಚ್ಚುಕಟ್ಟಾಗಿ ನುಡಿಸಿದರು. ರಾಗಮಾಲಿಕೆಯಲ್ಲಿ (ನಾಟಕುರುಂಜಿ, ಹಮೀರ ಕಲ್ಯಾಣಿ, ಮಧುಕಂಸ) ವಿದ್ವತೂ³ರ್ಣವಾದ ಕಲ್ಪನಾ ಸ್ವರಗಳು ಕರ್ಣರಂಜಕವಾಗಿ ಮೂಡಿ ಬಂದವು.

ಕಛೇರಿಯ ಒಟ್ಟಂದಕ್ಕೆ ಪೂರಕವಾಗುವಂತೆ ಹದವರಿತು ಸಹವಾದನ ನೀಡಿದ ಕೆ.ಯು. ಜಯಚಂದ್ರ ರಾವ್‌ (ಮೃದಂಗ) ಮತ್ತು ಗಿರಿಧರ ಉಡುಪಿ (ಘಟಂ) ಇಬ್ಬರೂ ತನಿ ಆವರ್ತನದಲ್ಲೂ ನವೀನ ಪ್ರಯೋಗಗಳಿಂದ ರಸಿಕರನ್ನು ಬೆರಗುಗೊಳಿಸಿದರು.ದೇವರನಾಮ ಮತ್ತು ಸಿಂಧುಭೈರವಿ ತಿಲ್ಲಾನಾದೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸರೋಜ ಆರ್‌. ಆಚಾರ್ಯ

ಟಾಪ್ ನ್ಯೂಸ್

1-saadsad

India-Canada ಸಂಬಂಧ ಹದಗೆಡಿಸಲು ನಿಜ್ಜರ್‌ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

1-sdsad

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

tdy-13

Damadan Purva: ಈ ಗ್ರಾಮದ ಯುವತಿಯರನ್ನು ಮದುವೆಯಾದರೆ ಸಿಗುತ್ತೆ ಮನೆ, ಜಮೀನು, ಆಸ್ತಿ.!

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

1-saadsad

India-Canada ಸಂಬಂಧ ಹದಗೆಡಿಸಲು ನಿಜ್ಜರ್‌ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

1-sdsad

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

tdy-17

Sandalwood: ‘ಟಿಆರ್‌ಪಿ ರಾಮ’ನಿಗಾಗಿ ಮತ್ತೇ ಬಂದ್ರು ಮಹಾಲಕ್ಷ್ಮೀ

World Tourism Day: ಚಾರಣದ ಹುಚ್ಚು ಆರೋಗ್ಯಕ್ಕೆ ಒಳ್ಳೆಯದೇ…ಆದರೆ ಮೈಮರೆಯಬೇಡಿ!

World Tourism Day: ಚಾರಣದ ಹುಚ್ಚು ಆರೋಗ್ಯಕ್ಕೆ ಒಳ್ಳೆಯದೇ…ಆದರೆ ಮೈಮರೆಯಬೇಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.